ಮುಫತ್‌ ಗೈರಾಣ ಪ್ರದೇಶ ಅರಣ್ಯ ಇಲಾಖೆಗೆ ವಾಪಸ್‌

ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ಕುಂಟೋಜಿ ಗ್ರಾಮ ವ್ಯಾಪ್ತಿಯ 34 ಎಕರೆ

Team Udayavani, May 31, 2020, 2:36 PM IST

31-May-24

ಮುದ್ದೇಬಿಹಾಳ : ಕುಂಟೋಜಿ ಗ್ರಾಮವ್ಯಾಪ್ತಿಯ 34 ಎಕರೆ ಮುಫತ್‌ ಗೈರಾಣ ಪ್ರದೇಶದ ಕುರಿತು ಉಪ ವಲಯ ಅರಣ್ಯಾಧಿಕಾರಿ ಜತೆಗೆ ಹಸಿರುಬಳಗದ ಸದಸ್ಯರು ಚರ್ಚಿಸಿದರು

ಮುದ್ದೇಬಿಹಾಳ: ಹಲವು ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ವ್ಯಾಪ್ತಿಯ 34 ಎಕರೆ ಮುಫತ್‌ ಗೈರಾಣ ಪ್ರದೇಶವನ್ನು ತಹಶೀಲ್ದಾರ್‌ ನೆರವಿನಿಂದ ಅರಣ್ಯ ಇಲಾಖೆ ವಾಪಸ್‌ ತನ್ನ ವಶಕ್ಕೆ ಪಡೆದುಕೊಂಡು, ಅಲ್ಲಿ 3800 ಗಿಡಗಳನ್ನು ಬೆಳೆಸಿ ಮಾದರಿ ನೆಡುತೋಪು ನಿರ್ಮಿಸಲು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಶನಿವಾರ ಇಲ್ಲಿನ ಹಸಿರು ತೋರಣ ಗೆಳೆಯರ ಬಳಗದ ಪದಾಧಿಕಾರಿಗಳ ನಿಯೋಗ ಉಪ ವಲಯ ಅರಣ್ಯಾಧಿಕಾರಿ ಸುಭಾಷಚಂದ್ರ ಅವರ ಜತೆ ಆ ಪ್ರದೇಶಕ್ಕೆ ಭೇಟಿ ನೀಡಿ, ಎಲ್ಲೆಲ್ಲಿ ಗಿಡ ಬೆಳೆಸಬೇಕು ಎನ್ನುವ ಕುರಿತು ಚರ್ಚಿಸಿದ ವೇಳೆ ಈ ಪ್ರದೇಶ ವಶಪಡಿಸಿಕೊಂಡ ಯಶೋಗಾಥೆ ಹೇಳಿದರು.

ಈ ಪ್ರದೇಶವು ಕುಂಟೋಜಿಗೆ ಹೊಂದಿಕೊಂಡಿರುವ ಗುಡಿಹಾಳ ಗ್ರಾಮದ ಸೀಮೆಗೆ ಹತ್ತಿಕೊಂಡಿತ್ತು. ಇದರಲ್ಲಿ ಕೆಲವೊಂದಿಷ್ಟು ಎಕರೆ ಜಮೀನು ಖಾಸಗಿಯವರಿಂದ ಒತ್ತುವರಿ ಆಗಿತ್ತು. ಈ ಅತಿಕ್ರಮ ಗಮನಿಸಿದ್ದ ಕುಂಟೋಜಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ಎಸ್‌ .ನಾಯ್ಕೋಡಿ ಅವರು ತಹಶೀಲ್ದಾರ್‌ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಖಾಸಗಿಯವರ ಅಡ್ಡಿ ಆತಂಕದ ನಡುವೆಯೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪ್ರಸ್ತುತ ಅಂದಾಜು 4 ಕೋಟಿ ರೂ ಮಾರುಕಟ್ಟೆ ಬೆಲೆ ಬಾಳುವ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಅರಣ್ಯ ಇಲಾಖೆಯವರು 25 ದಿನಗಳವರೆಗೆ ಶ್ರಮಿಸಿ ಈ ಪ್ರದೇಶದಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ಹಳ್ಳಕೊಳ್ಳ ಸಮತಟ್ಟುಗೊಳಿಸಿದ್ದರು. ಅಲ್ಲಿ ಈಗ 3800 ಗಿಡಗಳನ್ನು ನೆಟ್ಟು ನೆಡು ತೋಪು ಮಾಡುವ ವಿಚಾರ ಇರುವುದನ್ನು ಸುಭಾಷಚಂದ್ರ ಅವರು ಚರ್ಚೆಯ ವೇಳೆ ಬಹಿರಂಗಪಡಿಸಿದರು. ಈ ಪ್ರದೇಶ ವಶಪಡಿಸಿಕೊಂಡು ಅಲ್ಲಿ ಅರಣ್ಯ ಬೆಳೆಸಲು ಸಹಕರಿಸಿದ ವಿಜಯಪುರ ಜಿಲ್ಲಾ ಡಿಸಿಎಫ್‌ ಸರೀನಾ ಸಿಕ್ಕಲಗಾರ, ಎಸಿಎಫ್‌ ಬಿ.ಪಿ.ಚವ್ಹಾಣ, ವಲಯ ಅರಣ್ಯಾಧಿಕಾರಿ ಡಿ.ಐ.ಬಿರಾದಾರ ಮತ್ತು ತಹಶೀಲ್ದಾರ್‌ ಜಿ.ಎಸ್‌.ಮಳಗಿ ಅವರ ಸಹಕಾರವನ್ನು ಇದೇ ವೇಳೆ ಸ್ಮರಿಸಲಾಯಿತು.

