ಸತ್ಪುರುಷರ ಪ್ರವಚನ ಆಲಿಸಿದರೆ ಜೀವನ ಸಾರ್ಥಕ

ತಿಂಥಣಿ ಮೌನೇಶ್ವರರ ಪುರಾಣ ಮಹಾಮಂಗಲ

Team Udayavani, Mar 15, 2020, 4:18 PM IST

15-March-23

ತಾಳಿಕೋಟೆ: ಶರಣ ಸತ್ಪುರುಷರ ವಾಣಿ ಕೇಳಿದರೆ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ನುಡಿದರು.

ಶರಣಮುತ್ಯಾರ ಜಾತ್ರೋತ್ಸವ ಕುರಿತು ಏರ್ಪಡಿಸಿದ್ದ ಪುರಾಣ ಮಹಾಮಂಗಲದ ನಂತರದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಶರಣರು ಸಾವಿರಾರು ವರ್ಷ ಬಾಳಿ ಬೆಳಗಿದವರಾಗಿದ್ದಾರೆ. ಅಂತವರು ಇನ್ನೂ ಗದ್ದುಗೆಯಲ್ಲಿ ವಾಸವಾಗಿದ್ದಾರೆ. ಆ ಕಾರಣದಿಂದಲೇ ಅವರನ್ನು ನೆನೆದು ಅನೇಕ ಭಕ್ತರು ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆಂದರು.

ಭಾರತೀಯ ಸಂಸ್ಕೃತಿ ಅಧ್ಯಾತ್ಮಿಕ ಸಂಸ್ಕೃತಿಯಾಗಿ ಬೆಳಗಿ ಬಂದಿದ್ದು ಇಲ್ಲಿ ಯೋಗಿ ತ್ಯಾಗಿಗಳಾಗಿ ಹೋಗಿದ್ದಾರೆ. ಇಂತಹದ್ದರಿಂದಲೇ ನಮ್ಮ ದೇಶದಲ್ಲಿ ಯಾವುದೇ ಆತಂಕಗಳು ಬರುತ್ತಿಲ್ಲ. ನೆರೆ ದೇಶದ ಜನತೆ ತಮ್ಮ ದೇಶಾಭಿಮಾನ ತೋರಿಸುತ್ತ ಸಾಗಿದ್ದಾರೆ. ಅಂತಹದ್ದನ್ನು ಅರಿತುಕೊಂಡು ನಮ್ಮ ದೇಶದ ಜನತೆ ನಡೆದರೆ ಇನ್ನೂ ದೇಶಾಭಿಮಾನ ಹೆಚ್ಚಾಗಿ ಭವ್ಯ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಪಡೇಕನೂರ ದಾಸೋಹ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾಳಿಕೋಟೆಯಲ್ಲಿ ಈ ಹಿಂದೆ ಪಾವನಭೂಮಿ ಮಾಡಿ ಸಾಗಿದ ಖಾಸYತರು ಹಾಗೂ ಮಹಾಶರಣ ಶರಣಮುತ್ಯಾರವರು ಈ ಭಾಗದ ನಡೆದಾಡುವ ದೇವರೆಂದು ಅನಿಸಿಕೊಂಡಿದ್ದಾರೆ. ನಂಬಿದ ಭಕ್ತರಿಗೆ ಬೇಕು ಬೇಡಿಕೆಗಳನ್ನು ಈಡೇರಿಸುತ್ತ ಸಾಗಿದ್ದರಿಂದ ಅವರ ಜಾತ್ರೋತ್ಸವಗಳು ಇನ್ನೂ ವಿಜೃಂಭಣೆಯಿಂದ ಜರುಗುತ್ತಿವೆ ಎಂದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.

