ನೀರಿನ ಅಭಾವ: ಒಣಗಿದ ಕಲ್ಲಂಗಡಿ
•ಬೆಳೆಗಾರರ ಮೇಲೆ ಬೀರಿದೆ ಪರಿಣಾಮ •ಗಾಯದ ಮೇಲೆ ಬರೆ ಎಳೆದಂತಾಗಿದೆ
Team Udayavani, May 14, 2019, 4:55 PM IST
ಬಸವಕಲ್ಯಾಣ: ಕಲ್ಲಂಗಡಿ ಬೆಳೆ ಒಣಗಿರುವುದನ್ನು ತೋಟಗಾರಿಕೆ ವಲಯ ಅಧಿಕಾರಿ ಸಂಗಮನಾಥ ಘಾಳೆ ಪರಿಶೀಲಿಸಿದರು.
ಬಸವಕಲ್ಯಾಣ: ಬೇಸಿಗೆಯಲ್ಲಿ ಕಲ್ಲಂಗಡಿ ಹಾಕಿದರೆ ಕೈ ತುಂಬಾ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಆಸೆ ಮೇಲೆ ಬರಗಾಲ ತಣ್ಣೀರು ಎರಚುವಂತಾಗಿದೆ. ನೀರಿನ ಕೊರತೆಯಿಂದ ಕಲ್ಲಂಗಡಿ ಬೆಳೆ ಒಣಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಪ್ರಸಕ್ತ ವರ್ಷದಲ್ಲಿ ಬಹಳ ನಿರೀಕ್ಷೆ ಇಟ್ಟಿಕೊಂಡು ತಾಲೂಕಿನಾದ್ಯಂತ ಒಟ್ಟು 62 ಹೆಕ್ಟೇರ್ನಲ್ಲಿ ರೈತರು ಕಲ್ಲಂಗಡಿ ರೋಪಣಿ ಮಾಡಿದ್ದರು. ಇದರಲ್ಲಿ ಕೆಲವರು ಮೊದಲನೇ ಇಳುವರಿ ಪಡೆದುಕೊಂಡಿದ್ದರೆ, ಮತ್ತೆ ಕೆಲವರಿಗೆ ಅಂತರ್ಜಲ ಕುಸಿತದಿಂದ ಶೇ. 20ರಿಂದ 25ರಷ್ಟು ಇಳುವರಿ ಕಡಿಮೆ ಆಗುವುದರ ಜತೆಗೆ ಬೆಳೆ ಮೇಲೆ ಪರಿಣಾಮ ಬೀರಿರುವುದು ರೈತರ ನಿರೀಕ್ಷೆ ಹುಸಿ ಮಾಡಿದೆ.
ಇದರಿಂದ 3ರಿಂದ 4 ಕೆಜಿ ಆಗಬೇಕಾದ ಕಲ್ಲಂಗಡಿ 2 ಅಥವಾ 3 ಕೆಜಿ ಆಗುವಷ್ಟು ಗಾತ್ರದಲ್ಲಿ ಕಲ್ಲಂಗಡಿಗಳು ಹತ್ತಿಕೊಂಡಿವೆ. ಹೀಗಾಗಿ ರೈತರು ಪ್ರತಿ ಹೆಕ್ಟೇರ್ಗೆ ಮಾಡಿದ ಖರ್ಚು ತಿರುಗಿ ಬರುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕದಲ್ಲಿ ರೈತರಿದ್ದಾರೆ.
ತೋಟದಲ್ಲಿರುವ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರಿನ ಮಟ್ಟ ಕುಸಿತವಾಗಿದ್ದು, ದಿನದಲ್ಲಿ ಒಂದು ಅಥವಾ ಎರಡು ಗಂಟೆ ಮಾತ್ರ ನೀರು ಉಣಿಸಲಾಗುತ್ತಿದೆ. ಇದರಿಂದ ಅಲ್ಲಲ್ಲಿ ಒಂದೊಂದು ಕಲ್ಲಂಗಡಿಗಳು ಕಾಣುತ್ತಿದ್ದು, ನಿರೀಕ್ಷೆಗೆ ತಕ್ಕಂತೆ ಇಳುವರಿ ಬಾರದೆ ಇರುವುದು ರೈತರಿಗೆ ಮುಂದಿನ ದಾರಿ ಕಾಣದಂತಾಗಿದೆ. ನೀರಿನ ಅಭಾವದಿಂದ ಈಗಾಗಲೇ ಕಲ್ಲಂಗಡಿ ಬಳ್ಳಿ ಒಣಗಿ ಹೋಗುತ್ತಿದೆ. ಹೇಗಾದರೂ ಮಾಡಿ ಇನ್ನೂ ಸ್ವಲ್ಪ ದಿನ ಉಳಿಸಿಕೊಂಡರೆ ಇನ್ನೊಂದು ಬೆಳೆ ಪಡೆದುಕೊಳ್ಳಬೇಕು ಎಂದರೆ ನೀರು ಇಲ್ಲದಿರುವುದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ನೀರಿನ ಅಭಾವದಿಂದ ಕಲ್ಲಂಗಡಿ ಬೆಳೆಗಾರರ ಮೇಲೆ ಪರಿಣಾಮ ಬೀರಿರುವುದು ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