ಪ್ಲೀಸ್‌! ನಮಗೂ ಬದುಕಲು ಅವಕಾಶ ಕೊಡಿ


Team Udayavani, Aug 17, 2018, 5:29 PM IST

bell-2.jpg

ನಮನ ಹಂಪಿ
ರಾಮಾಯಣದಲ್ಲಿ ಸೀತೆಯನ್ನು ಕಾಪಾಡಲು ಬೆಟ್ಟ ಹಾರಿ ಹನುಮಂತ ಶ್ರೀರಾಮನ ಸಂದೇಶ ನೀಡಿ ಧೈರ್ಯವಾಗಿರುವಂತೆ ಹೇಳಿದ. ಆದರೆ ಇಲ್ಲಿ ಪರಿಸ್ಥಿತಿ ತುಂಬ ಭಿನ್ನ. ಇಲ್ಲಿನ ದೃಶ್ಯ ನೋಡಿದರೆ ನಿಮ್ಮ ಕಂಗಳಲಿ ನೀರು ಬರದೆ ಇರದು. ಮುನಿದುಕೊಂಡ ತುಂಗಭದ್ರೆಯ ರುದ್ರ ನರ್ತನಕ್ಕೆ ನಲುಗಿ ಹೋಗಿದ್ದೇವೆ. ಅಸಹಾಯಕರಾಗಿದ್ದೇವೆ. ನಮ್ಮ ಪರಿಸ್ಥಿತಿಯನ್ನು ತೋರಿಸಲು ಪಾಪಾ.. ಆ ರಾಚಯ್ಯನೇ ಬರಬೇಕಾಯಿತು. ನಮಗೀಗ ರಾಮನಾಮ ಜಪ ಮಾಡದೆ ಬೇರೆ ವಿಧಿಯಲ್ಲ.

ಹೌದು, ಇಂಥ ಪರಿಸ್ಥಿತಿ ವಿಶ್ವಪ್ರಸಿದ್ಧ ಹಂಪಿ ನದಿ ಪಾತ್ರದಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ. ಈ ಕುರಿತು ನಮ್ಮ ಅಹವಾಲು ಹೇಳಿಕೊಳ್ಳಲೇಬೇಕಾಗಿದೆ. ನಾಳೆಯ ಉಳುವೆಗೆ ನಾವು ಅನಾಥರಾಗದೇ ಜೀವಿಸಬೇಕಿದೆ. ಅಂಗೈ ಅಗಲ ತುಂಬ, ತನ್ನ ಕಬಂಧ ಬಾಹುಗಳು ಮೈಕೊರೆಯುವ ಚಳಿಗೆ ಸೋತು ಹೋಗುತ್ತಿವೆ. ಮೈಮರೆತರೆ ಮಡಿಲಿನಲ್ಲಿ ಮುಂಜಾನೆಯ ಕನಸು ಕಾಣುತ್ತಿರುವ ಹಸುಗೂಸುಗಳು ನೆಮ್ಮದಿಯ ನಿದ್ರೆಗೆ ಜಾರುವುದಿಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಂಡಿರುವ ಸ್ನೇಹಿತ, ಆತ್ಮೀಯ ಎಲ್ಲರೂ ಒಬ್ಬರಿಗೊಬ್ಬರು ಧೈರ್ಯ ತಂದುಕೊಡುತ್ತಿದ್ದೇವೆ. ಯಾಕೋ ಏನೋ ಈ ಬಾರಿ ತುಂಗಭದ್ರೆ ತುಸು ಹೆಚ್ಚೇ ಮುನಿಸಿಕೊಂಡಿದ್ದಾಳೆ.

