ಸ್ವಾವಲಂಬನೆಯೇ ಆತ್ಮನಿರ್ಭರತೆ ಉದ್ದೇಶ ; ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಮತ


Team Udayavani, May 26, 2020, 10:50 AM IST

ಸ್ವಾವಲಂಬನೆಯೇ ಆತ್ಮನಿರ್ಭರತೆ ಉದ್ದೇಶ ; ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಭಿಮತ

ಚಿಕ್ಕಮಗಳೂರು: ನಗರದ ಮಧುವನ ಬಡಾವಣೆಯಲ್ಲಿ ಹಣ್ಣು  ಮತ್ತು ತರಕಾರಿ ಅಂಗಡಿಯನ್ನು ಸಚಿವ ಸಿ.ಟಿ.ರವಿ ಉದ್ಘಾಟಿಸಿದರು.

ಚಿಕ್ಕಮಗಳೂರು: ಆತ್ಮನಿರ್ಭರತೆ ಉದ್ದೇಶವೇ ಕುಟುಂಬ, ಸಮುದಾಯ,ದೇಶದ ಸ್ವಾವಲಂಬನೆ ಯಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸೋಮವಾರ ನಗರದ ಮಧುವನ ಬಡಾವಣೆಯಲ್ಲಿ ಸೇವಾಭಾರತಿ ಆಶ್ರಯದಲ್ಲಿ ಆರಂಭಗೊಂಡ ವಿಜಯಭಾರತಿ ಹಣ್ಣು ಮತ್ತು ತರಕಾರಿ ಅಂಗಡಿ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರತೆ ಎಂದಿರುವುದು ಸ್ವಾಲಂಬನೆ ಬದುಕಿಗಾಗಿ ಒಂದು ಕಾಲದಲ್ಲಿ ವ್ಯಕ್ತಿಗತವಾಗಿ, ಕೌಟುಂಬಿಕವಾಗಿ, ಸಮಾಜಿಕವಾಗಿ ಮತ್ತು ರಾಷ್ಟ್ರವಾಗಿ ದೇಶ ಪೂರ್ಣ ಸ್ವಾಲಂಬಿಯಾಗಿತ್ತು ಎಂದರು.

ನಂತರ ದೇಶ ಸ್ವಾತಂತ್ರ್ಯ ಕಳೆದುಕೊಂಡು ದಾಸ್ಯಕ್ಕೆ ಒಳಗಾದ ಪರಿಣಾಮ ಕುಟುಂಬ ಹಾಗೂ ರಾಷ್ಟ್ರ ಸ್ವಾವಲಂಬನೆಗೆ ಧಕ್ಕೆ ಉಂಟಾಯಿತು. ಆಗ ವ್ಯಕ್ತಿಗತ
ಸ್ವಾವಲಂಬನೆಯೂ ಮರೆಯಾಯಿತು. ದೇಶ ಮತ್ತೆ ಸ್ವಾವಲಂಬನೆಯಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು
ಆತ್ಮನಿರ್ಭರತೆ ಬಗ್ಗೆ ಹೇಳಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಸೇವಾಭಾರತಿ ಯುವಕರ ತಂಡ ಕಾಯಿಪಲ್ಲೆಯನ್ನು ಮಾರಾಟ ಮಾಡುವ ಮೂಲಕ ಸಣ್ಣ ಪ್ರಯತ್ನವನ್ನು ನಗರದಲ್ಲಿ ಆರಂಭಿಸಿದೆ. ಆರಂಭ ಶೂರತ್ವವಾಗದೆ ವ್ಯಾವಹಾರಿಕ ಹಿನ್ನೆಲೆಯಲ್ಲಿ ನಿರಂತರ ವ್ಯವಹಾರ ನಡೆಯಬೇಕಾಗಿದೆ ಎಂದು ತಿಳಿಸಿದರು.

