ನೀರು ನಿರ್ವಹಣೆಗೆ ಬಿಎಂಟಿಸಿ ಸಂಸ್ಕರಣೆ ನಡೆ


Team Udayavani, Apr 17, 2017, 12:16 PM IST

bmtc-bus-wash.jpg

ಬೆಂಗಳೂರು: ನಗರದೆಲ್ಲೆಡೆ ನೀರಿಗೆ ಹಾಹಾಕಾರ ಕೇಳಿಬರುತ್ತಿದೆ. ಆದರೆ, ಆರು ಸಾವಿರ ಬಸ್‌ಗಳ ಸ್ವತ್ಛತೆಗೆ ನಿತ್ಯ ಲಕ್ಷಾಂತರ ಲೀಟರ್‌ ನೀರು ಸುರಿಯುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಈ ಸಮಸ್ಯೆ ಇಲ್ಲ. ಲಭ್ಯವಿರುವ ನೀರನ್ನು ವ್ಯವಸ್ಥಿತವಾಗಿ ಬಳಸುತ್ತಿ­ರುವ ಬಿಎಂಟಿಸಿ ಪ್ರತಿನಿತ್ಯ ಎರಡೂವರೆ ಲಕ್ಷ ಲೀಟರ್‌ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿದೆ. ಹೀಗಾಗಿ, ಸಂಸ್ಥೆಗೆ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ.  

ಬಿಎಂಟಿಸಿ ವ್ಯಾಪ್ತಿಯಲ್ಲಿ ಶಾಂತಿನಗರ ಸೇರಿದಂತೆ ಎಲ್ಲ 43 ಘಟಕಗಳಲ್ಲೂ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ದು, ಬಳಕೆಯಾದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಈ ಮೂಲಕ ನಿತ್ಯ ಎರಡೂವರೆ ಲಕ್ಷ ಲೀಟರ್‌ ನೀರನ್ನು ಉಳಿತಾಯ ಮಾಡುತ್ತಿದೆ. ಇದು ಪ್ರತಿ ದಿನ ನಗರದಲ್ಲಿ ಸುಮಾರು 20ರಿಂದ 25 ಸಾವಿರ ಕುಟುಂಬಗಳಿಗೆ ಪೂರೈಕೆಯಾಗುವ ನೀರಿಗೆ ಸರಿಸಮವಾಗಿದೆ. 

ಸಂಸ್ಥೆಯಲ್ಲಿ ವೋಲ್ವೊ, ಸಾಮಾನ್ಯ ಸೇರಿದಂತೆ 6,400 ಬಸ್‌ಗಳಿವೆ. ಮೂಲಗಳ ಪ್ರಕಾರ ಒಂದೊಂದು ಡಿಪೋದಲ್ಲಿ 150ರಿಂದ 180 ಬಸ್‌ಗಳಿವೆ. ಇವುಗಳು ರಸ್ತೆಗಿಳಿಯುವ ಮುನ್ನ ಕಡ್ಡಾಯವಾಗಿ ನೀರಿನಿಂದ ವಾಷಿಂಗ್‌ ಮಾಡಲಾಗುತ್ತದೆ. ಪ್ರತಿ ಡಿಪೋದಲ್ಲಿ ಬಸ್‌ಗಳನ್ನು ಶುಚಿಗೊಳಿಸಲಿಕ್ಕಾಗಿಯೇ 6 ಸಾವಿರ ಲೀ. ನೀರು ಪೋಲಾಗುತ್ತದೆ. ಅಂದರೆ 2.58 ಲಕ್ಷ ಲೀ. ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವಾಗ ಹನಿ ನೀರೂ ಅಮೂಲ್ಯ.

ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ಸಂಸ್ಕರಣಾ ಘಟಕಗಳನ್ನು ವ್ಯವಸ್ಥಿತವಾಗಿ ಅನುಸರಿಸು­ತ್ತಿದ್ದು, ನೀರಿನ ಉಳಿತಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಹುತೇಕ ಎಲ್ಲ ಡಿಪೋಗಳಲ್ಲಿ ಕೊಳವೆಬಾವಿಗಳಿವೆ. ಅವುಗಳಿಂದ ಅಥವಾ ಜಲಮಂಡಳಿಯಿಂದ ಈ ಮೊದಲು ಬಸ್‌ ವಾಷಿಂಗ್‌ಗೆ ನೀರು ಪೂರೈಕೆ ಆಗುತ್ತಿತ್ತು. ಆದರೆ, ನೀರಿನ ಹಾಹಾಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಮರುಬಳಕೆ ವ್ಯವಸ್ಥೆ ಅಳವಡಿಸಲಾ­ಯಿತು.

