![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮಗಳ ಶಸ್ತ್ರಚಿಕಿತ್ಸೆಗೆ ತಾಯಿಯ ಪರದಾಟ
Team Udayavani, Jul 5, 2018, 3:28 PM IST
![has-2.jpg](https://www.udayavani.com/wp-content/uploads/2018/07/5/has-2.jpg)
ಚಿಕ್ಕಬಳ್ಳಾಪುರ: ಇಡೀ ಮನೆಯವರೆಲ್ಲಾ ಹುಟ್ಟು ಅಂಗವಿಕಲರು. ಬದುಕಿನ ಬಂಡಿ ನಡೆಸುವುದೇ ತೀರಾ ಕಷ್ಟ. ಮನೆಗೆ ಆಸರೆಯಾಗಿದ್ದ ಯಾಜಮಾನ ಇಹಲೋಕ ತ್ಯಜಿಸಿ 22 ವರ್ಷಗಳೇ ಉರುಳಿವೆ. ಬದುಕಿಗಾಗಿ ಹೂವು ಮಾರಿ ಕೊಂಡು ಜೀವನ ನಡೆಸುತ್ತಿದ್ದ ಆ ಕುಟುಂಬದಲ್ಲಿ ಈಗ ಕಿತ್ತು ತಿನ್ನುವ ಬಡತನ. ಮತ್ತೂಂದಡೆ ಸಾವು ಬದುಕಿನ ನಡುವೆ ಇರುವ ಮಗಳ ಉಳಿಸಿಕೊಳ್ಳುವ ಸವಾಲು.. ಹೌದು ಇಂಥ ಧಾರುಣ ಸ್ಥಿತಿಯಲಿರುವುದು ನಗರದ 28ನೇ ವಾರ್ಡಿನ ಮುನಿತಾಯಮ್ಮ ಕುಟುಂಬ. ಹುಟ್ಟು ಅಂಗವಿಕಲರಾಗಿರುವ ಮುನಿತಾಯಮ್ಮಗೆ ಮೌವಿಕ ಹಾಗು ಅಶ್ವಿನಿ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಹೂ ಕಟ್ಟಿ ಮಾರಿಕೊಂಡು ಹೇಗೋ ಬದುಕು ದೂಡುತ್ತಿದ್ದ ಮುನಿತಾಯಮ್ಮಗೆ ಕಷ್ಟ ತಪ್ಪಲಿಲ್ಲ. ಮನೆಯ ಸಂಕಷ್ಟ ನೋಡಿ ಮೌವಿಕ ಉಡುಪು ಕಾರ್ಖಾನೆ ಕೆಲಸಕ್ಕೆ ಹೋದರು ಕೈ ಹಿಡಿಯಲಿಲ್ಲ. ಮೌವಿಕ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡು ಹಾಸಿಗೆ ಹಿಡಿದಳು. ಇದ್ದಕ್ಕಿದ್ದಂತೆ ಮೌವಿಕ ನಡೆಯಲಾಗದ ವಿಷಮ ಸ್ಥಿತಿಗೆ ತಲುಪಿದ್ದು ಮನೆಯ ವನ್ನು ಕಂಗಾಲಾಗಿಸಿದೆ.
ಚಿಕಿತ್ಸೆ ಫಲ ನೀಡಿಲ್ಲ: ಮೊದಲೇ ಸಂಕಷ್ಟದಲ್ಲಿ ದಿನದೂಡುತ್ತಿರುವ ಮುನಿತಾ ಯಮ್ಮಗೆ ಒಂದಡೆ ಕುಟುಂಬ ನಿರ್ವಹಣೆ ಜತೆಗೆ ಹಾಸಿಗೆ ಹಿಡಿದ ಮೌವಿಕ ಆರೋಗ್ಯ ಕಾಪಾಡುವುದು ಸವಾಲಾ ಗಿದೆ. ಆಸ್ಪತ್ರೆಯ ಚಿಕಿತ್ಸೆ ಫಲ ನೀಡಿಲ್ಲ. ಎರಡು ಬಾರಿ ಲಕ್ಷಾಂತರ ರೂ, ಖುರ್ಚು ಮಾಡಿ ಮಾಡಿಸಿದ ಶಸ್ತ್ರಚಿಕಿತ್ಸೆ ವಿಫಲ ವಾಗಿದೆ. ಸದ್ಯ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೂರನೇ ಬಾರಿಗೆ ಮೌವಿಕಳ ಕಾಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಿತ್ತು ತಿನ್ನುವ ಬಡತನ ದಲ್ಲಿರುವ ತಾಯಿ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಈ ಹಿಂದೆ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಮುನಿ ತಾಯಮ್ಮ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕುಟುಂಬದ ಕಣ್ಣೀರಿನ ಕಥೆ ಕೇಳಿ ಕೆಲವು ದಾನಿಗಳು ಮುಂದೆ ಬಂದು ಹಣ ಕೊಟ್ಟಿದ್ದಾರೆ. ಆದರೂ ಶಸ್ತ್ರಚಿಕಿತ್ಸೆಗೆ ಬೇಕಾದ ಹಣ ಇನ್ನೂ ಕುಟುಂಬಕ್ಕೆ ಅವಶ್ಯಕವಾಗಿದ್ದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಮುನಿತಾಯಮ್ಮ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಬಯಸುವವರು ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಳ್ಳಾಪುರ ಶಾಖೆಯ ಖಾತೆ ಸಂಖ್ಯೆ 846310110004529ಕ್ಕೆ (ಐಎಫ್ಎಸ್ಸಿ ಕೋಡ್: % ,’ 0008463) ಹಣ ಜಮೆ ಮಾಡಬಹುದು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![2-gudibande](https://www.udayavani.com/wp-content/uploads/2024/07/2-gudibande-150x90.jpg)
Gudibande: ಬೆಳ್ಳಂಬೆಳಗ್ಗೆ ಶೂಟ್ ಔಟ್, ಓರ್ವ ಸಾವು
![Chikkaballapura: ಇದು ರಾಜಕೀಯ ಬಜೆಟ್ ಅಲ್ಲ, ರಾಷ್ಟ್ರೀಯ ಬಜೆಟ್: ಸಂಸದ ಡಾ.ಕೆ.ಸುಧಾಕರ್](https://www.udayavani.com/wp-content/uploads/2024/07/sudhakar-1-150x108.jpg)
Chikkaballapura: ಇದು ರಾಜಕೀಯ ಬಜೆಟ್ ಅಲ್ಲ, ರಾಷ್ಟ್ರೀಯ ಬಜೆಟ್: ಸಂಸದ ಡಾ.ಕೆ.ಸುಧಾಕರ್
![Chikkaballapur: Siddaramaiah should resign if there is morality: MP Dr K Sudhakar](https://www.udayavani.com/wp-content/uploads/2024/07/sudhakr-150x83.jpg)
Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್
![Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ನಟ ಚೇತನ್ ಆರೋಪ](https://www.udayavani.com/wp-content/uploads/2024/07/chethan-150x105.jpg)
MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್
![4-gudibande](https://www.udayavani.com/wp-content/uploads/2024/07/4-gudibande-150x90.jpg)
Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.