ಯಾದಗಿರಿ ಜಿಪಂ ಸದಸ್ಯ ಬಸಯ್ಯಮುತ್ಯಾ ಸ್ಥಾವರಮಠ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಅನೇಕ ಸಂತರು ಮಹಾಪುರುಷರು ಆಗಿ ಹೋಗಿದ್ದರಿಂದ ನಮ್ಮ ದೇಶದಲ್ಲಿ ಒಳ್ಳೆ ಸಂಸ್ಕೃತಿ ಇನ್ನೂ ತಲೆ ಎತ್ತಿ ನಿಲ್ಲುತ್ತ ಸಾಗಿದೆ ಎಂದರು. ಈ ವೇಳೆ 20 ದಿನಗಳವರೆಗೆ ಸಾಂಭಪ್ರಭು ಶರಣಮುತ್ಯಾರ ಜಾತ್ರೋತ್ಸವ ಕುರಿತು ಸಾಗಿಬಂದ ತಿಂಥಣಿ ಮೌನೇಶ್ವರರ ಪುರಾಣವನ್ನು ಸಂಗ್ರಹಿಸಿ ಪುಸ್ತಕ ರಚಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಪುರಾಣಿಕರಿಗೆ ಹಾಗೂ ಶರಣರ ಮಠದ ಶ್ರೀಗಳಿಗೆ ಕೃತಿ ಅರ್ಪಿಸಿದರು.

ವಿಜಯಪುರದ ಶಿಕ್ಷಣ ತಜ್ಞ ಚಂದನಗೌಡ ಮಾಲಿಪಾಟೀಲ ಅವರಿಗೆ ಶಿಕ್ಷಣ ರತ್ನ, ವಿಜಯಪುರದ ಬಿಎಲ್‌ ಡಿಇ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಪ್ರಾಧ್ಯಾಪಕರು, ಉಪ ಅರಕ್ಷಕರು ಆದ ವಿಜಯಕುಮಾರ ವಾರದ ಅವರಿಗೆ ವೈದ್ಯ ರತ್ನ ಹಾಗೂ ತಾಳಿಕೋಟೆಯ ಭಾಗ್ಯವಂತಿ ಆಸ್ಪತ್ರೆಯ ಡಾ| ಈರಗಂಟೆಪ್ಪ ತಳ್ಳೋಳ್ಳಿ ಅವರಿಗೂ ವೈದ್ಯರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಡಗೇರಿಯ ಪುರಾಣಿಕರಾದ ವೇ| ಮಲ್ಲಯ್ಯ ಸ್ವಾಮಿ ಹಿರೇಮಠ ಹಾಗೂ ಸಂಗೀತಗಾರರಾದ ಹನುಮಂತ್ರಾಯ ಬಳಗಾನೂರ, ಬಸನಗೌಡ ಬಿರಾದಾರಗೆ ಸನ್ಮಾನಿಸಲಾಯಿತು. ಸಾಂಭಪ್ರಭು ಶರಣರ ಮಠದ ಬಸಣ್ಣ ಶರಣರು, ಶರಣಪ್ಪ ಶರಣರು, ಆರ್‌.ಎಸ್‌. ಪಾಟೀಲ (ಕೂಚಬಾಳ), ಸೋಮನಗೌಡ ಪಾಟೀಲ (ನಡಹಳ್ಳಿ), ಮಹಾಂತಗೌಡ ಪಾಟೀಲ, ಮಲ್ಲಿಕಾರ್ಜುನ ಗಂಗಾದರಮಠ, ಕಾಶಿರಾಯ ದೇಸಾಯಿ ಶಳ್ಳಗಿ, ಬಸವರಾಜ ಪ್ಯಾಟಿಗೌಡರ, ವಜ್ಜಲ ಶರಣರು, ಸಾಹೇಬಗೌಡ ಮುದಗೋಳ, ಕಾಶೀನಾಥ ಮುರಾಳ, ಸಿದ್ದನಗೌಡ ಪೊಲೀಸ್‌ಪಾಟೀಲ, ಸಿದ್ದಣ್ಣ ಶರಣರ, ಮಲ್ಲಣ್ಣ ಶರಣರ, ಈರಣ್ಣ ಶರಣರ, ಮಲ್ಲಣ್ಣ ಇಂಗಳಗಿ, ಶರಣಪ್ಪ ದೊರಿ, ಸಂಗಮೇಶ ಶರಣರ, ಭೀಮಣ್ಣ ಇಂಗಳಗಿ, ಬಸು ಛಾಂದಕೋಟೆ, ಶ್ರೀಕಾಂತ ಕುಂಭಾರ ಇದ್ದರು. ಶರಣಮ್ಮ ಕುಂಬಾರ ಪ್ರಾರ್ಥಿಸಿದರು. ಶರಣಗೌಡ ಪೊಲೀಸ್‌ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.