ಸಂತ್ರಸ್ತರಿಗೆ ಬಿಜೆಪಿಯಿಂದ 15 ಟ್ರಕ್‌ ಸಾಮಗ್ರಿ ರವಾನೆ


Team Udayavani, Aug 22, 2018, 12:23 PM IST

santra-bjp.jpg

ಬೆಂಗಳೂರು: ಕೊಡಗಿನ ಸಂತ್ರಸ್ತ ಕುಟುಂಬಗಳಿಗೆ 15 ಟ್ರಕ್‌ಗಳಲ್ಲಿ ಅಗತ್ಯವಾದ ಆಹಾರ ಧಾನ್ಯ, ವಸ್ತುಗಳನ್ನು ಬಿಜೆಪಿ ನಗರ ಘಟಕ ಹಾಗೂ ನಗರ ಜಿಲ್ಲಾ ಘಟಕ ಮಂಗಳವಾರ ರವಾನಿಸಿತು. ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಕೇಂದ್ರ ಸಚಿವ ಅನಂತಕುಮಾರ್‌ ಅವರು ಸಾಮಗ್ರಿ ಹೊತ್ತ ವಾಹನಗಳಿಗೆ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಅನಂತಕುಮಾರ್‌, ಆತಿಥ್ಯಕ್ಕೆ ಹೆಸರಾಗಿದ್ದ ಕೊಡಗು ಇಂದು ಸರ್ವನಾಶದ ಅಂಚಿಗೆ ತಲುಪಿದೆ. ಅಲ್ಲಿನ ಸಂತ್ರಸ್ತರಿಗೆ ಬೆಂಗಳೂರಿನ ಜನ ಪ್ರೀತಿ, ವಿಶ್ವಾಸದಿಂದ ತಮ್ಮ ಕರ್ತವ್ಯವೆಂದು ನೆರವು ನೀಡಿದ್ದಾರೆ. ಇದು ಕೊಡುಗೆಯಲ್ಲ ಕರ್ತವ್ಯ. ಈ ರೀತಿಯ ಅನಾಹುತ ಸಂಭವಿಸಿದಾಗ ಮೊದಲಿಗೆ ಜೀವ ರಕ್ಷಣೆ, ಪರಿಹಾರ ಹಾಗೂ ಪುನರ್‌ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳಬೇಕು. ಅದರಂತೆ ಸದ್ಯ ಎರಡನೇ ಹಂತದಲ್ಲಿದ್ದು, ಮುಂದೆ ಪುನರ್‌ನಿರ್ಮಾಣಕ್ಕೆ ನೆರವಾಗಬೇಕಿದೆ ಎಂದು ಹೇಳಿದರು.

ವಿಶೇಷ ನೆರವಿಗೆ ಮನವಿ: ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಭಾರಿ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿಯಾಗಿ ವಿಶೇಷ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಕೊಡಗಿನಲ್ಲಿ ಹಾನಿಗೊಳಗಾದ ಮನೆ, ಗ್ರಾಮಗಳಲ್ಲಿ ನೆಲೆಸಿ ಹೊರಗೆ ಬರಲಾಗದ ಸ್ಥಿತಿಯಲ್ಲಿರುವವರಿಗೆ 15 ದಿನಕ್ಕಾಗುವಷ್ಟು ಅಗತ್ಯ ವಸ್ತುಗಳನ್ನು 15 ಟ್ರಕ್‌ಗಳಲ್ಲಿ ರವಾನಿಸಲಾಗುತ್ತಿದೆ. ಶಾಸಕ ಕೆ.ಜಿ.ಬೋಪಯ್ಯರವರ ಮನವಿಯಂತೆ ಪ್ರತ್ಯೇಕ ಕಿಟ್‌ ಸಿದ್ಧಪಡಿಸಿ ರವಾನಿಸಲಾಗುತ್ತಿದೆ.

