ನಗರಸಭೆಯಿಂದ ಜನಜಾಗೃತಿ
Team Udayavani, Mar 25, 2020, 5:24 PM IST
ಬೀದರ: ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಬಸವಕಲ್ಯಾಣ ಪಟ್ಟಣದಲ್ಲಿ ನಗರಸಭೆಯಿಂದ ಜನಜಾಗೃತಿ ನಡೆಯಿತು.
ಖುದ್ದು ಪೌರಾಯುಕ್ತರೇ ಸ್ಕೂಟಿ ಏರಿ ಜೊತೆಗೆ ನಗರಸಭೆಯ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಪೌರಾಯುಕ್ತರೊಂದಿಗೆ ಬಸವಕಲ್ಯಾಣ ಬೀದಿಬೀದಿಗಳಲ್ಲಿ ಸಂಚರಿಸಿ, ರಸ್ತೆ ಬದಿ ಅಲ್ಲಲ್ಲಿ ನಿಂತಿದ್ದ ಜನರಿಗೆ ಮನೆಯಲ್ಲಿ ಇರುವಂತೆ ತಿಳಿಸಿದರು. ಜನರು ಗುಂಪಾಗಿ ಸೇರಬಾರದು ಎಂದು ತಿಳಿವಳಿಕೆ ಮೂಡಿಸಿದರು.
“ನಾವು ಬಸವಕಲ್ಯಾಣ ನಗರಸಭೆಯ ಸ್ವಚ್ಛತೆಯ ಯೋಧರು. ನಾವು ಇಂದಿನಿಂದ ಸ್ವಚ್ಛತೆಯ ಜೊತೆಗೆ ಜನಸಂದಣಿ ತಡೆಯಲು ಪ್ರಮಾಣ ಮಾಡಿ ಕ್ಷೇತ್ರಕಾರ್ಯಕ್ಕೆ ನುಗ್ಗಿದ್ದೇವೆ. ದಯಮಾಡಿ ಎಲ್ಲರೂ ಸಹಕರಿಸಿ ಮನೆಯಲ್ಲಿಯೇ ಇರಿ’ ಎಂದು ಘೋಷಣೆ ಹಾಕುತ್ತ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಮೀನಾಕುಮಾರಿ ಬೋರಾಳಕರ್, ಪರಿಸರ ಅಭಿಯಂತರ ಮನೋಜಕುಮಾರ, ಆರೋಗ್ಯ ನಿರೀಕ್ಷಕರಾದ ಅಶ್ವಿನಕುಮಾರ, ಗಂಗಾಧರ, ನಿತ್ಯಾನಂದ ಮತ್ತು ಪೌರ ಕಾರ್ಮಿಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