ಮಲೆನಾಡು, ಪಶ್ಚಿಮಘಟ್ಟದ ಪ್ರಕೃತಿಗೆ ವರುಣ ದೇವನೇನೋ ತಥಾಸ್ತು ಎಂದಿದ್ದಾನೆ. ಆದರೆ ಅದರ ಸಿಟ್ಟು, ಸೆಡುವು ತುಂಗಭದ್ರೆ ತನ್ನ ಒಡಲಾಳ ತುಂಬಿಕೊಂಡು ಇಲ್ಲಿ ತೋರಿಸುತ್ತಿದ್ದಾಳೆ. ಇನ್ನಿಲ್ಲದಂತೆ ಝೇಂಕರಿಸುತ್ತಿದ್ದಾಳೆ. ಈಕೆಯ ಕೋಪ ತಾಪಕ್ಕೆ ನಾವಿರುವ ಸ್ಥಳ ಅಕ್ಷರಶಃ ದಿಕ್ಕಿಲ್ಲದಂತಾಗಿದೆ. ಸುತ್ತಲೂ ತುಂಗಭದ್ರೆಯ ನರ್ತನಕ್ಕೆ ಕಳೆದೆರಡು ದಿನಗಳಿಂದ ಬೆಚ್ಚಿ ಬಿದ್ದಿದ್ದೇವೆ.

ಸಾಕು ಮಾಡು ತಾಯಿ! ನಾವಾದ್ರೂ ಅಲ್ಪಸ್ವಲ್ಪ ತಡೆದುಕೊಳ್ಳಬಹುದು. ಆದರೆ ಪಾಪ ಹಸುಗೂಸುಗಳು ಎದೆಯಲ್ಲಿ ಬೆಚ್ಚನೆಯ ಜಾಗ ಹುಡುಕುತ್ತಿವೆ. ತೋಯ್ದು ತೊಪ್ಪೆಯಾಗಿ ಕೂಳಿಲ್ಲದೇ ಧೋ ಎಂದು ಹರಿಯುವ ನಿನ್ನ ನೋಡಿ ಶಪಿಸಬೇಕೆನಿಸುತ್ತಿದೆ. ಆದರೇನು ಮಾಡೋದು ನಮಗೆ ಮಾತುಬಾರದು. ರಾತ್ರಿ ಕೊರೆಯುವ ಚಳಿಗೆ ಮಕ್ಕಳು ಹೈರಾಣಾಗುತ್ತಿವೆ. ಮನುಷ್ಯರಿಗೆ ಮಾತ್ರ ಜೀವವಿದೆಯಾ? ಮನುಷ್ಯ ಜಾತಿಗೆ ಹೋಲುವ ನಾವಾರೂ ಯಾರಿಗೂ ಕಾಣಿಸುತ್ತಿಲ್ಲವೇ? ನಮ್ಮಂಥವರಿಗೆಂದೇ ಸರ್ಕಾರದ ಇಲಾಖೆಯೊಂದು ಇದೆಯಂತೆ. 

ಆದರೇನು ಮಾಡೋದು ಮನುಜರಿಗಿರುವ ಬೆಲೆ ನಮಗಿಲ್ಲವೇ? ರಾಮಾಯಾಣದಲ್ಲಿ ಶ್ರೀರಾಮನ ನಾಮಬಲವೇ ಶಕ್ತಿಯಾಗಿತ್ತು. ಇದೀಗ ನಮಗೆ ಹಂಪಿಯ ಕೋದಂಡರಾಮನೇ ಬಲ. ಆತನ ದೇಗುಲವೇ ನಮಗೆ ಶ್ರೀರಕ್ಷೆ. ಆ ದೇಗುಲದ ಕಂಬದ ತುದಿಯಲ್ಲಿ ನಾವಿಬ್ಬರೂ ನಮ್ಮ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಹೇಗಿರಬೇಕು? ಹೇ ಶ್ರೀರಾಮ ಈಗಲೂ ನೀನು ಇದ್ದರೆ ನಮ್ಮನ್ನು ಕಾಪಾಡು! ಅತ್ತು ಅತ್ತು ಅಳು ಬತ್ತಿಹೋಗಿದೆ. ನಮ್ಮನ್ನು ನಾವು ಸಂತೈಸಿಕೊಳ್ಳಬೇಕಿದೆ. ದಿನವೂ ಭಕ್ತರ ಹಣ್ಣು ಹಂಪಲು ಸಿಗುತ್ತಿತ್ತು. ಆದರೆ ಕಳೆದೊಂದು ವಾರದಿಂದ ತುಂಗಭದ್ರೆ ಮೈದುಂಬಿ ಹಂಪಿ ಹೊಳೆಯ ಮೂಲಕ ಹರಿಯುತ್ತಿದ್ದಾಳೆ. ನಿನ್ನೆ ಮೊನ್ನೆಯಂತೂ 2 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಬಿಡುತ್ತಿದ್ದಂತೆ ನದಿ ಪಾತ್ರದ ನಾವೆಲ್ಲ ಕಂಗಾಲಾಗಿದ್ದೇವೆ. ರಭಸದಿಂದ ಹೊಳೆಯಲ್ಲಿ ಬಾಳೆ ದಿಂಡು ಕಿತ್ತು ತಿನ್ನಲು ಹರಸಾಹ ಪಡುತ್ತಿದ್ದೇವೆ. ಆದರೆ ಏನೂ ಉಪಯೋಗವಾಗುತ್ತಿಲ್ಲ. ಸುತ್ತಲೂ ತುಂಗಭದ್ರೆ ಒಂದೇ ಸಮನೆ ಬುಸುಗುಡುತ್ತಿದ್ದಾಳೆ.

