![court](https://www.udayavani.com/wp-content/uploads/2024/07/court-7-415x231.jpg)
ಸಾಹಿತ್ಯಿಕ ಚಟುವಟಿಕೆಗೆ ಭವನ ವೇದಿಕೆಯಾಗಲಿ
Team Udayavani, Dec 22, 2020, 4:37 PM IST
![ಸಾಹಿತ್ಯಿಕ ಚಟುವಟಿಕೆಗೆ ಭವನ ವೇದಿಕೆಯಾಗಲಿ](https://www.udayavani.com/wp-content/uploads/2020/12/bidara-tdy-2-3-620x372.jpg)
ಬೀದರ: ಗಡಿಭಾಗ ಬೀದರನಲ್ಲಿ ಅನ್ಯ ಭಾಷೆಗಳಪ್ರಭಾವದ ಮಧ್ಯೆಯೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿಕರುನಾಡು ಸಾಂಸ್ಕೃತಿಕ ಭವನ ಪೂರಕವಾಗಿಚಟುವಟಿಕೆಗಳನ್ನ ಏರ್ಪಡಿಸುವಲ್ಲಿ ವೇದಿಕೆ ಒದಗಿಸಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ತಿಳಿಸಿದರು.
ನಗರದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ನಿರ್ಮಿಸಿರುವ ಕರುನಾಡು ಸಾಂಸ್ಕೃತಿಕ ಭವನ ಉದ್ಘಾಟಿಸಿಮಾತನಾಡಿದ ಅವರು, ಭವನದಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳು ನಡೆಯಲಿದೆ ಎಂದರು.
ಚಿಂತಕ ಎಸ್. ರಾಮಕೃಷ್ಣನ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಾಹಿತ್ಯ ಕಮ್ಮಟ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕಕಾರ್ಯಕ್ರಮ ಮೂಲಕ ಕರುನಾಡು ವೇದಿಕೆಯು ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಎಲೆಮರೆ ಕಾಯಿಯಂತಿರುವಸಾಹಿತಿ, ಕಲಾವಿದರಿಗೆ ವೇದಿಕೆಒದಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಉಸ್ತುವಾರಿ ಸಚಿವರ ಕಾರ್ಯಾಲಯದ ವಿಶೇಷ ಕರ್ತವ್ಯ ಅಧಿಕಾರಿ ಶಿವಕುಮಾರ ಕಟ್ಟೆ ಮಾತನಾಡಿ, ಸರ್ಕಾರ ಹಾಗೂ ದಾನಿಗಳ ನೆರವಿಲ್ಲದೆ ಶಿಕ್ಷಕ-ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕ ಅತಿವಾಳೆಯವರು ತಮ್ಮ ಸ್ವಂತ ನಿವೇಶನದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಿ ನಿರಂತರ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಲ್ಲಾ ಕನ್ನಡಪರ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ನೀಡುವ ಸಂಕಲ್ಪ ಮಾಡಿರುವುದು ಮಾದರಿ ಕಾರ್ಯ ಎಂದು ಬಣ್ಣಿಸಿದರು.
ವೇದಿಕೆಯ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ, ನಿವೃತ್ತ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪುಂಡಲಿಕರಾವ ಇಟಕಂಪಳ್ಳಿ ಮತ್ತು ಸಮಾಜ ಸೇವಾ ಸಮಿತಿ ಕಾರ್ಯದರ್ಶಿ ಬಿ.ಎಂ. ಶಶಿಕಲಾಮಾತನಾಡಿದರು. ಜಿಲ್ಲಾ ಮಡಿವಾಳಸಮಾಜದ ಗೌರವಾಧ್ಯಕ್ಷ, ದಿಗಂಬರ ಮಡಿವಾಳ ವೇದಿಕೆಯ ಅಧ್ಯಕ್ಷ ಡಾ| ಶಾಮರಾವ ನೆಲವಾಡೆ ಮಾತನಾಡಿದರು. ತಾಲೂಕು ಶಿಕ್ಷಕರ ಸಂಘದ ನೂತನ ನಿರ್ದೇಶಕರನ್ನು ಗೌರವಿಸಲಾಯಿತು. ಡಾ| ರವೀಂದ್ರ ಲಂಜವಾಡಕರ ಸ್ವಾಗತಿಸಿದರು. ಸುನಿತಾ ಬಿಕ್ಲೆ ನಿರೂಪಿಸಿದರು. ಶಿವಕುಮಾರ ಚನ್ನಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-adsadsadsad](https://www.udayavani.com/wp-content/uploads/2024/07/1-adsadsadsad-150x79.jpg)
Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ
![1-bidar](https://www.udayavani.com/wp-content/uploads/2024/07/1-bidar-150x78.jpg)
Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”
![Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ](https://www.udayavani.com/wp-content/uploads/2024/07/bidar-1-150x84.jpg)
Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ
![Selling liquor online? Minister RB Thimmapura clarified](https://www.udayavani.com/wp-content/uploads/2024/07/thim-150x83.jpg)
Liquor; ಆನ್ಲೈನ್ನಲ್ಲಿ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ
![BUS driver](https://www.udayavani.com/wp-content/uploads/2024/07/BUS-driver-150x94.jpg)
Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.