ಮುಂಬೈ ನಂಜು: ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾ!


Team Udayavani, May 25, 2020, 8:07 AM IST

jilladhalita

ಚಿಕ್ಕಬಳ್ಳಾಪುರ: ಕೋವಿಡ್‌ 19 ಮುಕ್ತ ಜಿಲ್ಲೆಯ ಕನಸು ಕಾಣುತ್ತಿದ್ದ ಜಿಲ್ಲೆಗೆ ಕಂಟಕವಾದ ಮುಂಬೈ ವಲಸಿಗರು, ಹಸಿರು ವಲಯ ದತ್ತ ಸಾಗಿದ್ದ ಜಿಲ್ಲೆಗೆ ಈಗ ಕೆಂಪು ವಲಯದ ಕಪ್ಪು ಚುಕ್ಕೆ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಖುದ್ದು  ವಿರೋಧಿಸಿದರೂ ಜಿಲ್ಲೆಗೆ ತಂದು ಬಿಟ್ಟರು ಕೋವಿಡ್‌ 19 ಸೋಂಕಿತ ಮುಂಬೈ ವಲಸಿಗರನ್ನ. ಮಹಾಮಾರಿ ಕೋವಿಡ್‌ 19 ಜಿಲ್ಲಾಡಳಿತದ ಲೆಕ್ಕಚಾರವನ್ನೇ ತಲೆಕೆಳಗೆ ಮಾಡಿದೆ.

ಜಿಲ್ಲೆ ಯಲ್ಲಿ ಮೇ 22 ರವರೆಗೂ ಬರೀ 26 ಮಂದಿ ಯಲ್ಲಿ  ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಆ ಪೈಕಿ ಇಬ್ಬರು ಮೃತಪಟ್ಟು 19 ಮಂದಿ ಚೇತ ರಿಕೆ ಕಂಡು ಐವರು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಜಿಲ್ಲೆಯಲ್ಲಿ ಸೋಂಕಿತರು ಗುಣ ಮುಖರಾಗಿ ಜಿಲ್ಲೆ ಹಸಿರು ವಲಯಕ್ಕೆ ಹೋಗ ಲಿದೆ ಎನ್ನುವಷ್ಟರಲ್ಲಿ ಜಿಲ್ಲೆಗೆ ಮುಂಬೈ ನಂಜು ಅಂಟಿಕೊಂಡಿದೆ.

3 ದಿನದಲ್ಲಿ ಶತಕ ಬಾರಿಸಿದ ಕೋವಿಡ್‌ 19: ಜಿಲ್ಲೆಗೆ ಮುಂಬೈ ನಿಂದ ವಲಸಿಗರನ್ನು ಕರೆ ತಂದಿದ್ದೆ ಈಗ ಜಿಲ್ಲೆಗೆ ಶಾಪವಾಗಿದೆ. ವಲಸಿಗರು ಬಂದ ಮೂರೇ ದಿನಕ್ಕೆ ಹಾಗೂ  ಬಾಗೇಪಲ್ಲಿ ಗರ್ಭಿಣಿ ಸೋಂಕಿತೆ ಸೇರಿ ಜಿಲ್ಲೆಯಲ್ಲಿ ಶತಕ ಬಾರಿ ಸಿದೆ. ಕಳೆದ ಶುಕ್ರವಾರ 47 ಮಂದಿ ವಲಸಿಗ ರಲ್ಲಿ ಕಂಡು ಬಂದಿದ್ದ ಕೋವಿಡ್‌ 19, ಎರಡನೇ ದಿನ ಶನಿವಾರ 26 ಮಂದಿಯಲ್ಲಿ ಕಾಣಿಸಿ ಕೊಂಡರೆ, ಭಾನು ವಾರ 27ಕ್ಕೆ ಏರಿಕೆ  ಕಂಡಿದೆ.