ಎತ್ತಲೂ ಹೋಗದ ಪರಿಸ್ಥಿತಿ. ತಿನ್ನಲು ನಮಗೇನೂ ಸಿಗುತ್ತಿಲ್ಲ. ಮಾರುದ್ದ ಈಜಾಡಲು ನಮಗಾಗುವುದಿಲ್ಲ. ಅಲ್ಲಿಯ ಬೋರ್ಗರತೆ ದನಿ ಕೇಳಿಯೇ ಭಯಗೊಂಡಿದ್ದೇವೆ. ಕಳೆದೊಂದು ದಶಕದಿಂದೇಚೆಗೆ ಇಂಥ ಪರಿಸ್ಥಿತಿಯಿದ್ದರೂ ನಮ್ಮನ್ನು ಚಿತ್ರಿಸುವವರು ಕಡಿಮೆಯಿದ್ದರು. ಆದರೆ ಇಂದು ನಮ್ಮವರನ್ನು ನಮಗೆ ತಿಳಿಯದಂತೆ ಸೆರೆ ಹಿಡಿದಿದ್ದಾರೆ.

ಇಂದು ಸಂಜೆಯ ಹೊತ್ತಿಗೆ ಬದುಕಿನ ಭರವಸೆ ಕ್ಷೀಣಿಸುತ್ತಿದೆ. ಒಬ್ಬರಿಗೊಬ್ಬರು ಧೈರ್ಯ ತಂದುಕೊಳ್ಳುತ್ತಿದ್ದೇವೆ. ಆತ್ಮಸ್ಥೈರ್ಯ ಕುಸಿಯುತ್ತಿದೆ. ಆದರೆ ಸೋಲು ಒಪ್ಪಿಕೊಳ್ಳುತ್ತಿಲ್ಲ. ಇನ್ನೇನು ಮಾಡೋದು? ನಾಳೆಯ ಒಂದೊಳ್ಳೆ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಸಾಧ್ಯವಾದರೆ ನಮ್ಮನ್ನು ಕಾಪಾಡಿ. ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬಿಡಿ. ನಾವು ಬದುಕಬೇಕಿದೆ. ಬದುಕಲು ಅವಕಾಶ ಮಾಡಿಕೊಡಿ! ನಮಗೂ ಬದುಕುವ ಹಕ್ಕಿದೆ. ಹೀಗೆಂದು ನಮಗೆ ಕೇಳಲೂ ಹಕ್ಕಿಲ್ಲವೇ? ಹೌದು ನಾವು ಮೂಕರು. ಆದರೆ ಮನಸು…. ಮೂಕಲ್ಲ. ಸಹಾಯ ಮಾಡಿ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಹರಿವು; ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತ

Bellary; ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಹರಿವು; ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತ

Bellary; ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

Bellary; ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Siruguppa ಕಬ್ಬಿಣದ ಸರಳಿನಿಂದ ಹೊಡೆದ ಪೆಟ್ಟಿಗೆ ಬಾಲಕ ಸಾವು

Bellary; Indefinite strike by Lorry Owners Association

Bellary; ಲಾರಿ ಮಾಲೀಕರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ

14-siruguppa

Siruguppa: ಅಕ್ರಮ ಗಾಂಜಾ; 2 ದ್ವಿಚಕ್ರ ವಾಹನ ವಶ, 5 ಆರೋಪಿಗಳ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.