ಗಂಟಲು-ಮೂಗಿನ ದ್ರವ ಮಾದರಿ ಸಂಗ್ರಹ
Team Udayavani, May 29, 2020, 7:10 AM IST
ನಾರಾಯಣಪುರ: ಮಹಾರಾಷ್ಟ್ರದಿಂದ ಮರಳಿ ಬಂದು ಇಲ್ಲಿನ ಬಿಸಿಎಂ ಹಾಸ್ಟೆಲ್, ಪದವಿ ಪೂರ್ವ ಕಾಲೇಜು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದ 269 ಜನ ವಲಸೆ ಕಾರ್ಮಿಕರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಗುರುವಾರ ಸಂಜೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದರು.
ಇಲ್ಲಿನ ಬಿಸಿಎಂ ಹಾಸ್ಟೆಲ್ 82, ಪದವಿಪೂರ್ವ ಕಾಲೇಜಿನ 127 ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ 60 ಜನ ವಾಸ್ತವ್ಯ ಹೂಡಿದ್ದು, ಕ್ವಾರಂಟೈನ್ನಲ್ಲಿನ ಎಲ್ಲಾ ಮಹಿಳೆಯರು, ಪುರುಷರು, ಮಕ್ಕಳ ಎಸ್. ಎರ್.ಎಫ್ ಐಡಿಯನ್ನು ತಯಾರಿಸಿ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪ್ರತಿಯೊಬ್ಬರ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಎಲ್ಲಾ ಮಾದರಿಗಳನ್ನು ಬೆಂಗಳೂರಿನ ಕೊರೊನಾ ಪರೀಕ್ಷಾ ಲ್ಯಾಬ್ಗ ಕಳುಹಿಸಿಕೊಡಲಾಗುವುದು. ಎರಡು, ಮೂರು ದಿನಗಳಲ್ಲಿ ವರದಿ ಬರುತ್ತದೆ ಎಂದು ನೇತೃತ್ವ ವಹಿಸಿದ್ದ ಡಾ.ಅಂಬೋರೆ, ಡಾ. ಹರ್ಷವರ್ಧನ ಪತ್ರಿಕೆಗೆ ತಿಳಿಸಿದರು.
ಪಿಡಿಒ ಶರಣಬಸವ ಬಿರಾದಾರ, ಗ್ರಾಪಂ ಅಧ್ಯಕ್ಷ ಧೀರಪ್ಪ, ಆರೋಗ್ಯ ಇಲಾಖೆಯ ಆನಂದ ಮಠ, ರಾಜಮಹ್ಮದ್, ರಾಮಚಂದ್ರ, ಗ್ರಾಪಂ ಕಾರ್ಯದರ್ಶಿ ಸಂತೋಷ, ಹುಸೇನ್ ಸಾಬ್ ಸೇರಿದಂತೆ ಗ್ರಾಪಂ, ಕಂದಾಯ, ಆರೋಗ್ಯ, ಶಿಕ್ಷಣ, ಪೊಲೀಸ್, ಹಾಸ್ಟೆಲ್ ಸಿಬ್ಬಂದಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