![1-assam](https://www.udayavani.com/wp-content/uploads/2024/07/1-assam-415x233.jpg)
ಕೋವಿಡ್ ಸೆಂಟರ್ನಲ್ಲಿ ಸೋಂಕಿತೆಯಿಂದ ಯೋಗ ಪಾಠ
Team Udayavani, Sep 14, 2020, 6:08 PM IST
![ಕೋವಿಡ್ ಸೆಂಟರ್ನಲ್ಲಿ ಸೋಂಕಿತೆಯಿಂದ ಯೋಗ ಪಾಠ](https://www.udayavani.com/wp-content/uploads/2020/09/Ballary-tdy-1-8-620x372.jpg)
ಬಳ್ಳಾರಿ: ನಗರದ ವಿಮ್ಸ್ನ ಡೆಂಟಲ್ ಕಾಲೇಜಿನಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ಯೋಗ ಶಿಕ್ಷಕಿ ಸಾವಿತ್ರಿ ಅವರು ಆಸ್ಪತ್ರೆಯಲ್ಲಿನ ಇನ್ನಿತರೆ ಕೋವಿಡ್ ಸೋಂಕಿತ ಮಹಿಳೆಯರಿಗೂ ಯೋಗಾಭ್ಯಾಸಮಾಡಿಸುವ ಮೂಲಕ ಅವರಲ್ಲಿ ಆರೋಗ್ಯದ ಕುರಿತು ಕಾಳಜಿಯೊಂದಿಗೆಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿನ ಸೋಂಕಿತ ಮಹಿಳೆಯರಿಗೆ ಪ್ರಾಣಾಯಾಮ, ವಜ್ರಾಸನ ಸೇರಿ ಯೋಗಾಸನದ ಹಲವು ಆಸನಗಳ ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಡುತ್ತಿರುವ ಯೋಗ ಶಿಕ್ಷಕಿ ಸಾವಿತ್ರಿಯವರು, ಔಷಧಗಳು, ಚಿಕಿತ್ಸೆಗಳ ಜೊತೆಗೆ ಯೋಗಾಸನದಿಂದಲೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಎಲ್ಲರೂ ಯೋಗಾಭ್ಯಾಸವನ್ನು ಜೀವನದ ಅಂಗವಾಗಿ ರೂಢಿಸಿಕೊಳ್ಳಬೇಕು. ಆರೋಗ್ಯದ ಕುರಿತು ಯಾರೂ ನಿರ್ಲಕ್ಷ್ಯ ವಹಿಸಬಾರದು. ಪ್ರತಿಯೊಬ್ಬರು ಗಳಿಸುವುದು ಬದುಕಿಗಾಗಿಬದುಕಬೇಕೆಂದರೆ ಉತ್ತಮ ಆರೋಗ್ಯವೂ ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಪ್ರತಿದಿನ ಯೋಗ ಮತ್ತು ಪ್ರಾಣಾಯಾಮವನ್ನು ರೂಢಿಸಿಕೊಳ್ಳುವುದ ರಿಂದ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ದೈಹಿಕ ಚಟುವಟಿಕೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತವೆ. ಶರೀರವನ್ನು ದಣಿಸುವ ಮೂಲಕ ಆರೋಗ್ಯವಂತರಾಗಿ ರಬೇಕು ಎಂದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹೆಚ್ಚಿಸುವ ಇಂತಹ ಅಭ್ಯಾಸಗಳು ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಿಸುತ್ತದೆ. ಸೋಂಕಿತರು ಆತಂಕಕ್ಕೊಳಗಾಗದೇ ಧೈರ್ಯದಿಂದ ಯೋಗಾಭ್ಯಾಸ ಸೇರಿ ಇತರೆ ಚಟುವಟಿಕೆಗಳಲ್ಲಿ ತೊಡಗಿ ಸದಾ ಹಸನ್ಮುಖೀಯಾಗಿರಬೇಕು ಎಂದು ವಿಭಾಗದ ಕೋವಿಡ್ ನೋಡಲ್ ಅಧಿಕಾರಿ ಡಾ| ರಾಘವೇಂದ್ರ ಹೇಳಿದರು.
ಟಾಪ್ ನ್ಯೂಸ್
![1-assam](https://www.udayavani.com/wp-content/uploads/2024/07/1-assam-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.