ಪರಿಹಾರ ಧನಕ್ಕೆ ನೆರೆ ಸಂತ್ರಸ್ತರ ಆಗ್ರಹ
Team Udayavani, Dec 30, 2019, 11:52 AM IST
ಗೋಕಾಕ: ನೆರೆ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರಧನ ಕೊಡಿಸುವಂತೆ ಆಗ್ರಹಿಸಿ ನೆರೆ ಸಂತ್ರಸ್ತರು ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಶಾಸಕರ ಕಾರ್ಯಾಲಯದ ಎದುರು ರವಿವಾರ ಸೇರಿದ ನಗರದ ನೂರಾರು ನೆರೆ ಸಂತ್ರಸ್ತರು ಬದುಕನ್ನು ಕಟ್ಟಿಕೊಳ್ಳಲು ಶೀಘ್ರದಲ್ಲಿ ಸರ್ಕಾರದಿಂದ ಪರಿಹಾರಧನವನ್ನು ಮಂಜೂರು ಮಾಡಿಸುವಂತೆ ಶಾಸಕರ ಮೂಲಕ ಮನವಿ ಒತ್ತಾಯಿಸಿದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಭೀಕರ ಜಲಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರು, ಬದುಕು ಕಟ್ಟಿಕೊಳ್ಳಲು 4 ತಿಂಗಳಿನಿಂದ ಹೆಣಗಾಡುತ್ತಿದ್ದಾರೆ. ಭಾರೀ ಮಳೆ ಹಾಗೂ ಪ್ರವಾಹದಿಂದ ಗೋಕಾಕ ನಗರದಲ್ಲಿ ಸಾವಿರಾರು ಮನೆ ನೀರು ಪಾಲಾಗಿ ತೀವ್ರ ಸಂಕಟದಲ್ಲಿ ಇರುವವರಿಗೆ ಮಾನವೀಯತೆ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ನೆರೆ ಸಂತ್ರಸ್ತರ ನೆರೆವಿಗೆ ಧಾವಿಸುತ್ತಿಲ್ಲ.
ಸಂತ್ರಸ್ತರ ಬದುಕಿನ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಪರಿಹಾರ ಧನಕ್ಕಾಗಿ ದಿನನಿತ್ಯ ಅಧಿಕಾರಿಗಳ ಕಡೆಗೆ ಅಲೆಯುವುದೇ ನೆರೆ ಸಂತ್ರಸ್ತರ ನಿತ್ಯದ ಕಾಯಕವಾಗಿದೆ ಎಂದು ದೂರಿದರು. ಒಟ್ಟು 1538 ಮನೆಗಳು (ಅಧಿಕೃತ) ಬಿದ್ದ ಮನೆಗಳಾಗಿವೆ. ಇದರಲ್ಲಿ (ಅನಧಿಕೃತ) ಅಂದರೆ ಕೆಲ ದಾಖಲೆಗಳು ಇಲ್ಲದೇ ಬಿದ್ದ ಮನೆಗಳ ಸಂಖ್ಯೆ 143 ಇವೆ. ಎ ಕೆಟಗೇರಿ ಫಲಾನುಭವಿಗಳ ಸಂಖ್ಯೆ 841 ಇರುತ್ತದೆ. ಅವರಿಗೆ 1 ಲಕ್ಷ ರೂ. ಹಾಗೂ ಬಾಡಿಗೆ ಹಣ 25 ಸಾವಿರ ಮತ್ತು ಬಿ ಕೆಟಗೇರಿ ಫಲಾನುಭವಿಗಳ ಸಂಖ್ಯೆ 79 ಇದ್ದು, ಅವರಿಗೆ 1 ಲಕ್ಷ ರೂ.ಗಳು ನೆರವು ಫಲಾನುಭವಿಗಳ ಖಾತೆಗೆ ಜಮೆಯಾಗಿವೆ. ಸಿ ಕೆಟಗೇರಿ ಜನರಿಗೆ 50 ಸಾವಿರ ರೂ. ಇನ್ನೂ ಜಮಾ ಆಗಿಲ್ಲ. ಅದರಲ್ಲಿ 25 ಸಾವಿರ ರೂ. ಮಾತ್ರ ಸಂತಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಒಟ್ಟು ಫಲಾನುಭವಿಗಳಲ್ಲಿ 287 ಜನರ ಹೆಸರು ವಿವಿಧ ಕಾರಣಾಂತರಗಳಿಂದ ಡಿಲೀಟ್ ಆಗಿವೆ. ಅಲ್ಲದೇ 53 ನಾಟ್ ಓಕೆ ಮಾಡಲಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲ ಎಂದು ಅಧಿಕಾರಿಗಳ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ಮತ್ತು ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳು ನೆರೆ ಸಂತ್ರಸ್ತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಈಗಾಗಲೇ ಶೇ.50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನುಳಿದ ಜನರು ಮನೆ ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ. ಕಾರಣ ಈಗಾಗಲೇ ಕಟ್ಟಡಗಳನ್ನು ಕಟ್ಟುತ್ತಿರುವ ಮನೆಗಳ ಜಿಪಿಎಸ್ ಮಾಡದ ಅಧಿಕಾರಿಗಳು ಇನ್ನುಳಿದ ಅನುದಾನ ಬಿಡುಗಡೆಯಾಗುತ್ತದೆಯೋ ಅಥವಾ ಇಲ್ಲ ಎಂಬ ಸಂಶಯವಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ನೆರೆಸಂತ್ರಸ್ತರ ಮನೆಗಳ ಎರಡನೇ ಕಂತಿನ ಹಣವನ್ನು ಇನ್ನೂ ಜಮೆ ಮಾಡುತ್ತಿಲ್ಲ. ಕೂಡಲೇ ಸಂತ್ರಸ್ತರಿಗೆ ನೂತನ ಬದುಕನ್ನು ಕಟ್ಟಿಕೊಳ್ಳಲು ಸಹಾಯಹಸ್ತ ಚಾಚಬೇಕೆಂದು ಮನವಿಯಲ್ಲಿ ಕೋರಿದರು.
ಮನವಿಗೆ ಸ್ಪಂದಿಸಿದ ಶಾಸಕ ರಮೇಶ ಜಾರಕಿಹೊಳಿ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಪಕ್ಷಾತೀತವಾಗಿ ಕೆಲಸ ಮಾಡಲಾಗುತ್ತಿದೆ. ನೆರೆ ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಬಾಕಿ ಉಳಿದಿರುವ ಪರಿಹಾರ ಮೊತ್ತವನ್ನು ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿದೆ. ಸಂತ್ರಸ್ತರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರಸಭೆ ಸದಸ್ಯ ಯುಸೂಫ್ ಅಂಕಲಗಿ, ಶಂಕರ ಧರೆನ್ನವರ, ನಿಂಗಪ್ಪ ಗೋಸಬಾಳ, ಕಲ್ಲೋಳೆಪ್ಪ ಮದಿಹಳ್ಳಿ, ಅರ್ಜುನ ಪವಾರ, ಮಾರುತಿ ಜಡೆನ್ನವರ, ಮಾಯಪ್ಪ ತುಳಜನ್ನವರ, ಸಾಯಿನಾಥ ಶಿಂಗಳಾಪುರ, ಲಕ್ಷ್ಮಣ ಮಲ್ಲಾಪುರೆ, ಲಕ್ಷ್ಮಣ ತಳ್ಳಿ, ರಾಮಸಿದ್ದ ಬಡೆಪ್ಪಗೋಳ, ಶ್ರೀಶೈಲ ಬಬಲಿ, ಯಲ್ಲಪ್ಪ ಗೋಸಬಾಳ, ಹಣಮಂತ ತಹಶೀಲ್ದಾರ್, ಗೋಪಾಲ ಗುಮತಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