ಸಾಮೂಹಿಕ ಬಿಲ್ವಾರ್ಚನೆಯಿಂದ ಲೋಕ ಕಲ್ಯಾಣ

ಬಿಲ್ವಪತ್ರಿಯು ಧಾರ್ಮಿಕದಲ್ಲಷ್ಟೇ ಅಲ್ಲ, ಆಯುರ್ವೇದದಲ್ಲಿಯೂ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ.

Team Udayavani, Aug 24, 2022, 4:41 PM IST

ಸಾಮೂಹಿಕ ಬಿಲ್ವಾರ್ಚನೆಯಿಂದ ಲೋಕ ಕಲ್ಯಾಣ

ಬೀದರ: ಸಾಮೂಹಿಕ ಬಿಲ್ವಾರ್ಚನೆಯಿಂದ ಲೋಕ ಕಲ್ಯಾಣ, ವಿಶ್ವ ಶಾಂತಿ ಸಾಧ್ಯವೆಂದು ಬೇಮಳಖೇಡ ಹಿರೇಮಠದ ಡಾ| ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ನಗರದ ನೌಬಾದನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಸಿದ್ಧಾಂತ ಶಿಖಾಮಣಿ ಶಿವದರ್ಶನ ಪ್ರವಚನ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಅಧ್ಯಾತ್ಮದಲ್ಲಿ ಶಿವಾರ್ಚನೆಯಲ್ಲಿ ಬಿಲ್ವಾರ್ಚನೆಗೆ ಅತ್ಯಂತ ಮನ್ನಣೆ ನೀಡಲಾಗಿದೆ ಎಂದರು.

ಸೃಷ್ಟಿಕರ್ತನಾದ ಶಿವನ ತ್ರಿನೇತ್ರದ ಪ್ರತೀಕವಾಗಿ ಬಿಲ್ವ ಪತ್ರಿಯು ಪ್ರಸಿದ್ಧವಾಗಿದೆ. ಮೂರು ದಳಗಳುಳ್ಳ ಒಂದು ಬಿಲ್ವಪತ್ರಿಯು ತ್ರಿನೇತ್ರನಾದ ಶಿವನಿಗೆ ಅರ್ಪಿಸಿದರೆ ಮಾನವನು ಹಿಂದೆ ಮಾಡಿದ ಮೂರು ಜನ್ಮದ ಪಾಪವು ಸುಟ್ಟುಹೋಗುತ್ತದೆ ಎಂದು ಬಿಲ್ವೋಪನಿಷತ್‌ ಹೇಳುತ್ತದೆ. ಪರಮಾತ್ಮನಿಗೆ ಬಿಲ್ವವು ಅತ್ಯಂತ ಪ್ರಿಯವಾದದ್ದು. ಬಿಲ್ವದ ಮಹತ್ವವು ಶಿವನಷ್ಟೇ ಪ್ರಖ್ಯಾತಿ ಪಡೆದಿದೆ. ನಿತ್ಯ ಲಿಂಗಾರ್ಚನೆಯಲ್ಲಿ ಬಿಲ್ವಪತ್ರಿ ಅರ್ಪಿಸಬೇಕೆಂದು ಹೇಳಲಾಗುತ್ತಿದೆ ಎಂದರು.

ಬಿಲ್ವಪತ್ರಿಯು ಧಾರ್ಮಿಕದಲ್ಲಷ್ಟೇ ಅಲ್ಲ, ಆಯುರ್ವೇದದಲ್ಲಿಯೂ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ವಾತ, ಪಿತ್ತ ಮತ್ತು ಕಫಯುಕ್ತ ಈ ಶರೀರದಲ್ಲಿ ಅನಾರೋಗ್ಯವು ಮನುಷ್ಯನನ್ನು ಸದಾಕಾಲ ಕಾಡುತ್ತಿರುತ್ತದೆ. ಈ ರೋಗಕ್ಕೆ ದಿವ್ಯ ಔಷಧವೆಂದರೆ ಬಿಲ್ವಪತ್ರಿಯಂದು ಹೇಳಲಾಗುತ್ತದೆ. ನಿತ್ಯ ಬಿಲ್ವಪತ್ರೆಯ ಮೂರು ದಳಗಳನ್ನು ಸೇವಿಸುತ್ತಿದ್ದರೆ ಸದೃಢ ಆರೋಗ್ಯ ಹೊಂದಬಹುದು. ದೇಹದ ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ ಎಂದು ತಿಳಿಸಿದರು.

ವಿಷಯುಕ್ತವಾದ ಇಂಗಾಲ ಡೈ ಆಕ್ಸೈಡನ್ನು ಹೀರಿಕೊಂಡು ಶುದ್ಧವಾದ ಆಕ್ಸಿಜನ್‌ನನ್ನು ಬಿಡುಗಡೆ ಮಾಡುವ ಗಿಡಮರಗಳಲ್ಲಿ ಬಿಲ್ವಮರ ಮುಂಚೋಣಿಯಲ್ಲಿದೆ. ಜೀವನದಲ್ಲಿರುವ ಅನೇಕ ಸಮಸ್ಯೆಗಳಿಗೆ ಬಿಲ್ವಮರಕ್ಕೆ ಪೂಜೆ ಮಾಡುವುದರಿಂದ ತಾಪತ್ರಯಗಳು ದೂರವಾಗುವವು. ಆದ್ದರಿಂದ ಪ್ರತಿ ಮನೆಗಳ ಮುಂದೆ ಪವಿತ್ರವಾದ ಬಿಲ್ವ ಮರವನ್ನು ನೆಡಬೇಕು ಎಂದು ಕರೆ ನೀಡಿದರು.

ನೂರಕ್ಕೂ ಅಧಿಕ ದಂಪತಿಗಳು ಬಿಲ್ವಾರ್ಚನೆಯನ್ನು ನಡೆಸಿದರು. ಮಾದಪ್ಪ ಭಂಗೂರೆ ಸ್ವಾಗತಿಸಿದರು. ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದ, ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ಭಂಗೂರೆ, ವಿಶ್ವನಾಥಪ್ಪ ಹುಮನಾಬಾದೆ, ಕಂಟೆಪ್ಪ ಭಂಗೂರೆ, ಕಾಶಪ್ಪ ಭಂಗೂರೆ, ಬಸವರಾಜ ಭಂಗೂರೆ, ಕಂಟೆಪ್ಪ ಕರಂಜೆ, ರೇಖಾ ವೀರಶೆಟ್ಟಿ ಭಂಗೂರೆ, ಸಂಗಮೇಶ ಹುಮನಾಬಾದೆ, ಓಂಕಾರ ಸ್ವಾಮಿ, ಸರಸ್ವತಿ ಗೌಡಶೆಟ್ಟಿ, ಪ್ರಭಾವತಿ ಹುಮನಾಬಾದೆ, ಸುನಿತ ಕಂಟೆಪ್ಪ ಭಂಗೂರೆ, ಮಹಾಂತೇಶ ಡೊಂಗರಗಿ, ಚಂದ್ರಪ್ಪ ಭಂಗೂರೆ, ಬಸವರಾಜ ಹುಮನಾಬಾದೆ ಮುಂತಾದವರಿದ್ದರು.

ಟಾಪ್ ನ್ಯೂಸ್

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.