ಜುಲೈ 7 ವಿಶ್ವ ಚಾಕ್ಲೇಟ್‌ ದಿನಾಚರಣೆ


Team Udayavani, Jul 8, 2018, 6:00 AM IST

v-6.jpg

      ಹೆಸರು ಆಧುನಿಕ ಮತ್ತು ಪ್ರಚೀನ ಕಾಲದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪ್ರಾಮುಖ್ಯದ ಸಂಕೇತ. ಕೋಕೋ ಗಿಡ ಹಾಗೂ ಅದರ ಬೀಜಗಳನ್ನು ಸಂಸ್ಕರಣೆಯ ಮುನ್ನ ಅಮೆರಿಕನ್‌ ಇಂಗ್ಲಿಷ್‌ನಲ್ಲಿ ಕಕಾವೋ ಅನ್ನಲಾಗುತ್ತದೆ. ಹುರಿದ ಮತ್ತು ಸಂಸ್ಕರಿಸಿದ ಬಳಿಕ ಇದು ಕೋಕೋ ಎಂದಾಗುತ್ತದೆ. ಹುರಿದ ಕೋಕೋ ಬೀಜ ಬಳಸಿ ಇತರ ವೈವಿಧ್ಯಗಳನ್ನು ಬೆರೆಸಿ ಬಗೆಬಗೆಯ ಚಾಕ್ಲೇಟ್‌ ತಯಾರಿಸಲಾಗುತ್ತದೆ. ಇದನ್ನು ಪೂರ್ಣ ಆಹಾರ ಎಂದೇ ವರ್ಣಿಸಲಾಗುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ಚಾಕ್ಲೇಟ್‌ನ ವಿವಿಧ ಪರಿಣಾಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ. 

ಕ್ಯಾಂಪ್ಕೋ ಸಾಧನೆ
ಚಾಕ್ಲೇಟ್‌ನ ಇತಿಹಾಸದಲ್ಲಿ ಕರ್ನಾಟಕ ಕರಾವಳಿ ಮೂಲದ ಕ್ಯಾಂಪ್ಕೋ ಸಂಸ್ಥೆಯದ್ದು ಸವಿಸವಿಯಾದ ಪುಟಗಳು. ಅಡಿಕೆ ಮತ್ತು ಕೋಕೋ ಬೆಳೆಗಾರರ ಹಿತರಕ್ಷಣೆಗೆ ಸ್ಥಾಪನೆಯಾದ ಕ್ಯಾಂಪ್ಕೋ ಸಂಸ್ಥೆ ದೇಶದ ಸಹಕಾರಿ ರಂಗದಲ್ಲಿ ಆದರ್ಶಯುತವಾದ ಹೆಸರು. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೋ ಚಾಕ್ಲೇಟ್‌ ತಯಾರಿ ಕ್ಷೇತ್ರವನ್ನು ಪ್ರವೇಶಿಸಿ, ಅಪೂರ್ವ ಸಾಧನೆಯನ್ನು ದಾಖಲಿಸಿದೆ.

ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕ್ಲೇಟ್‌ ತಯಾರಿಕಾ ಫ್ಯಾಕ್ಟರಿಯನ್ನು 1986ರಲ್ಲಿ ಸ್ಥಾಪಿಸಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿತು. ಮುಂದೆ ನೆಸ್ಲೆ (ಇಂಡಿಯಾ) ಜತೆ ತಾಂತ್ರಿಕ ಸಹಯೋಗವನ್ನು ಹೊಂದಿತು. ಕೋಕೋ ಮಾಸ್‌, ಕೋಕೋ ಬಟರ್‌, ಕೋಕೋ ಪೌಡರ್‌, ಚಾಕ್ಲೇಟ್‌ ಡ್ರಿಂಕ್ಸ್‌, ಚಾಕ್ಲೇಟ್‌ಗಳಿಂದ ಕ್ಯಾಂಪ್ಕೋ ಯಶಸ್ಸು ಸಾಧಿಸಿದೆ.

ಇಂದು ಜಗತ್ತಿನ ಸಿಹಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಚಾಕ್ಲೇಟ್‌ ಉತ್ಪನ್ನಗಳು ಹೊಂದಿವೆ. ಚಾಕ್ಲೇಟ್‌ಗಳ ವೈವಿಧ್ಯಗಳಂತೂ ಅನನ್ಯ. ಹೊಸ ಹೊಸ ರುಚಿಯ (ಫ್ಲೇವರ್‌) ಚಾಕ್ಲೇಟ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಚಾಕ್ಲೇಟ್‌ ಅಂದರೆ ಕೇವಲ ಸಿಹಿಯಲ್ಲ; ಅದು ಮಧುರ ಬಾಂಧವ್ಯ!

