ಕ್ಷೌರಿಕ ವೃತ್ತಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸವಿತಾ ಸಮಾಜ
ಇಂದು ವಿಶ್ವ ಕ್ಷೌರಿಕರ ದಿನಾಚರಣೆ
Team Udayavani, Sep 16, 2020, 4:36 PM IST
ಚಿಕ್ಕಬಳ್ಳಾಪುರ: ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಸವಿತಾ ಸಮಾಜದ ಬಂಧುಗಳು ವೃತ್ತಿ ಪಾವಿತ್ರ್ಯತೆ ಕಾಪಾಡಿ ಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳಿಂದ ಬರುವ ಸೌಲಭ್ಯಪಡೆದುಕೊಳ್ಳುವ ಜೊತೆಗೆ ಆರೋಗ್ಯವಂತ ಸಮಾಜ ವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆ ನೀಡಿ ಕೇವಲ ಕ್ಷೌರಿಕ ವೃತ್ತಿಮಾತ್ರವಲ್ಲದೆ ಕಲೆಯಲ್ಲಿ ಸಹ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ.
ದಿನಾಚರಣೆ ಗೊತ್ತಿಲ್ಲ: 1096ರಲ್ಲಿ ಫ್ರಾನ್ಸ್ನಲ್ಲಿ ಕ್ಷೌರಿಕವೃತ್ತಿಯಲ್ಲಿ ತೊಡಗಿದ್ದ ಸವಿತಾ ಸಮಾಜದವರು ಕ್ಷೌರಿಕರು ಕೇವಲ ಕ್ಷೌರಿಕರು ಮಾತ್ರವಲ್ಲ, ಸಣ್ಣ ಸಣ್ಣ ಶಸ್ತ್ರ ಚಿಕಿತ್ಸೆ, ಗಾಯಗಳನ್ನು ವಾಸಿಪಡಿಸಲು ಔಷಧಿ ನೀಡಿ ಹಲ್ಲುಗಳು ಕೀಳು ವಂತಹ ಕೆಲಸದಲ್ಲಿ ಸಹ ತೊಡಗಿಸಿ ಕೊಂಡಿದ್ದಾರೆ ಎಂದು ಸಂಘ ಸ್ಥಾಪಿಸಿದರು.ಅಂದಿನಿಂದ ಇದು ವರೆಗೆ ಸೆ.16ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲಾಗುತ್ತದೆ.
ಆದರೆ ಬಹುತೇಕ ಸವಿತಾ ಸಮಾಜದ ಬಂಧುಗಳಿಗೆ ತಮ್ಮ ದಿನಾ ಚರಣೆ ಕೂಡ ನೆನಪಿಲ್ಲ.ಮಂಗಳವಾರಹೊರತುಪಡಿಸಿ ಪ್ರತಿನಿತ್ಯ ಬೆಳಗಿನ ಜಾವ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
ಬ್ಯೂಟಿಷಿಯನ್ ಮಾರ್ಗ: ಕೇವಲ ಸವಿತಾ ಸಮಾಜ ಮಾತ್ರವಲ್ಲದೆ ಇತರೆ ಸಮಾಜ ಮತ್ತು ಸಮುದಾಯಗಳ ಜನ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮತ್ತೂಂದೆಡೆ ಮಹಿಳೆಯರು ಸಹ ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರುಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರುಆರ್ಥಿವಾಗಿ ಅಭಿವೃದ್ಧಿ ಹೊಂದಲುಬ್ಯೂಟಿಷಿಯನ್ ಮಾರ್ಗ ಕಂಡುಕೊಂಡಿದ್ದಾರೆ.
ವೃತ್ತಿಯನ್ನು ಅವಹೇಳನೆ ಮಾಡು ವಂತಹ ಪದ ಬಳಸುವುದರಿಂದ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸವಿತಾ ಸಮಾಜದವರಿಗೆ ಮುಜುಗರ, ಅವಮಾನ ಮಾಡಿದಂತಾಗುತ್ತದೆ. ಅದಕ್ಕಾಗಿ ಸರ್ಕಾರ ಅಟ್ರಾಸಿಟಿ ಮಾದರಿಯಲ್ಲಿ ನಿಬಂಧಿತ ಪದವನ್ನು ಬಳಕೆ ಮಾಡುವವರನ್ನು ಕೇಸು ಹಾಕಿ ಕಾನೂನುಕ್ರಮ ಜರುಗಿಸಬೇಕೆಂಬ ಧ್ವನಿ ಎಲ್ಲೆಡೆಯಿಂದಕೇಳಿ ಬರುತ್ತಿದೆ.
ಅರಸು ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ ರಾಜ್ಯದಲ್ಲಿ ಸವಿತಾ ಸಮಾಜದ ನಿಗಮ ಸ್ಥಾಪನೆ ಯಾದ ಬಳಿಕ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 7 ಮಂದಿಗೆ ಸ್ವಯಂ ಉದ್ಯೋಗಕೈಗೊಳ್ಳಲು 50 ಸಾವಿರ ರೂ. ಸಾಲ ನೀಡಲುಕ್ರಮಕೈಗೊಂಡಿದ್ದೇವೆ. – ಆರ್.ಬಸವರಾಜು, ಜಿಲ್ಲಾ ವ್ಯವಸ್ಥಾಪಕರು, ದಿ.ದೇವರಾಜ ಅರಸು ಅಭಿವೃದ್ಧಿ ನಿಗಮ
ಜಿಲ್ಲೆಯಲ್ಲಿ 12 ಸಾವಿರ ಸವಿತಾ ಸಮಾಜದ ಬಂಧುಗಳು ಕ್ಷೌರಿಕ ವೃತ್ತಿ ಮತ್ತು ನಾದಸ್ವರ, ಡೋಲುಮುಂತಾದಕಲೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಸರ್ಕಾರಕೋವಿಡ್ ಸಂದರ್ಭದಲ್ಲಿ 5 ಸಾವಿರ ರೂ. ಪ್ರೋತ್ಸಾಹ ಧನ ಎಲ್ಲರಿಗೂ ಕಲ್ಪಿಸಬೇಕು. –ಚಲಪತಿ, ಜಿಲ್ಲಾ ಸವಿತಾ ಸಮಾಜ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ!
Lok Sabha election: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಅಭ್ಯರ್ಥಿಗಳೇ ಹೆಚ್ಚು!
Lok Sabha Elections 2024: 29 ಅಭ್ಯರ್ಥಿಗಳ ಸ್ಪರ್ಧೆ ಇದೇ ಮೊದಲು!
MUST WATCH
ಹೊಸ ಸೇರ್ಪಡೆ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