ಗುರು ದೀಕ್ಷೆ ಸುವರ್ಣ ಸಂಭ್ರಮ
Team Udayavani, Dec 10, 2017, 11:10 AM IST
ಮಂಗಳೂರು: ಕರ್ನಾಟಕ ಕೆಥೋಲಿಕ್ ಕ್ರೈಸ್ತ ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷರಾದ ಬೆಂಗಳೂರಿನ ಆರ್ಚ್ ಬಿಷಪ್ ರೈ| ರೆ| ಡಾ| ಬರ್ನಾರ್ಡ್ ಮೊರಾಸ್ ಅವರ ಗುರು ದೀಕ್ಷೆಯ ಸುವರ್ಣ ಮಹೋತ್ಸವದ ಅಂಗವಾಗಿ ರವಿವಾರ ಕುಪ್ಪೆಪದವು ದಿ ಇಮ್ಯಾಕ್ಯುಲೆಟ್ ಹಾರ್ಟ್ ಆಫ್ ಮೇರಿ ಚರ್ಚ್ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಮೊರಾಸ್ ಕುಟುಂಬದ ಹಿರಿಯರ ಮನೆ ಆವರಣಲ್ಲಿ ಸಾರ್ವಜನಿಕ ಅಭಿನಂದನ ಸಮಾರಂಭ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ನಡೆಯುವ ಬಲಿ ಪೂಜೆಯಲ್ಲಿ ರೈ| ರೆ| ಡಾ| ಬರ್ನಾರ್ಡ್ ಮೊರಾಸ್ ಅವರ ಜತೆಗೆ ಬಿಷಪರಾದ ರೈ| ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ (ಮಂಗಳೂರು), ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ (ಉಡುಪಿ), ರೈ| ರೆ| ಡಾ| ಹೆನ್ರಿ ಡಿ’ಸೋಜಾ (ಬಳ್ಳಾರಿ), ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ (ಬೆಳ್ತಂಗಡಿ), ಮಾರ್ ದಿವಾನಿಯೋಸ್ ಮಕಾರಿಯೋಸ್ (ಪುತ್ತೂರು), ರೈ| ರೆ| ಡಾ| ಡೆರಿಕ್ ಫೆರ್ನಾಂಡಿಸ್ (ಕಾರವಾರ), ರೈ| ರೆ| ಡಾ| ಪೀಟರ್ ಮಚಾದೊ (ಬೆಳಗಾವಿ), ರೈ| ರೆ| ಡಾ| ಆ್ಯಂಟನಿ ಕಾರಿಯಲ್ (ಮಂಡ್ಯ) ಅವರು ಹಾಗೂ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು, ಕುಪ್ಪೆಪದವು ಚರ್ಚ್ನ ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ ಸಹಿತ ಸುಮಾರು 25ರಷ್ಟು ಧರ್ಮಗುರುಗಳು ಉಪಸ್ಥಿತರಿರುವರು. 150ರಷ್ಟು ಧರ್ಮಭಗಿನಿಯರು, ಕುಪ್ಪೆ ಪದವು ಚರ್ಚ್ನ ಕ್ರೈಸ್ತರು, ಮಹಾ ಧರ್ಮಾಧ್ಯಕ್ಷರ ಅಭಿಮಾನಿಗಳು, ಮೊರಾಸ್ ಕುಟುಂಬದ ಹಿತೈಷಿಗಳು ಭಾಗವಹಿಸಲಿದ್ದಾರೆ.
14 ವರ್ಷಗಳಿಂದ ಮಹಾ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು 2016ರಲ್ಲಿ ತಮ್ಮ ಬಾಳಿನ ಅಮೃತ ಮಹೋತ್ಸವವನ್ನು ಆಚರಿಸಿದ್ದು, ಇದೀಗ ಧರ್ಮಗುರು ದೀಕ್ಷೆಯ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಡಿ. 6ಕ್ಕೆ ಗುರು ದೀಕ್ಷೆ ಲಭಿಸಿ 50 ವರ್ಷಗಳಾಗಿದ್ದು, ಅವರ ಕೇಂದ್ರ ಕಚೇರಿ ಇರುವ ಬೆಂಗಳೂರಿನಲ್ಲಿ ಅಂದು ಈ ಸಂಭ್ರಮಾಚರಣೆ ನಡೆದಿದೆ. ಮಂಗಳೂರಿನ ಕುಪ್ಪೆಪದವು ಅವರ ಹುಟ್ಟೂರು. ಡಿ. 10ರಂದು ಹುಟ್ಟೂರಿನಲ್ಲಿ ಗುರು ದೀಕ್ಷೆಯ ಸುವರ್ಣ ಮಹೋತ್ಸವ ಸಮಾರಂಭ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