ಕಾಂಗ್ರೆಸ್ ಯೋಜನೆ ಮುಂದುವರಿಸಲಿ
Team Udayavani, Jun 26, 2018, 6:10 AM IST
ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ನ ಹಿಂದಿನ ಯೋಜನೆಗಳನ್ನು
ಮುಂದುವರಿಸಿಕೊಂಡು ನೂತನ ಬಜೆಟ್ ಮಂಡಿಸಲಿ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಪದೇಪದೆ
ಆಗುತ್ತಿದೆ. ಮುಂದೆ ರಮೇಶ ಜಾರಕಿಹೊಳಿ, ಕೆ.ಜೆ. ಜಾರ್ಜ್ ಸೇರಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೂ
ನಡೆಯಬಹುದು. ಯಾವುದೋ ರಾಜಕೀಯ ಉದ್ದೇಶ ಇಟ್ಟುಕೊಂಡು ಐಟಿ ಹಾಗೂ ಇಡಿ ಇಲಾಖೆಗಳನ್ನು ಕೇಂದ್ರ
ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಪಾದಿಸಿದರು.