ಸಂತ್ರಸ್ತರಿಗೆ ಬಿಜೆಪಿಯಿಂದ 15 ಟ್ರಕ್ ಸಾಮಗ್ರಿ ರವಾನೆ
Team Udayavani, Aug 22, 2018, 12:23 PM IST
ಬೆಂಗಳೂರು: ಕೊಡಗಿನ ಸಂತ್ರಸ್ತ ಕುಟುಂಬಗಳಿಗೆ 15 ಟ್ರಕ್ಗಳಲ್ಲಿ ಅಗತ್ಯವಾದ ಆಹಾರ ಧಾನ್ಯ, ವಸ್ತುಗಳನ್ನು ಬಿಜೆಪಿ ನಗರ ಘಟಕ ಹಾಗೂ ನಗರ ಜಿಲ್ಲಾ ಘಟಕ ಮಂಗಳವಾರ ರವಾನಿಸಿತು. ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ಕೇಂದ್ರ ಸಚಿವ ಅನಂತಕುಮಾರ್ ಅವರು ಸಾಮಗ್ರಿ ಹೊತ್ತ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅನಂತಕುಮಾರ್, ಆತಿಥ್ಯಕ್ಕೆ ಹೆಸರಾಗಿದ್ದ ಕೊಡಗು ಇಂದು ಸರ್ವನಾಶದ ಅಂಚಿಗೆ ತಲುಪಿದೆ. ಅಲ್ಲಿನ ಸಂತ್ರಸ್ತರಿಗೆ ಬೆಂಗಳೂರಿನ ಜನ ಪ್ರೀತಿ, ವಿಶ್ವಾಸದಿಂದ ತಮ್ಮ ಕರ್ತವ್ಯವೆಂದು ನೆರವು ನೀಡಿದ್ದಾರೆ. ಇದು ಕೊಡುಗೆಯಲ್ಲ ಕರ್ತವ್ಯ. ಈ ರೀತಿಯ ಅನಾಹುತ ಸಂಭವಿಸಿದಾಗ ಮೊದಲಿಗೆ ಜೀವ ರಕ್ಷಣೆ, ಪರಿಹಾರ ಹಾಗೂ ಪುನರ್ನಿರ್ಮಾಣವನ್ನು ಹಂತ ಹಂತವಾಗಿ ಕೈಗೊಳ್ಳಬೇಕು. ಅದರಂತೆ ಸದ್ಯ ಎರಡನೇ ಹಂತದಲ್ಲಿದ್ದು, ಮುಂದೆ ಪುನರ್ನಿರ್ಮಾಣಕ್ಕೆ ನೆರವಾಗಬೇಕಿದೆ ಎಂದು ಹೇಳಿದರು.
ವಿಶೇಷ ನೆರವಿಗೆ ಮನವಿ: ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಭಾರಿ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ವಿಶೇಷ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಕೊಡಗಿನಲ್ಲಿ ಹಾನಿಗೊಳಗಾದ ಮನೆ, ಗ್ರಾಮಗಳಲ್ಲಿ ನೆಲೆಸಿ ಹೊರಗೆ ಬರಲಾಗದ ಸ್ಥಿತಿಯಲ್ಲಿರುವವರಿಗೆ 15 ದಿನಕ್ಕಾಗುವಷ್ಟು ಅಗತ್ಯ ವಸ್ತುಗಳನ್ನು 15 ಟ್ರಕ್ಗಳಲ್ಲಿ ರವಾನಿಸಲಾಗುತ್ತಿದೆ. ಶಾಸಕ ಕೆ.ಜಿ.ಬೋಪಯ್ಯರವರ ಮನವಿಯಂತೆ ಪ್ರತ್ಯೇಕ ಕಿಟ್ ಸಿದ್ಧಪಡಿಸಿ ರವಾನಿಸಲಾಗುತ್ತಿದೆ.
ಕೊಡಗಿನ ಕೆಎಸ್ಆರ್ಟಿಸಿ ಗೋದಾಮಿಗೆ ವಸ್ತುಗಳನ್ನು ಸಾಗಿಸಿ ಅಲ್ಲಿಂದ 1000 ಕಾರ್ಯಕರ್ತರು ಸಂತ್ರಸ್ತ ಕುಟುಂಬಗಳಿಗೆ ರವಾನಿಸಲಿದ್ದಾರೆ. ಅಗತ್ಯ ವಸ್ತುಗಳು ಕಳುವಾಗುತ್ತಿವೆ ಎಂಬ ವರದಿಯಿದ್ದು, ಎಚ್ಚರ ವಹಿಸಲಾಗುವುದು. ನಿರಾಶ್ರಿತರ ಕೇಂದ್ರದ ಬದಲಿಗೆ ಸಂತ್ರಸ್ತರಿಗೆ ನೇರವಾಗಿ ವಸ್ತುಗಳನ್ನು ತಲುಪಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ್ರೆಡ್ಡಿ, ಎಂ. ಕೃಷ್ಣಪ್ಪ, ಉದಯ್ ಗರುಡಾಚಾರ್, ಲೆಹರ್ಸಿಂಗ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ, ಹಲವು ಕಾರ್ಪೋರೇಟರ್ಗಳು ಉಪಸ್ಥಿತರಿದ್ದರು.
ಎರಡು ಲಾರಿ ಜನರಿಕ್ ಔಷಧ: ಕೇರಳ ಹಾಗೂ ಕೊಡಗಿಗೆ ಪ್ರತ್ಯೇಕವಾಗಿ ಎರಡು ಟ್ರಕ್ಗಳಲ್ಲಿ ಜನರಿಕ್ ಔಷಧಗಳನ್ನು ಬುಧವಾರ ರವಾನಿಸಲಾಗುವುದು. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಎಚ್ಐವಿ ಸೋಂಕಿತರ ಔಷಧಿ, ಮಲೇರಿಯಾ, ಹೃದಯ- ಶ್ವಾಸಕೋಶ ಸಂಬಂಧಿ ಔಷಧಗಳನ್ನು ಕೇಂದ್ರ ಸರ್ಕಾರದ ವತಿಯಿಂದ ರವಾನಿಸಲಾಗುವುದು. ಇದರ ಒಟ್ಟು ಬೆಲೆ ಒಂದು ಕೋಟಿ ರೂ. ಆಗಲಿದೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ 3 ಕೋಟಿ ರೂ. ಮೀರುತ್ತದೆ.
– ಅನಂತ ಕುಮಾರ್, ಕೇಂದ್ರ ಸಚಿವ
ರವಾನಿಸಿದ ಪ್ರಮುಖ ವಸ್ತುಗಳು: 10 ಕೆ.ಜಿ. ಅಕ್ಕಿ- 5000 ಬ್ಯಾಗ್; 25 ಕೆ.ಜಿ. ಅಕ್ಕಿ- 750 ಬ್ಯಾಗ್; 50 ಕೆ.ಜಿ. ಅಕ್ಕಿ- 250 ಬ್ಯಾಗ್; ತೊಗರಿ ಬೇಳೆ 1 ಕೆ.ಜಿ. ಪೊಟ್ಟಣ- 6000 ಬ್ಯಾಗ್; ತೊಗರಿ ಬೇಳೆ 50 ಕೆ.ಜಿ.- 150 ಬ್ಯಾಗ್. ಗೋಧಿ ಹಿಟ್ಟು 1 ಕೆ.ಜಿ.- 4000 ಬ್ಯಾಗ್. ಗೋಧಿ ಹಿಟ್ಟು 10 ಕೆ.ಜಿ.- 1,500 ಬ್ಯಾಗ್; ಒಂದು ಲೀಟರ್ ಅಡುಗೆ ಎಣ್ಣೆ- 9000 ಬ್ಯಾಗ್; ಬ್ಲಾಂಕೆಟ್- 2,800; ಬೆಡ್ಶೀಟ್- 1650; ಶರ್ಟು, ಪ್ಯಾಂಟ್, ಚೂಡಿದಾರ್, ಸೀರೆ, ಔಷಧ, ಕೊಡೆ, ಬಕೆಟ್, ಚಪ್ಪಲಿ, ಟವೆಲ್ ಇತರೆ- 10,000. ಜತೆಗೆ ಪೆನಾಯಿಲ್, ಸೊಳ್ಳೆ ಬತ್ತಿ, ಮೇಣದ ಬತ್ತಿ, ಸ್ವೆಟರ್, ಚಾಪೆ, ಟಾರ್ಚ್ ಇತರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!