![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಬಿತ್ತನೆ ಬೀಜಗಳ ದರ ಇಳಿಸಿ: ಶಶಿರೇಖಾ
Team Udayavani, Jun 4, 2020, 2:47 PM IST
![04-June-14](https://www.udayavani.com/wp-content/uploads/2020/06/04-June-14-620x302.gif)
ಮೊಳಕಾಲ್ಮೂರು: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಜಿಲ್ಲಾ ಪಂಚಾಯತ್ ಸದಸ್ಯ ಡಾ| ಬಿ.ಯೋಗೇಶ್ ಬಾಬು ಬಿತ್ತನೆ ಬೀಜದ ಶೇಂಗಾ ರೈತರಿಗೆ ವಿತರಿಸಿದರು.
ನಾಯಕನಹಟ್ಟಿ: ರಾಜ್ಯದಲ್ಲಿ ರೈತರು ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೀಗಾಗಿ ಶೇಂಗಾ ಬಿತ್ತನೆ ಬೀಜಗಳ ದರವನ್ನು ಕಡಿಮೆ ಮಾಡಬೇಕು ಎಂದು ಜಿಪಂ ಸದಸ್ಯೆ ಎಚ್.ಪಿ.ಶಶಿರೇಖಾ ಒತ್ತಾಯಿಸಿದ್ದಾರೆ.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಬಿತ್ತನೆ ಶೇಂಗಾ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ರೈತರು ಕೊರೊನಾ ಸಂದರ್ಭದಲ್ಲಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ತಾವು ಬೆಳೆದ ಹೂವು, ಹಣ್ಣು, ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಕೂಲಿ ದೊರೆಯುತ್ತಿಲ್ಲ. ಹೀಗಾಗಿ ಬಿತ್ತನೆ ಬೀಜ ಖರೀದಿಸಲು ಕಷ್ಟಪಡುವಂತಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಸರಕಾರ ಬಿತ್ತನೆ ಬೀಜದ ದರವನ್ನು ಕಳೆದ ವರ್ಷಕ್ಕಿಂತ 145 ರೂ.ಗಳಷ್ಟು ಹೆಚ್ಚಿಸಿದೆ. ಹೆಚ್ಚಿಸಿದ ದರವನ್ನು ಕಡಿತಗೊಳಿಸಿ ಕಳೆದ ವರ್ಷದ ದರಕ್ಕೆ ಮಾರಾಟ ಮಾಡಬೇಕು. ಅ ಧಿಕಾರಿಗಳು ಜನರ ಒತ್ತಾಯ ಸರಕಾರಕ್ಕೆ ತಲುಪಿಸಬೇಕು. ಕೃಷಿ ಇಲಾಖೆ ನೀಡುವ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ರೈತರು ಪಡೆದಿರಬೇಕು ಎಂದು ಹೇಳಿದರು. ಕೃಷಿ ಅಧಿಕಾರಿ ಎನ್. ಸುಮಂತ ನಾಯಕ ಮಾತನಾಡಿದರು. ಕೃಷಿ ಸಹಾಯಕ ಶ್ರೀನಿವಾಸ್, ಓಬಣ್ಣ ಮತ್ತಿತರರಿದ್ದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ರೇಣುಕಾಸ್ವಾಮಿ ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ](https://www.udayavani.com/wp-content/uploads/2024/07/Vinod-Raj-150x90.jpg)
Renukaswamy ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ
![1-weewq](https://www.udayavani.com/wp-content/uploads/2024/07/1-weewq-2-150x72.jpg)
Bharamasagara; ಸ್ಥಳೀಯ ಟಿಪ್ಪರ್ ಗಳನ್ನು ಬಳಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ
![Nayakanahatti](https://www.udayavani.com/wp-content/uploads/2024/07/kudapuara-150x83.jpg)
Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್
![Chitradurga](https://www.udayavani.com/wp-content/uploads/2024/07/Chitradurga-1-150x90.jpg)
Congress Government; ಮೊದಲು ನಿಮ್ಮ ಕಾಲದ ಹಗರಣಕ್ಕೆ ಉತ್ತರ ಕೊಡಿ: ಬಿವೈವಿ
![Renuka Swamy Case: ಎ 4 ತಾಯಿ ನಿಧನ; ವಿಡಿಯೋ ಕಾಲ್ನಲ್ಲಿ ಅಂತಿಮ ದರ್ಶನ](https://www.udayavani.com/wp-content/uploads/2024/07/13-12-150x90.jpg)
Renuka Swamy Case: ಎ 4 ತಾಯಿ ನಿಧನ; ವಿಡಿಯೋ ಕಾಲ್ನಲ್ಲಿ ಅಂತಿಮ ದರ್ಶನ
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.