ಲಾಭ ಗಳಿಕೆಯೇ ಮೂಲ ಉದ್ದೇಶವಾಗದೆ ಲಾಭವನ್ನು ಇಟ್ಟುಕೊಂಡು ಉತ್ಕೃಷ್ಟವಾದ ಸೇವೆ ನೀಡಿದಾಗ ಮಾತ್ರ ಉದ್ಯಮಕ್ಕೆ ಅಥವಾ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಲಾಭವೇ ಉದ್ದೇಶವಾದರೆ ಕೆಲವು ದಿನ ಈ ಪ್ರಯತ್ನ ನಡೆದು ಆನಂತರ ವಿಶ್ವಾಸ ಮೆರೆಯಾಗುತ್ತದೆ. ಆದ್ದರಿಂದ ಲಾಭ ಮತ್ತು ಸೇವೆ
ಎರಡೂ ಸಮತೋಲನದಲ್ಲಿ ಇರಬೇಕು ಎಂದರು.

ಸೇವೆಯನ್ನೇ ಪ್ರಧಾನವಾಗಿ ತೆಗೆದುಕೊಂಡರೆ ಹೆಚ್ಚುದಿನ ಮಾಡಲಾಗದು. ಬದುಕಿನ ಸಂಕಷ್ಟಗಳು ಎದುರಾದಾಗ ಸೇವೆ ಹಿನ್ನೆಡೆಗೆ ಬರುತ್ತದೆ. ಕೇವಲ
ಲಾಭವೇ ಮುಖ್ಯವಾಗಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡದಿದ್ದರೆ, ಅದು ಸಹ ಉದ್ಯಮವನ್ನು ಮುನ್ನಡೆಸದು. ಹಾಗಾಗಿ, ಎರಡೂ ಸಹ ಸಮವಾಗಿರಲಿ ಎಂದರು.
ವ್ಯವಹಾರದಲ್ಲಿ ಪಾರದರ್ಶಕತೆ ಜೊತೆಗೆ ಪ್ರಾಮಾಣಿಕತೆಯ ಚೌಕಟ್ಟನ್ನು ಹೊಂದಿರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಸ್ವಾವಲಂಬನೆ ದೂರದಲ್ಲಿದೆ.
ತಕ್ಷಣ ದೊರಕುವುದಲ್ಲ, ಯಾವುದೇ ಯಶಸ್ಸಿಗೆ ಮೊದಲ ಹೆಜ್ಜೆ ಮುಖ್ಯ ಎಂದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಜನರು ಗುಣಮಟ್ಟದ ಸೇವೆಯನ್ನು ಬಯಸುತ್ತಾರೆ. ಒಂದು ತರಕಾರಿ ಮಳಿಗೆಯಾಗಿ ಉಳಿಯದೆ ಮಾದರಿ
ತರಕಾರಿ ಮಳಿಗೆಯಾಗಬೇಕು. ಗುಣಮಟ್ಟ ಹಾಗೂ ನಿಖರ ಬೆಲೆಯಲ್ಲಿ ಒದಗಿಸಬೇಕು ಎಂದರು. ಈ ಸಂದರ್ಭದಲ್ಲಿ ಮಧುವನ ಬಡಾವಣೆ ಅಸೋಸಿಯೇಷನ್‌ ಅಧ್ಯಕ್ಷ ಮಾದಪ್ಪ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಮಲ್ಲಿಕಾರ್ಜುನ್‌ ಉಪಸ್ಥಿತರಿದ್ದರು.

ಸೇವಾಭಾರತಿ ಮಳಿಗೆ ಹಣ್ಣು ತರಕಾರಿ ಲಾಭ ಗಳಿಕೆಗಾಗಿ ಮಾಡದೆ ಜನರಿಗೆ ಹೊರೆಯಾಗದಂತೆ ಉತ್ತಮ ತರಕಾರಿ ಮತ್ತು ಹಣ್ಣನ್ನು ನೀಡುವ ಉದ್ದೇಶ ಹೊಂದಿದೆ. ಲಾಭದ ಜೊತೆ ಸೇವೆಗೂ ಆದ್ಯತೆ ನೀಡಲಾಗುವುದು. ಸುಮಂತ್‌, ಸೇವಾಭಾರತಿ ಮಳಿಗೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.