ಹೀಗಾಗಿ ಮೂರು ದಿನದಲ್ಲಿ ವಲಸಿ ಗರ ಆಗಮನದ ಪರಿಣಾಮ ಜಿಲ್ಲೆಯಲ್ಲಿ ಸೋಂಕಿ ತರ ಸಂಖ್ಯೆ 126ಕ್ಕೆ ಏರಿಕೆ ಕಂಡಿದೆ. ಆರಂಭ ದಲ್ಲಿ ಜಿಲ್ಲೆಯಲ್ಲಿ ಕೋವಿಡ್‌ 19 ಆರ್ಭಟ ನಿಯಂತ್ರಣದಲ್ಲಿತ್ತು. ಜಿಲ್ಲಾಡಳಿತ ಕೂಡ ಸೋಂಕಿತರ  ಹಾಗೂ ಅವರ ಸಂಪರ್ಕದಲ್ಲಿದ್ದವರನ್ನು ಸಮರ್ಪಕವಾಗಿ ಕ್ವಾರಂಟೈನ್‌ ಮಾಡಿ ಸೋಂಕಿ ತರ ಪ್ರಮಾಣ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.

ಆದರೆ, ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ  ವಲಸಿಗರ ಆಗಮಕ್ಕೆ ಅವಕಾಶ ನೀಡಿದ್ದೆ ತಡ ಜಿಲ್ಲೆಯಲ್ಲೀಗ ಕೋವಿಡ್‌ 19 ನಾಗಲೋಟ ಬ್ರೇಕ್‌ ಇಲ್ಲದೇ ಸಾಗಿದ್ದು, ಜಿಲ್ಲಾಡ ಳಿತಕ್ಕೆ ಮುಂಬೈ ವಲಸಿಗರು ಸಂಕಷ್ಟ, ಸಂಕಟ ತಂದಿದ್ದು, ಸಾರ್ವ ಜನಿಕರಲ್ಲಿ ಆತಂಕ ಉಂಟು ಮಾಡಿದೆ.  ಸದ್ಯಕ್ಕೆ ವಲಸಿಗರು ಆಗ ಮನಕ್ಕೆ ರಾಜ್ಯ ಸರ್ಕಾರವೇ ಬ್ರೇಕ್‌ ಹಾಕಿದೆ. ಆದರೆ ಜಿಲ್ಲೆಗೆ ಆಗ ಮಿಸಿರುವ ಸುಮಾರು 253 ಮುಂಬೈ ವಲಸಿಗರ ಪೈಕಿ ಇದುವರೆಗೂ 99 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ 37 ಮಂದಿ ವರದಿ ಬಾಕಿ ಇದೆ.

ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗ ಮಿಸಿರುವ ಕಾರ್ಮಿಕರಿಗೆ ನನ್ನ ಕಡೆಯಿಂದ ಅನುಮತಿ ಕೊಟ್ಟಿರಲಿಲ್ಲ. ಆದರೆ ಸರ್ಕಾರದ ಮಟ್ಟದಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಅವರನ್ನು ಜಿಲ್ಲೆಗೆ ಕರೆಸಿಕೊಳ್ಳಬೇಕೆಂಬ ಆದೇಶದ ಮೇರೆಗೆ ನಾವು ಅವರನ್ನು ಸಾರ್ವಜನಿಕರ ಸಂಪರ್ಕಕ್ಕೆ ಬಿಡದೇ ಎಲ್ಲರನ್ನು ಕ್ವಾರಂಟೈನ್‌ ಮಾಡಿದ್ದೇವೆ. 
-ಆರ್‌.ಲತಾ, ಜಿಲ್ಲಾಧಿಕಾರಿ, ಮಾಧ್ಯಮ ಹೇಳಿಕೆ

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-gudibande

Gudibande: ಬೆಳ್ಳಂಬೆಳಗ್ಗೆ ಶೂಟ್ ಔಟ್, ಓರ್ವ ಸಾವು

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapura: ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌: ಸಂಸದ ಡಾ.ಕೆ.ಸುಧಾಕರ್‌

Chikkaballapur: Siddaramaiah should resign if there is morality: MP Dr K Sudhakar

Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್

Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ನಟ ಚೇತನ್ ಆರೋಪ

MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್

4-gudibande

Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.