Chikkamagaluru : ವೀಕೆಂಡ್ ಎಫೆಕ್ಟ್… ದತ್ತಪೀಠ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್
Team Udayavani, Jul 2, 2023, 4:44 PM IST
ಚಿಕ್ಕಮಗಳೂರು: ಮಲೆನಾಡು ಪ್ರವಾಸಿ ತಾಣಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದ್ದು ಒಂದೆಡೆ ಸುರಿಯುತ್ತಿರುವ ತುಂತುರು ಮಳೆ, ಇನ್ನೊಂದೆಡೆ ವೀಕೆಂಡ್ ಮಸ್ತಿಗಾಗಿ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಬಂದಿರುವ ಅಪಾರ ಸಂಖ್ಯೆಯ ಪ್ರವಾಸಿಗರ ವಾಹನದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ಸುಮಾರು ಮೂರು ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಾಯಿತು.
ಶನಿವಾರ, ರವಿವಾರ ಗಿರಿ ಪ್ರದೇಶದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಟ್ರಾಫಿಕ್ ಜಾಮ್ ಇಲ್ಲಿ ಮಾಮೂಲಿಯಾಗಿದೆ, ಅದರಂತೆ ದತ್ತ ಪೀಠ ತೆರಳುವ ಮಾರ್ಗ ಮಧ್ಯೆ ಹೆಚ್ಚಿನ ವಾಹನಗಳು ಸಂಚರಿಸಿದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಈ ವೇಳೆ ಮಳೆ ಸುರಿಯುತ್ತಿದ್ದ ಕಾರಣ ಪ್ರವಾಸಿಗರು ಪರದಾಡುವಂತಾಯಿತು.
ಇದನ್ನೂ ಓದಿ: Hasan;ಹಿಮ್ಸ್ ನಲ್ಲಿ ತಪ್ಪಿದ ಭಾರಿ ದುರಂತ: 24 ನವಜಾತ ಶಿಶುಗಳ ರಕ್ಷಣೆ