ಕೊಡಗಿನ ಕೆಎಸ್‌ಆರ್‌ಟಿಸಿ ಗೋದಾಮಿಗೆ ವಸ್ತುಗಳನ್ನು ಸಾಗಿಸಿ ಅಲ್ಲಿಂದ 1000 ಕಾರ್ಯಕರ್ತರು ಸಂತ್ರಸ್ತ ಕುಟುಂಬಗಳಿಗೆ ರವಾನಿಸಲಿದ್ದಾರೆ. ಅಗತ್ಯ ವಸ್ತುಗಳು ಕಳುವಾಗುತ್ತಿವೆ ಎಂಬ ವರದಿಯಿದ್ದು, ಎಚ್ಚರ ವಹಿಸಲಾಗುವುದು. ನಿರಾಶ್ರಿತರ ಕೇಂದ್ರದ ಬದಲಿಗೆ ಸಂತ್ರಸ್ತರಿಗೆ ನೇರವಾಗಿ ವಸ್ತುಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.

ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ್‌ರೆಡ್ಡಿ, ಎಂ. ಕೃಷ್ಣಪ್ಪ, ಉದಯ್‌ ಗರುಡಾಚಾರ್‌, ಲೆಹರ್‌ಸಿಂಗ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, ಹಲವು ಕಾರ್ಪೋರೇಟರ್‌ಗಳು ಉಪಸ್ಥಿತರಿದ್ದರು.

ಎರಡು ಲಾರಿ ಜನರಿಕ್‌ ಔಷಧ: ಕೇರಳ ಹಾಗೂ ಕೊಡಗಿಗೆ ಪ್ರತ್ಯೇಕವಾಗಿ ಎರಡು ಟ್ರಕ್‌ಗಳಲ್ಲಿ ಜನರಿಕ್‌ ಔಷಧಗಳನ್ನು ಬುಧವಾರ ರವಾನಿಸಲಾಗುವುದು. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಎಚ್‌ಐವಿ ಸೋಂಕಿತರ ಔಷಧಿ, ಮಲೇರಿಯಾ, ಹೃದಯ- ಶ್ವಾಸಕೋಶ ಸಂಬಂಧಿ ಔಷಧಗಳನ್ನು ಕೇಂದ್ರ ಸರ್ಕಾರದ ವತಿಯಿಂದ ರವಾನಿಸಲಾಗುವುದು. ಇದರ ಒಟ್ಟು ಬೆಲೆ ಒಂದು ಕೋಟಿ ರೂ. ಆಗಲಿದೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ 3 ಕೋಟಿ ರೂ. ಮೀರುತ್ತದೆ.
– ಅನಂತ ಕುಮಾರ್‌, ಕೇಂದ್ರ ಸಚಿವ

ರವಾನಿಸಿದ ಪ್ರಮುಖ ವಸ್ತುಗಳು: 10 ಕೆ.ಜಿ. ಅಕ್ಕಿ- 5000 ಬ್ಯಾಗ್‌; 25 ಕೆ.ಜಿ. ಅಕ್ಕಿ- 750 ಬ್ಯಾಗ್‌; 50 ಕೆ.ಜಿ. ಅಕ್ಕಿ- 250 ಬ್ಯಾಗ್‌; ತೊಗರಿ ಬೇಳೆ 1 ಕೆ.ಜಿ. ಪೊಟ್ಟಣ- 6000 ಬ್ಯಾಗ್‌; ತೊಗರಿ ಬೇಳೆ 50 ಕೆ.ಜಿ.- 150 ಬ್ಯಾಗ್‌. ಗೋಧಿ ಹಿಟ್ಟು 1 ಕೆ.ಜಿ.- 4000 ಬ್ಯಾಗ್‌. ಗೋಧಿ ಹಿಟ್ಟು 10 ಕೆ.ಜಿ.- 1,500 ಬ್ಯಾಗ್‌; ಒಂದು ಲೀಟರ್‌ ಅಡುಗೆ ಎಣ್ಣೆ- 9000 ಬ್ಯಾಗ್‌; ಬ್ಲಾಂಕೆಟ್‌- 2,800; ಬೆಡ್‌ಶೀಟ್‌- 1650; ಶರ್ಟು, ಪ್ಯಾಂಟ್‌, ಚೂಡಿದಾರ್‌, ಸೀರೆ, ಔಷಧ, ಕೊಡೆ, ಬಕೆಟ್‌, ಚಪ್ಪಲಿ, ಟವೆಲ್‌ ಇತರೆ- 10,000. ಜತೆಗೆ ಪೆನಾಯಿಲ್‌, ಸೊಳ್ಳೆ ಬತ್ತಿ, ಮೇಣದ ಬತ್ತಿ, ಸ್ವೆಟರ್‌, ಚಾಪೆ, ಟಾರ್ಚ್‌ ಇತರೆ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.