ಬಳಗದ ಅಧ್ಯಕ್ಷ ಅಶೋಕ ರೇವಡಿ, ಪದಾಧಿಕಾರಿಗಳಾದ ಎಲ್‌. ಎಂ.ಚಲವಾದಿ, ರಾಜಶೇಖರ ಕಲ್ಯಾಣಮಠ, ಮಹಾಬಲೇಶ್ವರ ಗಡೇದ, ನಾಗಭೂಷಣ ನಾವದಗಿ ವಕೀಲರು, ಜೇಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಬಿ.ಎಸ್‌.ಮೇಟಿ, ವರ್ತಕರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ, ಡಾ| ವೀರೇಶ ಇಟಗಿ, ಅಮರೇಶ ಗೂಳಿ, ಎಂ.ಎಸ್‌.ಬಾಗೇವಾಡಿ, ಸುರೇಶ ಕಲಾಲ, ರವಿ ತಡಸದ, ಬಿ.ಎಚ್‌.ಬಳಬಟ್ಟಿ, ಕಿರಣ ಕಡಿ, ಬಿಆರ್‌ಸಿ ಸಂಗಮೇಶ ನವಲಿ, ಅರಣ್ಯ ಇಲಾಖೆಯ ಯಲ್ಲಪ್ಪ ಹಿರೇಕುರುಬರ, ಮಲ್ಲಪ್ಪ ಇಂಗಳಗೇರಿ ಮುಂತಾದವರು ಇದ್ದರು.

ಪ್ರತಿ ಹಳ್ಳಿಯಲ್ಲಿ ಮುಫತ್‌ ಗೈರಾಣು ಪ್ರದೇಶ ಇದೆ. ಸರ್ಕಾರದ ವಿವಿಧ ಕೆಲಸಗಳಿಗೆ ಇದನ್ನು ಮೀಸಲಿಡಲಾಗಿದೆ. ಈ ಪ್ರದೇಶವನ್ನು ಮರಳಿ ವಶಕ್ಕೆ ಪಡೆದು ಅಲ್ಲಿ ಅರಣ್ಯ ಬೆಳೆಸುವ ಕೆಲಸ ನಡೆಯಬೇಕು. ತಹಸೀಲ್ದಾರ್‌, ಅರಣ್ಯಾಧಿ ಕಾರಿಗಳು ಜಂಟಿಯಾಗಿ ಈ ಅಭಿಯಾನ ಹಮ್ಮಿಕೊಂಡಲ್ಲಿ ಪರಿಸರ ಪ್ರೇಮಿಗಳು ಸಹಕಾರ ನೀಡುತ್ತಾರೆ.
ಅಶೋಕ ರೇವಡಿ,
ಅಧ್ಯಕ್ಷ, ಹಸಿರು ತೋರಣ ಗೆಳೆಯರ ಬಳಗ

ಈಗ ವಶಪಡಿಸಿಕೊಂಡಿರುವ ಪ್ರದೇಶದಲ್ಲಿ ಈಗಾಗಲೇ ತಗ್ಗು ತೆಗೆಯಲಾಗಿದ್ದು, ಮಳೆ ಪ್ರಾರಂಭಗೊಂಡ ಕೂಡಲೇ 3800 ಗಿಡ ನೆಟ್ಟು ನೆಡುತೋಪು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದೊಂದು ಮಾದರಿ ಅರಣ್ಯ ಪ್ರದೇಶವಾಗಲಿದೆ.
ಸುಭಾಷಚಂದ್ರ ಬಿ.ಕೆ.,
ಉಪ ವಲಯ ಅರಣ್ಯಾಧಿಕಾರಿ

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಐತಿಹಾಸಿಕ ಸ್ಮಾರಕ ಒತ್ತುವರಿ ತೆರವು ಕಾರ್ಯಾಚರಣೆ

Vijayapura; ಐತಿಹಾಸಿಕ ಸ್ಮಾರಕ ಒತ್ತುವರಿ ತೆರವು ಕಾರ್ಯಾಚರಣೆ

Hadagali; ಶಾಲಾ ಸಮಯಕ್ಕಿಲ್ಲ ಬಸ್: ಹೆದ್ದಾರಿ ಸಂಚಾರ ತಡೆದು ಹೋರಾಟಕ್ಕಿಳಿದ ವಿದ್ಯಾರ್ಥಿಗಳು

Hadagali; ಶಾಲಾ ಸಮಯಕ್ಕಿಲ್ಲ ಬಸ್: ಹೆದ್ದಾರಿ ಸಂಚಾರ ತಡೆದು ಹೋರಾಟಕ್ಕಿಳಿದ ವಿದ್ಯಾರ್ಥಿಗಳು

Basavana Bagewadi: ಮುಂದುವರೆದ ರಸ್ತೆಬದಿ ಅಂಗಡಿಗಳ ತೆರವು; ವ್ಯಾಪಾರಿಗಳ ಆಕ್ರೋಶ

Basavana Bagewadi: ಮುಂದುವರೆದ ರಸ್ತೆಬದಿ ಅಂಗಡಿಗಳ ತೆರವು; ವ್ಯಾಪಾರಿಗಳ ಆಕ್ರೋಶ

6-vijayapura

Vijayapura: ಸ್ಟೇಷನ್ ಬೇಲ್ ನೀಡಲು ಲಂಚ: ಇಬ್ಬರು ಕಾನ್‌ ಸ್ಟೇಬಲ್‌ ಲೋಕಾಯುಕ್ತ ಬಲೆಗೆ

Muddebihal ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು

Muddebihal ಕಾಲುವೆಯಲ್ಲಿ ಬಿದ್ದ ಕುರಿಮರಿ ರಕ್ಷಿಸಲು ಹೋಗಿದ್ದ ಯುವಕ ನೀರುಪಾಲು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.