ಹೃದಯ ಸಂಬಂಧಿ ಕಾಯಿಲೆ ನಿರ್ಲಕ್ಷ್ಯ ಸಲ್ಲ: ಡಾ| ಕೌಜಲಗಿ
Team Udayavani, Apr 16, 2018, 3:37 PM IST
ಬಸವಕಲ್ಯಾಣ: ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬಂದಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಲಬುರಗಿಯ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ಹೃದಯ ತಜ್ಞ ಡಾ| ಕೌಜಲಗಿ ಹೇಳಿದರು.
ನಗರದ ಬಸವೇಶ್ವರ ಸಿಬಿಎಸ್ಇ ಶಾಲೆಯಲ್ಲಿ ಬಸವ ಜಯಂತಿ ಹಾಗೂ ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಹಾಗೂ ವಿಶ್ವಸ್ಥ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಹೃದಯ ಕಾಯಿಲೆ ಇದೆಯೋ ಇಲ್ಲವೋ ಎಂಬ ಅನುಮಾನ ಇರುತ್ತದೆ. ಎದೆ ನೋವು ಕಾಣಿಸಿಕೊಂಡರೆ ಯಾರೊಬ್ಬರುಅದನ್ನು ನಿರ್ಲಕ್ಷಿಸಬಾರದು ಎಂದರು.
ಮಧ್ಯ ವಯೋಮಾನದವರು, ವಯೋವೃದ್ಧರಲ್ಲಿ ಹೃದಯ ಕಾಯಿಲೆ ಸಹಜವಾಗಿ ಇರುತ್ತವೆ. ಧೂಮ್ರಪಾನ, ಮದ್ಯಪಾನ, ಮಧುಮೇಹ ಇರುವವರು ಎದೆ ನೋವು ನಿರ್ಲಕ್ಷಿಸದೆ ತಜ್ಞ ವೈದ್ಯರನ್ನು ಕಾಣಬೇಕು. ಎಲ್ಲ ಅಂಗಗಳಿಗೆ ರಕ್ತ ಹರಿಯಲು ಹೃದಯ ಬಡಿತ ಅವಶ್ಯ. ನಿತ್ಯದ ಚಟುವಟಿಕೆಗಳಲ್ಲಿ ಹೃದಯ ಮೌನವಾಗಿ ಕೆಲಸ ಮಾಡುತ್ತಿರುತ್ತದೆ. ಹೃದಯ ನಿಂತರೆ ಜೀವ ಮತ್ತು ಜೀವನ ನಿಲ್ಲುತ್ತವೆ ಎಂದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ದೈಹಿಕ ಚಟುವಟಿಕೆಗಳು ಅಗತ್ಯ. ಅಂಗಾಂಗಗಳ ಓಡಾಟ ಮತ್ತು ಚಟುವಟಿಕೆಗಳು ಚೆನ್ನಾಗಿದ್ದರೆ ಹೃದಯ ಕ್ರಿಯಾಶೀಲವಾಗಿರುತ್ತದೆ. ಆಹಾರ ಪದ್ಧತಿಯಲ್ಲಿ ಹಣ್ಣು ತರಕಾರಿ ನಾರಿನಂಶ ಬಳಕೆಯಿಂದ ದೇಹದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
ಬಿಡಿಪಿಸಿ ಅಧ್ಯಕ್ಷ ವೀರಣ್ಣಾ ಹಲಶೆಟ್ಟೆ ಅಧ್ಯಕ್ಷತೆ ವಹಿಸಿದ್ದರು. ಡಾ| ವಿಜಯಕುಮಾರ ಅಂತಪ್ಪನವರು, ಡಾ| ಜಿ.ಎಸ್.ಭುರಾಳೆ ಮಾತನಾಡಿದರು. ಡಾ| ಪೃಥ್ವಿರಾಜ ಬಿರಾದಾರ, ಡಾ| ಸದಾನಂದ ಪಾಟೀಲ, ಡಾ| ಸುರ್ಯಕಾಂತ ಬಾಳೂರಕರ್, ಬಿಡಿವಿಸಿ ಅಧ್ಯಕ್ಷ ಮಲ್ಲಯ್ನಾ ಹಿರೇಮಠ, ಬಿಡಿಪಿಸಿ ಉಪಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ, ವಿಶ್ವಸ್ಥರಾದ ಸೋಮಶೇಖರಯ್ನಾ ವಸ್ತ್ರದ, ಬಿಡಿಪಿಸಿ ನಿರ್ದೇಶಕರಾದ ಸುಭಾಷ ಹೊಳಕುಂದೆ,
ಮಲ್ಲಿಕಾರ್ಜುನ್ ಕುರಕೋಟೆ, ಕಾಶಪ್ಪಾ ಸಕ್ಕರಭಾವಿ, ಮಲ್ಲಿಕಾರ್ಜುನ್ ಚಿರಡೆ, ಅನೀಲಕುಮಾರ ರಗಟೆ, ಶಿವರಾಜ ಶಾಶಟ್ಟೆ ಉಪಸ್ಥಿತರಿದ್ದರು. ಕೋಶಾಧ್ಯಕ್ಷ ಅಶೋಕ ನಾಗರಾಳೆ ಸ್ವಾಗತಿಸಿದರು. ಜ್ಯೋತಿ ತೂಗಾವೆ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!