![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ
Team Udayavani, May 31, 2020, 4:04 PM IST
![31-May-15](https://www.udayavani.com/wp-content/uploads/2020/05/31-May-15-620x247.gif)
ಶೃಂಗೇರಿ: ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು
ಶೃಂಗೇರಿ: ಜಿಲ್ಲೆಯಲ್ಲಿ ಆತಂಕ ಪರಿಸ್ಥಿತಿಯಿದೆ. ಆದರೂ, ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಇನ್ನೂ ಆರಂಭಿಸದಿರುವ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಆಗ್ರಹಿಸಿದರು.
ಪಟ್ಟಣದ ಶಾರದಾನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಡಿಕೆಶಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಭಯದ ವಾತಾವರಣವಿದ್ದು, ಕೊವಿಡ್ ವಾರಿಯರ್ಸ್ಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಹೊರರಾಜ್ಯದ 800 ಕಾರ್ಮಿಕರನ್ನು ಸೂಕ್ತ ವ್ಯವಸ್ಥೆ ಇಲ್ಲದೇ ಕ್ವಾರಂಟೈನ್ ಮಾಡಲಾಗಿತ್ತು. ಜಿಲ್ಲಾ ಉತ್ಸವದಲ್ಲಿ ವಿಶೇಷ ಆಸಕ್ತಿ ತೋರಿದ್ದ ಉಸ್ತುವಾರಿ ಸಚಿವರು, ಕೋವಿಡ್ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಿಟ್ ಖರೀದಿಯಲ್ಲೂ ಸರಕಾರ ಅವ್ಯವಹಾರ ನಡೆಸಿದೆ. ಕಳಪೆ ಕಿಟ್ನಿಂದಾಗಿ ವರದಿಗಳು ತಪ್ಪಾಗಿ ಬರುತ್ತಿವೆ. ಇದರಿಂದ ಅವಘಡಗಳು ಸಂಭವಿಸುತ್ತಿವೆ. ಕೋವಿಡ್ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಶಾಸಕರ ಅನುದಾನವನ್ನು ಸರಕಾರಕ್ಕೆ ನೀಡಲಾಗಿದೆ. ಕಾರ್ಮಿಕರನ್ನು ಊರಿಗೆ ಮರಳಿಸಲು ಸರಕಾರ ಹೆಚ್ಚಿನ ದರ ವಿಧಿಸಲು ಮುಂದಾದಾಗ ಕಾಂಗ್ರೆಸ್ ಒಂದು ಕೋಟಿ ರೂ. ನೀಡಿ, ಅವರ ಪ್ರಯಾಣ ವೆಚ್ಚ ಭರಿಸಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಅಂಶುಮಾಂತ್ ಮಾತನಾಡಿ, ತಾಲೂಕಿನಲ್ಲಿ 11 ಸ್ಥಳದಲ್ಲಿ ಡಿಕೆಶಿ ಪದಗ್ರಹಣ ಸಮಾರಂಭವನ್ನು ಜೂ.7 ರಂದು ಏರ್ಪಡಿಸಲಾಗಿದೆ ಎಂದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಕಡ್ತೂರು ದಿನೇಶ್, ಕೆ.ಆರ್.ವೆಂಕಟೇಶ್, ಎಚ್.ಕೆ.ದಿನೇಶ್ ಹೆಗ್ಡೆ, ಉಮೇಶ್ ಪುದುವಾಳ್, ಕೆ.ಸಿ.ವೆಂಕಟೇಶ್, ರಮೇಶ್ ಭಟ್, ಸ್ಟೈಲೋ ದಿನೇಶ್ ಶೆಟ್ಟಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-aaaa](https://www.udayavani.com/wp-content/uploads/2024/07/1-aaaa-8-150x100.jpg)
ಚಾರ್ಮಾಡಿ ಘಾಟಿ ; ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ
![1-sadasd](https://www.udayavani.com/wp-content/uploads/2024/07/1-sadasd-150x90.jpg)
July27;ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ಪ್ರೌಢ ಶಾಲೆಗಳವರೆಗೆ,ಕೊಡಗಿನಲ್ಲಿ ಪಿಯುಸಿವರೆಗೆ ರಜೆ
![N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್](https://www.udayavani.com/wp-content/uploads/2024/07/lineman-150x83.jpg)
N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್
![Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ](https://www.udayavani.com/wp-content/uploads/2024/07/mara-1-150x101.jpg)
Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ
![Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ](https://www.udayavani.com/wp-content/uploads/2024/07/madaga-150x83.jpg)
Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.