ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಕಾರ್ಡ್ ಚಳುವಳಿ
Team Udayavani, Oct 3, 2020, 6:09 PM IST
ಶೃಂಗೇರಿ: ತಾಲೂಕಿನಲ್ಲಿ ಹಕ್ಕುಪತ್ರ, ಕೃಷಿ ಸಾಗುವಳಿ ಮಂಜೂರಾತಿ ಹಾಗೂ ಮೆಣಸೆಯಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಕ್ಕಾಗಿ ಆಗ್ರಹಿಸಿ ಗಾಂಧಿ ಜಯಂತಿ ದಿನದಂದು ಜಿಲ್ಲಾ ಧಿಕಾರಿಗಳು ಹಾಗೂ ಮೆಸ್ಕಾಂಗೆ ಅಂಚೆ ಕಾರ್ಡ್ ಚಳುವಳಿ ಆರಂಭಿಸಲಾಯಿತು.
ಮೆಣಸೆ ಅಂಚೆ ಕಚೇರಿ ಎದುರು ಶುಕ್ರವಾರ ಏರ್ಪಡಿಸಿದ್ದ ಅಂಚೆ ಕಾರ್ಡ್ ಚಳುವಳಿ ಸಂದರ್ಭದಲ್ಲಿ ಮಾತನಾಡಿದ ಹೊಸ್ತೋಟ ತ್ರಿಮೂರ್ತಿ, 2002 ರಿಂದಮನೆದಳ ಮಂಜೂರಾಗಿಲ್ಲ. 2014 ರಲ್ಲಿ 94ಸಿ ಯೋಜನೆಯಡಿ ಸಾವಿರಾರು ಜನರುಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಮಂಜೂರಾತಿಗೆ ಸೊಪ್ಪಿನ ಬೆಟ್ಟ ಎಂಬ ಕಾರಣ ಒಡ್ಡಿ ಇಲ್ಲಿ ಮಂಜೂರಾತಿ ಆಗುತ್ತಿಲ್ಲ. ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ತಾಲೂಕಿನಲ್ಲಿ ಹಲವಾರು ಪರಿಸರದ ಯೋಜನೆಗಳನ್ನು ಸರಕಾರ ಅಳವಡಿಸುತ್ತಿದ್ದು, ಮೀಸಲು ಅರಣ್ಯ ಘೋಷಣೆ, ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ ಮುಂತಾದ ಯೋಜನೆ ಜಾರಿಯಾಗುತ್ತಿದೆ. ಈಗಾಗಲೇ ಹಕ್ಕು ಪತ್ರ ಹೊಂದಿರುವವರು ಇ- ಸ್ವತ್ತು ಪಡೆಯಲು ಸರಕಾರದ ಕಾನೂನು ಅಡ್ಡಿಯಾಗುತ್ತಿದ್ದು, ಸೊಪ್ಪಿನ ಬೆಟ್ಟ ಎಂಬ ಯೋಜನೆ ಬಗ್ಗೆ ಕಂದಾಯ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಗಾಂಧಿ ಜಯಂತಿ ಸಂದರ್ಭದಲ್ಲಿ ನಮಗೆ ಅನಿವಾರ್ಯವಾಗಿರುವ ವಿಷಯದ ಬಗ್ಗೆ ಜಿಲ್ಲಾ ಧಿಕಾರಿಗಳ ಗಮನ ಸೆಳೆಯಲು ಅಂಚೆ ಕಾರ್ಡ್ ಚಳುವಳಿ ಆರಂಭಿಸಲಾಗುತ್ತಿದೆ ಎಂದರು.
ಪಿ.ಬಿ. ಶ್ರೀನಿವಾಸ್ ಮಾತನಾಡಿ, ನೂರಾರು ಮನೆಗಳಿರುವ ಮೆಣಸೆಯಲ್ಲಿ ವಿದ್ಯುತ್ ವೋಲ್ಟೆàಜ್ ಸಮಸ್ಯೆ ತೀವ್ರವಾಗಿದೆ. ವಿದ್ಯುತ್ ಪರಿವರ್ತಕದ ಬೇಡಿಕೆಗಾಗಿ ಕಳೆದ ವರ್ಷವೇ ಇಲಾಖೆ ಅಂದಾಜು ಪಟ್ಟಿ ಆಗಿದೆ. ವೋಲ್ಟೆàಜ್ ಸಮಸ್ಯೆಯಿಂದ ಸಣ್ಣ ಕೈಗಾರಿಕೆ, ಗೃಹೋಪಯೋಗಕ್ಕೆ ತೀವ್ರ ಸಮಸ್ಯೆಯಾಗಿದೆ. ಕೆಲ ದಿನದಲ್ಲಿ ಅಡಕೆ ಕೊಯ್ಲು ಆರಂಭಗೊಳ್ಳುತ್ತಿದ್ದು, ಅಡಕೆ ಸುಲಿಯುವ ಯಂತ್ರದ ಚಾಲನೆಗೆ ವೋಲ್ಟೆàಜ್ ಅಗತ್ಯವಿದೆ. ಮೆಸ್ಕಾಂ ತುರ್ತಾಗಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮೆಸ್ಕಾಂಗೆ ಅಂಚೆ ಕಾರ್ಡ್ ಚಳುವಳಿ ಆರಂಭಿಸಲಾಗುತ್ತಿದೆ ಎಂದರು. ರೈತ ಸಂಘದ ಮುಂಡಗೋಡು ಶ್ರೀನಿವಾಸಮೂರ್ತಿ, ಕಣದಮನೆ ಜಗದೀಶ್, ಬಸವಣ್ಣ, ಮರಿಯಪ್ಪ ನಾಯ್ಕ, ಚಂದ್ರಶೇಖರ್,ಮಹಾಬಲ ಶೆಟ್ಟಿ, ಎಂ.ಎಲ್. ಶಿವಶಂಕರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ
Chikkamagaluru: ಎಟಿಎಂನಲ್ಲಿ ಅಗ್ನಿ ಅವಘಡ; ಸುಟ್ಟು ಕರಕಲಾದ ಲಕ್ಷ ಲಕ್ಷ ಹಣ
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