![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಸೀಲ್ಡೌನ್ ಪ್ರದೇಶದ ಜನರಿಗೆ ದಿನಸಿ ವಿತರಣೆ
Team Udayavani, May 27, 2020, 3:42 PM IST
![27-May-12](https://www.udayavani.com/wp-content/uploads/2020/05/27-May-12-620x326.gif)
ಸಾಂದರ್ಭಿಕ ಚಿತ್ರ
ತರೀಕೆರೆ: ಪಟ್ಟಣದ ಕೋಡಿಕ್ಯಾಂಪ್ನಲ್ಲಿ ವಾಸವಿದ್ದ ಮಹಿಳೆಗೆ ಕೋವಿಡ್ ಸೋಂಕು ಕಾಣಿಸಿಕೊಂಡು 6 ದಿನಗಳು ಕಳೆದಿವೆ. ಆದರೆ, ಆಕೆಗೆ ಕೋವಿಡ್ ಹೇಗೆ ತಗುಲಿತು ಎನ್ನುವುದು ನಿಗೂಢವಾಗಿಯೇ ಉಳಿದಿದ್ದು, ಜಿಲ್ಲಾಡಳಿತಕ್ಕೆ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಸೀಲ್ಡೌನ್ ಪ್ರದೇಶದ ಜನರಿಗೆ ತಹಶೀಲ್ದಾರ್ ಗೀತಾ ಪುರಸಭೆ ಸಿಬ್ಬಂದಿ ಮೂಲಕ ದಿನಸಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಆಕೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪಕದಲ್ಲಿದ್ದ 14 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಯಾವುದೇ ಸೊಂಕು ಕಂಡುಬಂದಿಲ್ಲ. ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತಲಿನ ಆರು ಬೀದಿಗಳನ್ನು ಸೀಲ್ ಡೌನ್ ಮಾಡಲಾದ ಹಿನ್ನೆಲೆಯಲ್ಲಿ ಅಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದಿಗ್ಧ ಸಮಯದಲ್ಲಿ ಹಲವಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿದ್ದವು. ಇದನ್ನು ಅರಿತ ತಹಶೀಲ್ದಾರ್ ಸಿ.ಜಿ.ಗೀತಾ ಕರ್ತವ್ಯದ ಜೊತೆಗೆ ಮಾನವೀಯತೆಯನ್ನೂ ಮೆರೆದಿದ್ದಾರೆ.
ಆ ಭಾಗದಲ್ಲಿ ವಾಸವಾಗಿರುವ 35 ಕುಟುಂಬಗಳಿಗೆ ಆಹಾರದ ಕೊರತೆ ಉಂಟಾಗಿತ್ತು. ಮಂಗಳವಾರ ಬೆಳಗ್ಗೆ ಹಾಲು ವಿತರಿಸಲು ಹೋದ ಪುರಸಭೆ ಸಿಬ್ಬಂದಿ ಮುಂದೆ ಆ ಕುಟುಂಬಗಳ ಜನರು ಕಣ್ಣೀರು ಹಾಕಿದ್ದರು. ಸಿಬ್ಬಂದಿ ವಿಡಿಯೋ ಕೂಡ ಮಾಡಿದ್ದರು. ಇದನ್ನು ಅರಿತ ತಹಶೀಲ್ದಾರ್ ಸಿ.ಜಿ.ಗೀತಾ, ತಕ್ಷಣ ಅವರಿಗೆ ಒಂದು ವಾರಕ್ಕೆ ಆಗುವ ದಿನಸಿ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿ, ಪುರಸಭೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಸೀಲ್ಡೌನ್ ಭಾಗದಲ್ಲಿದ್ದ ಜನರಿಗೆ ವಿತರಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕೆಲವು ಮುಖಂಡರು ಕೂಡ ಈಗಾಗಲೇ ಲಾಕ್ಡೌನ್ ಸಮಯದಲ್ಲಿ ಬಡಜನರ ಅಗತ್ಯಗಳನ್ನು ಪೂರೈಸಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಸೀಲ್ಡೌನ್ ಮುಂದುವರಿಯಲಿದ್ದು, ಅಲ್ಲಿರುವ ಕುಟುಂಬಗಳಿಗೆ ನೆರವಿನ ಅಗತ್ಯವಿದೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-aaaa](https://www.udayavani.com/wp-content/uploads/2024/07/1-aaaa-8-150x100.jpg)
ಚಾರ್ಮಾಡಿ ಘಾಟಿ ; ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ
![1-sadasd](https://www.udayavani.com/wp-content/uploads/2024/07/1-sadasd-150x90.jpg)
July27;ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ಪ್ರೌಢ ಶಾಲೆಗಳವರೆಗೆ,ಕೊಡಗಿನಲ್ಲಿ ಪಿಯುಸಿವರೆಗೆ ರಜೆ
![N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್](https://www.udayavani.com/wp-content/uploads/2024/07/lineman-150x83.jpg)
N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್
![Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ](https://www.udayavani.com/wp-content/uploads/2024/07/mara-1-150x101.jpg)
Rain: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ… ತಪ್ಪಿದ ಭಾರಿ ಅನಾಹುತ, ಕಾರುಗಳು ಜಖಂ
![Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ](https://www.udayavani.com/wp-content/uploads/2024/07/madaga-150x83.jpg)
Kadur; ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆ; ಕೋಡಿ ಬಿದ್ದ ಮದಗದ ಕೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.