![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಅಡವಿಯಲ್ಲಿ ಮೇವಿಗಾಗಿ ಹಸುಗಳ ಅಲೆದಾಟ
Team Udayavani, May 23, 2020, 4:40 PM IST
![23-May-18](https://www.udayavani.com/wp-content/uploads/2020/05/23-May-18-620x341.gif)
ಸಾಂದರ್ಭಿಕ ಚಿತ್ರ
ವಾಡಿ: ನಾಗಾವಿ ನಾಡು, ಗಲ್ಲು ಗಣಿಗಳ ತವರು, ಸಿಮೆಂಟ್ ಕಾಶಿ ಚಿತ್ತಾಪುರ ತಾಲೂಕಿಗೆ ಈ ವರ್ಷ ಎರಡು ರೀತಿಯಿಂದ ಹೊಡೆತ ಬಿದ್ದಿದೆ. ಒಂದೆಡೆ ಮನುಷ್ಯರಿಗೆ ಮಹಾಮಾರಿ ಕೋವಿಡ್ ಕಾಡುತ್ತಿದ್ದರೆ, ಇನ್ನೊಂದೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.
ಬರದ ಛಾಯೆ ಮಧ್ಯೆ ತಾಲೂಕಿನ ಜನರು ಜೀವ ರಕ್ಷಣೆಗೆ ಪರದಾಡುವಂತಾಗಿದೆ. ಭೀಮಾ ಮತ್ತು ಕಾಗಿಣಾ ನದಿಗಳು ಬತ್ತಿದ್ದರಿಂದ ವಾಡಿ, ನಾಲವಾರ, ಚಿತ್ತಾಪುರ ಹೋಬಳಿ ವ್ಯಾಪ್ತಿಯ ಅಡವಿಗಳಲ್ಲಿ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಹಸಿದ ಹಸುಗಳ ದಂಡು ಆಹಾರಕ್ಕಾಗಿ ಎಲ್ಲೆಂದರಲ್ಲಿ ಅಲೆಯುತ್ತಿವೆ. ಹಳಕರ್ಟಿ, ಲಾಡ್ಲಾಪುರ, ಕಮರವಾಡಿ, ಅಳ್ಳೊಳ್ಳಿ, ಕುಂಬಾರಹಳ್ಳಿ, ಸ್ಟೇಷನ್ ತಾಂಡಾ, ಬಳವಡಗಿ, ಕೊಂಚೂರು ಭಾಗದ ಅಡವಿಗಳಲ್ಲಿ ಜಾನುವಾರುಗಳು ಮೇವಿನ ಹಾಹಾಕಾರ ಎದುರಿಸುತ್ತಿವೆ.
ಬೇಸಿಗೆ ಕಳೆಯಲು ರಸ್ತೆಗಳ ಬದಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಗ್ರಾಪಂ ಆಡಳಿತಗಳಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಕಚೇರಿ ಕಡತಗಳಲ್ಲಿ ವರದಿಯೂ ದಾಖಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ತೊಟ್ಟಿಗಳೇ ಕಾಣಸಿಗುವುದಿಲ್ಲ. ಅಲ್ಲೊಂದು ಇಲ್ಲೊಂದು ಕಂಡರೂ ಅವುಗಳಲ್ಲಿ ನೀರಿಲ್ಲ. ಜೋಳದ ಹೊಲಗಳಲ್ಲಿ ಕಣಕಿ ಬಣವೆಗಳನ್ನು ನಿರ್ಮಿಸಲಾಗಿದ್ದು, ಬೀಡಾಡಿ ದನಗಳಿಂದ ಮೇವು ರಕ್ಷಣೆಗೆ ಜಮೀನುದಾರರ ಆಳುಗಳು ಹೊಲ ಕಾಯುತ್ತಿದ್ದಾರೆ. ಮೇವಿಲ್ಲದ ಅಡವಿಯಲ್ಲಿ ಹಸುಗಳು ಮಣ್ಣು ಮೂಸಿ ನೋಡುತ್ತಿರುವ ಚಿಂತಾಜನಕ ದೃಶ್ಯಗಳು ಗೋಚರಿಸುತ್ತಿವೆ.
ಈ ವಿಷಯ ತಿಳಿದ ಶಾಸಕ ಪ್ರಿಯಾಂಕ್ ಖರ್ಗೆ ಸರಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಚಿತ್ತಾಪುರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸರಕಾರ ಇನ್ನೂ ಸ್ಪಂದಿಸಿಲ್ಲ. ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಡ್ಡಾಯವಾಗಿ ನೀರಿನ ತೊಟ್ಟಿಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ಅವುಗಳಿಗೆ ನಿತ್ಯ ನೀರು ತುಂಬಿಸಬೇಕು ಎಂದು ರೈತ ಕೃಷಿ ಕಾರ್ಮಿಕ ಸಂಘ (ಆರ್ಕೆಎಸ್) ತಾಲೂಕು ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![13-sedam](https://www.udayavani.com/wp-content/uploads/2024/07/13-sedam-150x90.jpg)
Sedam: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ಆರೋಪಿಗಳ ಬಂಧನಕ್ಕೆ ಆಗ್ರಹ
![1-sci](https://www.udayavani.com/wp-content/uploads/2024/07/1-sci-150x91.jpg)
Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ
![ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು](https://www.udayavani.com/wp-content/uploads/2024/07/chikk1-150x83.jpg)
Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು
![Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://www.udayavani.com/wp-content/uploads/2024/07/chittapura-1-150x84.jpg)
Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
![Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ](https://www.udayavani.com/wp-content/uploads/2024/07/chittapura-150x94.jpg)
Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.