ದೇವರ ಪಾನೀಯ
ಚಾಕ್ಲೇಟ್‌ ಸ್ವಾದವು ದ್ರವ ಮತ್ತು ಘನ ಸ್ವರೂಪದಲ್ಲಿ ದೊರೆಯುತ್ತಾ, ಮನುಕುಲಕ್ಕೆ ಸಿಹಿ ಉಣ ಬಡಿಸುತ್ತಿದೆ. ಚಾಕ್ಲೇಟ್‌ ಸೇವನೆಯ ಅನೇಕ ಧನಾತ್ಮಕ ಕಾರಣಗಳಿಂದ ಅದನ್ನು ಇತಿಹಾಸ ಕಾಲದಲ್ಲಿ “ದೇವರ ಪಾನೀಯ’ ಎಂದು ಹೆಸರಿಸಿದ್ದರು! ಕೋಕೋ ಗಿಡದ ವೈಜ್ಞಾನಿಕ ಹೆಸರು: ಥಿಯೋಬ್ರೋಮಾ ಕಕಾವೊ. ಗ್ರೀಕ್‌ ಭಾಷೆಯಲ್ಲಿ ಥಿಯೋ ಅಂದರೆ ದೇವರು; ಬ್ರೋಮಾ ಅಂದರೆ ಪಾನೀಯ!

ಚಾಕ್ಲೇಟ್‌ ಎಂಬ ಉಚ್ಚಾರವೇ ಸಾಕು: ಆ ಪರಿಸರವೆಲ್ಲ ಸಿಹಿಯಾಗಿ ಪರಿವರ್ತನೆಯಾಗುತ್ತದೆ. ಇದು ಚಾಕ್ಲೇಟ್‌ನ ಮಹಿಮೆ. ಆಬಾಲವೃದ್ಧರಾಗಿ ಚಾಕ್ಲೇಟ್‌ ಸವಿಯುವವರೇ ಎಲ್ಲ; ಚಾಕ್ಲೇಟ್‌ನ ಸವಿಯ ರೋಮಾಂಚನವನ್ನು ಸವಿದವನೇ ಬಲ್ಲ! ಜಗತ್ತಿನಾದ್ಯಂತ ಪ್ರತೀ ವರ್ಷ ಜುಲೈ 7ನ್ನು ಚಾಕ್ಲೇಟ್‌ ದಿನವಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕ್ಲೇಟ್‌ ದಿನ ಎಂದು ಕೂಡಾ ಉಲ್ಲೇಖೀಸಲಾಗುತ್ತದೆ. 2009ರಿಂದ ಈ ಆಚರಣೆಯು ವಿಶ್ವದಾದ್ಯಂತ ನಡೆಯುತ್ತಿದೆ. ಹಾಗೆ ನೋಡಿದರೆ, ಜಗತ್ತಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುವ ಸಿಹಿ ತಿಂಡಿ ಅಂದರೆ ಅದು ಚಾಕ್ಲೇಟ್‌. ಬಹುತೇಕ ಎಲ್ಲಾ ಆಚರಣೆಗಳಲ್ಲೂ ಚಾಕ್ಲೇಟ್‌ಗೆ ಮಹತ್ವದ ಸ್ಥಾನವಿದೆ.

ಸ್ನೇಹ ಸಂಬಂಧಗಳನ್ನು ಬೆಸೆಯುವಲ್ಲಿ ಕೂಡಾ ಚಾಕ್ಲೇಟ್‌ಗೆ ಅಗ್ರಸ್ಥಾನವಿದೆ. ಹೃದಯ ಹೃದಯಗಳನ್ನು ಬೆಸೆಯುವ ಪ್ರೇಮಾನುಬಂಧಗಳಲ್ಲಿ ಕೂಡಾ ಚಾಕ್ಲೇಟ್‌ನ ವಿನಿಮಯ ನಿರ್ಣಯಕ ಪಾತ್ರವನ್ನು ಹೊಂದಿರುತ್ತದೆ ಎಂಬ ಮಾತನ್ನು ಪ್ರಣಯಿಗಳು ತತ್‌ಕ್ಷಣಕ್ಕೇ ಒಪ್ಪಿಕೊಂಡಾರು!
ಜಗತ್ತಿನಾದ್ಯಂತ ವೈಟ್‌ ಚಾಕ್ಲೇಟ್‌ ಡೇ ಮತ್ತು ಮಿಲ್ಕ್ ಚಾಕ್ಲೇಟ್‌ ಡೇ ಎಂಬ ಪ್ರತ್ಯೇಕ ಆಚರಣೆಗಳಿದ್ದರೂ ಜುಲೈ 7ರ ಆಚರಣೆಯೇ ಮುಖ್ಯವಾಗಿರುತ್ತದೆ.

ಮನೋಹರ ಪ್ರಸಾದ್‌
ಬೇಬಿ ವನ್ಯ, ಮಂಗಳೂರು
ಸಹಕಾರ: ಮೊನಾರ್ಕ್‌ ಸ್ಟುಡಿಯೋ   ಚಿತ್ರ: ಸತೀಶ್‌ ಇರಾ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್‌.ಪೈ

Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್‌.ಪೈ

Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ

Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.