ನೀರಿನ ಸಮಸ್ಯೆ: ಪುರಸಭೆ ಮುಖ್ಯಾಧಿಕಾರಿ ತರಾಟೆಗ


Team Udayavani, Mar 6, 2018, 4:58 PM IST

vij-1.jpg

ಮುದ್ದೇಬಿಹಾಳ: ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಸರಿಪಡಿಸಲು ಕ್ರಮ ಕೈಕೊಳ್ಳದ ಪುರಸಭೆ ಆಡಳಿತದ ವಿರುದ್ಧ ಆಕ್ರೋಶಗೊಂಡ ಮಹಿಳೆಯರು ಸೋಮವಾರ ತಮ್ಮ ಬಡಾವಣೆಯಲ್ಲಿ ಖಾಲಿ ಕೊಡ ಸಮೇತ ಪ್ರತಿಭಟನೆ ನಡೆಸಿದ ಘಟನೆ ಮಾರುತಿನಗರದಲ್ಲಿ ಸೋಮವಾರ ನಡೆದಿದೆ.

ಪುರಸಭೆ ಮುಖ್ಯಾಧಿಕಾರಿಣಿ ಎಸ್‌.ಎಸ್‌. ಬಾಗಲಕೋಟ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮಾರುತಿನಗರ ವಾರ್ಡ್‌ ಪ್ರತಿನಿಧಿ ಸುವ ಪುರಸಭೆ ಸದಸ್ಯ ಮನೋಹರ ತುಪ್ಪದ ಅವರ ಎದುರೇ ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.

ಬಡಾವಣೆಯ ಉದ್ಯಾನವನ ಜಾಗೆಯಲ್ಲಿ ವಾಸವಿರುವ ನಿವಾಸಿಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಕುಡಿಯಲು ಮತ್ತು ಬಳಸಲು ಸಾಕಷ್ಟು ಸಮಸ್ಯೆ ಆಗಿದೆ. ಇಲ್ಲಿರುವ ಕೈಪಂಪುಗಳು ದುರಸ್ಥಿಗೆ ಬಂದಿದ್ದರೂ ದುರಸ್ಥಿ ಮಾಡಿಸುವ ಕಾಳಜಿ ತೋರಿಸುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿ ನೀರು ಒದಗಿಸಿ ಎಂದು ವರ್ಷದಿಂದ ಮನವಿ ಮಾಡಿಕೊಳ್ಳುತ್ತಿದ್ದರೂ ಕಾಳಜಿ ತೋರುತ್ತಿಲ್ಲ ಎಂದು ಮಹಿಳೆಯರು ಹರಿಹಾಯ್ದರು.

ಮಾರುತಿನಗರ ವಾರ್ಡ್‌ ಪುರಸಭೆ ಸದಸ್ಯ ಮನೋಹರ ತುಪ್ಪದ ಅವರು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ನೀರಿನ ಸಮಸ್ಯೆ ಬಗೆಹರಿಸಿ ಎಂದು ಕೋರಿದರೂ ಪುರಸಭೆ ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನೀರು ಬಿಡುವ ವಾಟರ್‌ಮನ್‌ ಶಿವಾನಂದ ಬೋಳಿ ಎಂಬಾತನಿಗೆ ಸಮಸ್ಯೆಯ ಅರಿವಿದ್ದು, ಆತ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಮಹಿಳೆಯರು ಆಕ್ರೋಶ ತೋಡಿಕೊಂಡರು.

ಪುರಸಭೆ ಕರ ವಸೂಲಿಗಾರರು ಪ್ರತಿ ವರ್ಷ ತಪ್ಪದೆ ಕರ್ತವ್ಯಪ್ರಜ್ಞೆ ತೋರಿಸಿ ನೀರಿನ ಬಿಲ್‌ ವಸೂಲಿ ಮಾಡುತ್ತಾರೆ. ಆದರೆ, ಬಿಲ್‌ ವಸೂಲಿ ಮಾಡಿದಂತೆ ಕುಡಿವ ನೀರು ಕೊಡಲು ಮಾತ್ರ ಕರ್ತವ್ಯ ಪ್ರಜ್ಞೆ ತೋರುತ್ತಿಲ್ಲ. ನಿತ್ಯ ಖಾಲಿ ಕೊಡ ಹಿಡಿದು ನೀರಿಗೆ ಅಲೆಯುವ ಸ್ಥಿತಿ ಬರಲು ಪುರಸಭೆ ಆಡಳಿತದ ನಿರಾಸಕ್ತಿ, ಅಧಿಕಾರಿ ವರ್ಗದ ಬೇಜವಾಬ್ದಾರಿತನವೇ ಕಾರಣ ಎಂದು ದೂರಿದರು. ಬಡಾವಣೆಯಲ್ಲಿ ಕೊಳಚೆ, ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲ, ತಿರುಗಾಡಲು ಸಮರ್ಪಕ ರಸ್ತೆ ಇಲ್ಲ. ಕೂಡಲೇ ಮೂಲಸೌಕರ್ಯ ಒದಗಿಸಲು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.

ಮುಖ್ಯಾಧಿಕಾರಿಣಿ ಎಸ್‌.ಎಸ್‌.ಬಾಗಲಕೋಟ ಪ್ರತಿಕ್ರಿಯಿಸಿ, ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಪರ್ಯಾಯ
ವ್ಯವಸ್ಥೆ ಮಾಡುವ ಮೂಲಕ ಕುಡಿವ ನೀರು ದೊರಕುವಂತೆ ನೋಡಿಕೊಳ್ಳುತ್ತೇನೆ. ಕೈಪಂಪುಗಳನ್ನು ದುರಸ್ಥಿ ಮಾಡಿಸಿಕೊಡುತ್ತೇನೆ. 

ಕಿರು ನೀರು ಸರಬರಾಜು ಸೌಲಭ್ಯ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸಯ್ಯ ನಂದಿಕೇಶ್ವರಮಠ, ಪುರಸಭೆ ಸದಸ್ಯ ಮನೋಹರ ತುಪ್ಪದ, ಶಾಂತಲಾ ಧೂಪದ, ಸುಧಾ ಕಟ್ಟಿಮನಿ, ರುದ್ರಮ್ಮ ಜಾವೂರ, ಸುವರ್ಣ ನಂದಿಕೇಶ್ವರಮಠ, ಸಂಗಮ್ಮ ಹೊಸಗೌಡರ, ಶಕುಂತಲಾ ಮಾಮನಿ, ರೇಣುಕಾ ಹಳ್ಳೂರ, ಶಕುಂತಲಾ ಕೊಪ್ಪದ, ಗುರುದೇವಿ ಪಾಟೀಲ, ಶಾಂತಾ ಬಾಣಲದಿನ್ನಿ, ಸುಮಿತ್ರಾ ಹುಲಗನ್ನವರ್‌, ಕಮಲಾಕ್ಷಿ ಗೌಡರ, ಶಾಂತಾ ಹಾವರಗಿ, ಪ್ರಭಾವತಿ ಪಾಟೀಲ ಇತರರಿದ್ದರು. 

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.