ಮೊದಲಿನಿಂದಲೂ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಇತ್ತು. ಈಗ ಅವುಗಳನ್ನು ನವೀಕರಿಸಿ, ಅತ್ಯಾಧುನಿಕ ಮಾದರಿಗಳಲ್ಲಿ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಟೆಂಡರ್‌ ಕರೆಯ­ಲಾಗಿದೆ ಎಂದು ಬಿಎಂಟಿಸಿ ಮುಖ್ಯ ತಾಂತ್ರಿಕ ಅಧಿಕಾರಿ ಕೃಷ್ಣಯ್ಯ ಶೆಟ್ಟಿ ಸ್ಪಷ್ಟಪಡಿಸುತ್ತಾರೆ. ಒಟ್ಟಾರೆ ಮೂರು ಹಂತಗಳಲ್ಲಿ ಈ ನೀರು ಸಂಸ್ಕರಣೆಗೊಳ್ಳುತ್ತದೆ. ಬಸ್‌ ವಾಷಿಂಗ್‌ ಅನ್ನು ಅಟೋ­ಮೆಟಿಕ್‌ ಮಷಿನ್‌ ಮೂಲಕ ಮಾಡಲಾಗುತ್ತಿದೆ. ಹೀಗೆ ಶುಚಿಗೊಳಿಸಿದ ನಂತರ ಕಲುಷಿತಗೊಂಡ ನೀರು ನೇರವಾಗಿ ಸಂಸ್ಕರಣಾ ಘಟಕದ ಮೊದಲ ಟ್ಯಾಂಕ್‌ಗೆ ಹೋಗುತ್ತದೆ.

ಇಲ್ಲಿಗೆ ಬರುವ ನೀರು ಮಣ್ಣು, ಆಯಿಲ್‌ ಸೇರಿದಂತೆ ಮೋರಿ ನೀರಿನಂತೆ ಕಲುಷಿತಗೊಂಡಿರುತ್ತದೆ. ಅದಕ್ಕೆ ರಾಸಾಯನಿಕ ಪೌಡರ್‌ ಹಾಕಲಾಗುತ್ತದೆ. ಆಗ ಆ ನೀರು ಕೆಲಹೊತ್ತಿನಲ್ಲಿ ತಿಳಿಯಾಗುತ್ತದೆ. ನಂತರ ಮತ್ತೂಂದು ಟ್ಯಾಂಕ್‌ಗೆ ಹರಿಸಿ, ದ್ರವರೂಪದ ರಾಸಾಯನಿಕ ಅಂಶವನ್ನು ಮಿಶ್ರಣ ಮಾಡಲಾಗುವುದು. ಇದರಿಂದ ನೀರು ಶೇ. 60ರಷ್ಟು ಶುದ್ಧಗೊಳ್ಳುತ್ತದೆ. ತದನಂತರ 3ನೇ ಹಂತದಲ್ಲಿ ಬ್ಯಾಕ್ಟೀರಿಯಾ ನಾಶಕ್ಕಾಗಿ ಮತ್ತೂಂದು ಹಂತದ ಕೆಮಿಕಲ್‌ ಹಾಕಲಾಗುತ್ತದೆ.

