ಗಂಟಲು ದ್ರವ ಸಂಗ್ರಹ ಆರಂಭ
Team Udayavani, May 10, 2020, 4:27 PM IST
ಕಂಪ್ಲಿ: ಪಟ್ಟಣದ ಷಾಮಿಯಾಚಂದ್ ಪಪೂ ಕಾಲೇಜಿನಲ್ಲಿ ಬೇರೆಡೆಯಿಂದ ಆಗಮಿಸಿದವರ ತಪಾಸಣೆ ನಡೆಸಲಾಯಿತು.
ಕಂಪ್ಲಿ: ಪಟ್ಟಣದ ಷಾಮಿಯಾಚಂದ್ ಪಪೂ ಕಾಲೇಜಿನಲ್ಲಿ ಡೆಡ್ಲಿ ಕೋವಿಡ್ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹೊರ ರಾಜ್ಯದಿಂದ ಕಂಪ್ಲಿಗೆ ಬಂದ ಜನರಿಗೆ ಕೋವಿಡ್ ವೈರಸ್ ತಪಾಸಣೆ ಹಾಗೂ ನೇಸಲ್ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತಿದೆ.
ಕೋವಿಡ್ ವೈರಸ್ ನಿರ್ಮೂಲನೆಗಾಗಿ ಕೆಲವರಿಗೆ ಕೋವಿಡ್ ತಪಾಸಣೆಗೆ ಒಳಪಡಿಸುವ ಜತೆಗೆ ಇನ್ನೂ ಕೆಲವರನ್ನು ಗೃಹ ಬಂಧನದಲ್ಲಿರುವಂತೆ ಮಾಡಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಕೆಲವರಿಗೆ ಕೋವಿಡ್ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕಂಪ್ಲಿಯಲ್ಲಿ ಕೋವಿಡ್ ವೈರಸ್ ಹರಡದಂತೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಕೆಲವರನ್ನು ಕೋವಿಡ್ ವೈರಸ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇಲ್ಲಿವರೆಗು ಸಾಕಷ್ಟು ಜನರನ್ನು ತಪಾಸಣೆಗೆ ಒಳಪಡಿಸಿದರೂ ಯಾರಲ್ಲೂ ಕೋವಿಡ್ ಸೋಂಕು ಇಲ್ಲದಿರುವುದು ಸಮಾಧಾನ ತಂದಿದೆ.
ಇನ್ನು ಕೋವಿಡ್ ತಡೆಗೆ ಆರೋಗ್ಯ, ಕಂದಾಯ, ಪೊಲೀಸ್, ಪುರಸಭೆ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಹಗಲಿರುಳು ಹೋರಾಡುತ್ತಿದ್ದಾರೆ. ವೈದ್ಯಾಧಿಕಾ ಡಾ| ರವೀಂದ್ರ, ಡಾ| ಶ್ರೀನಿವಾಸ, ಲ್ಯಾಬ್ ಟೆಕ್ನಿಷಿಯನ್ಗಳಾದ ಲಕ್ಷ್ಮೀ ಹೂಗಾರ್, ಮಹಾಂತೇಶ್, ಡಿ ಗ್ರೂಫ್ ನೌಕರರಾದ ಮುಕ್ಕಣ್ಣ, ರಾಮು, ಆಪ್ತ ಸಮಾಲೋಚಕ ಎಂ.ಕೆ. ಮಂಜುನಾಥ, ನರ್ಸ್ ನೇತ್ರಾ, ಸಿಬ್ಬಂದಿ ಹರೀಶ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
MUST WATCH
ಹೊಸ ಸೇರ್ಪಡೆ
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್