ಬಾಳೆತೋಟ ಬೆಂಕಿಗಾಹುತಿ
Team Udayavani, Jun 1, 2020, 12:55 PM IST
ಕಂಪ್ಲಿ: ಮಾಗಣಿಯಲ್ಲಿ ಆಕಸ್ಮಿಕ ಬೆಂಕಿಗೆ ಆಹುತಿಯಾದ ಬಾಳೆ ತೋಟ.
ಕಂಪ್ಲಿ: ತಾಲೂಕಿನ ನಂ10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದ ಸಕ್ರೆ ದಿಬ್ಬಯ್ಯ ತೋಟ ಬಳಿಯಿರುವ ಹೊಸಪೇಟೆ ತಾಪಂ ಮಾಜಿ ಉಪಾಧ್ಯಕ್ಷ, ಬಾಳೆ ಬೆಳೆಗಾರ ಬಿ.ಎಸ್. ವೆಂಕಟಸ್ವಾಮಿಯವರಿಗೆ ಸೇರಿದ (ಸರ್ವೆ ನಂಬರ್ 122 ಮತ್ತು 123ರ ಒಟ್ಟು 2.45 ಎಕರೆ) ಸುಗಂ ಬಾಳೆ ತೋಟ ಆಕಸ್ಮಿಕ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಬಾಳೆ ಬೆಳೆಗಾರ ಬಿ.ಎಸ್. ವೆಂಕಟಸ್ವಾಮಿ ಮಾತನಾಡಿ, ಬಾಳೆಬೆಳೆ ಚೆನ್ನಾಗಿ ಬೆಳೆದಿದ್ದು, ಇನ್ನು 7-8ದಿನಗಳಲ್ಲಿ ಬಾಳೆಗೊನೆಗಳನ್ನು ಕಟಾವು ಮಾಡಬೇಕಾಗಿತ್ತು. ನಾಲ್ಕೈದು ತಿಂಗಳಲ್ಲಿ ಬಲಿಯಾಗಬೇಕಿದ್ದ ಬಾಳೆ ಮರಿಗಿಡಗಳು ಸಹ ಬೆಂಕಿಗೆ ಆಹುತಿಯಾಗಿ ಕಮರಿಹೋಗಿವೆ. ಒಳ ಮಾಗಾಣಿಯಾಗಿದ್ದರಿಂದ ಅಗ್ನಿಶಾಮಕ ದಳದವರು ಬಂದು ನಂದಿಸಲು ಸಾಧ್ಯವಿಲ್ಲ. ಹೊಗೆ ಬರುವುದನ್ನು ನೋಡಿ ತೋಟದತ್ತ ಹೋದೆ, ತೋಟಕ್ಕೆಲ್ಲ ಬೆಂಕಿ ಬಿದ್ದಿತ್ತು. ಎಕರೆಗೆ 40 ಸಾವಿರದಷ್ಟು ನಷ್ಟವಾಗಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್