ಭರತ್ ರೆಡ್ಡಿ-ವೈಜಯಂತಿ ಸರಳ ವಿವಾಹ
ಸಚಿವ ಸಿ.ಟಿ. ರವಿ, ಶಾಸಕ ನಾಗೇಂದ್ರ ಭಾಗಿ
Team Udayavani, May 25, 2020, 12:33 PM IST
ಹೊಸಪೇಟೆ: ವೈಜಯಂತಿ ಹಾಗೂ ಎನ್.ಭರತ್ ರೆಡ್ಡಿ ವಿವಾಹದಲ್ಲಿ ಸಚಿವ ಸಿ.ಟಿ. ರವಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಇನ್ನಿತರರು ಭಾಗಿಯಾಗಿದ್ದರು.
ಹೊಸಪೇಟೆ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತ ಅವರ ಪುತ್ರಿ ವೈಜಯಂತಿ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಕಿರಿಯ ಪುತ್ರ ಎನ್.ಭರತ್ ರೆಡ್ಡಿ ವಿವಾಹ ನಗರದಲ್ಲಿ ಕೋವಿಡ್ ಭೀತಿಯ ನಡುವೆ ಭಾನುವಾರ ನಡೆಯಿತು.
ಪೂರ್ವ ನಿಯೋಜಿತ ವಿವಾಹ ಮಹೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ವಿವೇಕಾನಂದ ನಗರದಲ್ಲಿರುವ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ವಧು-ವರರ ಎರಡೂ ಕುಟುಂಬಗಳ ಸಮಕ್ಷಮದಲ್ಲಿ ವಿವಾಹ ನಡೆಯಿತು. ಅಪಾರ ಜನರು, ಬೆಂಬಲಿಗರನ್ನು ಹೊಂದಿದ ಎರಡೂ ಕುಟುಂಬಗಳ ಅದ್ಧೂರಿ ವಿವಾಹಕ್ಕೆ ಕೋವಿಡ್-19 ಬ್ರೇಕ್ ಹಾಕಿತ್ತು. ಕಡಿಮೆ ಜನರ ನಡುವೆಯೂ ಗಣ್ಯರು, ಶಾಸಕರು ಹಾಗೂ ಸಚಿವರು ಸಾಕ್ಷಿಯಾದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಅರಣ್ಯ ಸಚಿವ ಆನಂದ ಸಿಂಗ್, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ನಗರ ಶಾಸಕ ಸೋಮಶೇಖರ ರೆಡ್ಡಿ, ಮುಖಂಡರಾದ ವೆಂಕಟೇಶ್ ಪ್ರಸಾದ್ ಸೇರಿದಂತೆ ಇತರೆ ಗಣ್ಯರು ವಿವಾಹಕ್ಕೆ ಸಾಕ್ಷಿಯಾದರು. ವಧು ತಂದೆ ಕೆ.ಬಿ. ಶ್ರೀನಿವಾಸ ರೆಡ್ಡಿ ಈ ಹಿಂದೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