ಇಲ್ಲೂ ಅವ್ಯವಹಾರ?
ನೀರಿನ ಸಂಸ್ಕರಣಾ ಘಟಕಗಳ ನಿರ್ವಹಣೆಯಲ್ಲೂ ಬಿಎಂಟಿಸಿಯಲ್ಲಿ ಅಕ್ರಮದ ವಾಸನೆ ಬರುತ್ತಿದೆ! ಸಂಸ್ಕರಣಾ ಘಟಕಗಳಿಗೆ ರಾಸಾಯನಿಕ ಪದಾರ್ಥ ಪೂರೈಕೆ ಗುತ್ತಿಗೆ ಖಾಸಗಿ ಕಂಪನಿಗೆ ನೀಡಲಾಗಿತ್ತು. ಆದರೆ, ಆ ಕಂಪನಿ, ಐದು ವಿಭಾಗಗಳಿಗೆ ಒಂದೊಂದು ರೀತಿಯ ಬಿಲ್‌ ಹಾಕು ತ್ತಿತ್ತು. ಇದರಿಂದ ಬಿಎಂಟಿಸಿಗೆ ನಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ 43 ಡಿಪೋಗಳಿಗೆ ಒಂದೇ ಮಾದರಿಯನ್ನು ಅನುಸರಿಸುವ ಸಂಬಂಧ ಹೊಸದಾಗಿ ಟೆಂಡರ್‌ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಮಳೆ ನೀರು ಕೊಯ್ಲೂ ಇದೆ
ಬಿಎಂಟಿಸಿಯ ಎಲ್ಲ ಡಿಪೋಗಳಲ್ಲೂ ಮಳೆ ನೀರು ಕೊಯ್ಲು ಕೂಡ ಇದೆ. ಹೀಗೆ ಸಂಗ್ರಹವಾಗುವ ನೀರನ್ನು ಡಿಪೋ­ಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ಮರುಪೂರಣ ಹಾಗೂ ಮತ್ತಿತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಆದರೆ, ಇವುಗಳಲ್ಲಿ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಇದೆ. ಈ ಮಧ್ಯೆ ಮಳೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ನೀರಿನ ಸಂಗ್ರಹ ಆಗಿಲ್ಲ. 

ಕ್ವಾರ್ಟಸ್‌ಗೆ ಪೂರೈಸಲಿ
ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ನೀರಿನ ಸಂಸ್ಕರಣಾ ಘಟಕಗಳಿಂದ ಲಭ್ಯವಾಗುವ ನೀರನ್ನು ಬರೀ ಬಸ್‌ಗಳ ವಾಷಿಂಗ್‌ಗೆ ಸೀಮಿತಗೊಳಿಸಬಾರದು. ಬಿಎಂಟಿಸಿ ಸಿಬ್ಬಂದಿ ಕ್ವಾರ್ಟಸ್‌ಗಳಿವೆ. ಡಿಪೋಗಳಲ್ಲಿ ಮೆಕಾನಿಕ್‌ ವಿಭಾಗಗಳು, ಶೌಚಾಲಯಗಳು, ಬಸ್‌ ಬಿಡಿಭಾಗಗಳ ಸ್ವತ್ಛತೆಗೂ ಇದೇ ನೀರನ್ನು ಬಳಸಿದರೆ ಹೆಚ್ಚು ಉಪಯುಕ್ತ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನೀರಿನ ಸಮಸ್ಯೆಯೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಇಷ್ಟೊಂದು ಹಾಹಾಕಾರದ ನಡುವೆಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗಿದೆ. ಇದಕ್ಕಾಗಿ ಮಳೆನೀರು ಕೊಯ್ಲು, ಸಂಸ್ಕರಣೆ ಮೂಲಕ ನೀರಿನ ಮರುಬಳಕೆ ಮಾಡುತ್ತಿದೆ. ಅಲ್ಲದೆ, ಜನಪ್ರತಿ­ನಿಧಿಗಳ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ­ಗಳನ್ನೂ ತೆರೆಯಲಾಗುತ್ತಿದೆ. ಬಹು­ ತೇಕ ಎಲ್ಲ ಕಡೆಗೂ ಈ ಘಟಕಗಳಿದ್ದು, ಇಲ್ಲದಿರುವ ಕಡೆ ತೆರೆಯಲು ಶಾಸಕರು, ಸಂಸದರ ಅನುದಾನಕ್ಕೆ ಮನವಿ ಮಾಡಲಾಗಿದೆ. 
-ನಾಗರಾಜು ಯಾದವ, ಅಧ್ಯಕ್ಷರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Crime: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

Bengaluru: ಖೋಖೋ ತೀರ್ಪು ವಿವಾದ: ಫೀಲ್ಡ್‌ನಲ್ಲೇ ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ!

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

ಸ್ನೇಹಿತನ ಪತ್ನಿಯ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೈಕ್‌ ಕಳ್ಳತನಕ್ಕಿಳಿದ ಕುಚುಕು ಗೆಳೆಯ! 

Shivakumar

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

Bengaluru: ಕೋರ್ಟ್‌ನಲ್ಲೇ ವಕೀಲೆಗೆ ಚಾಕು ಇರಿದ ಆರೋಪಿ ಸೆರೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Screenshot (2)

Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್‌. ರೈ

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.