ಖಾಲಿಯಾ ರಫೀಕ್ ಕೊಲೆ: ನಾಲ್ವರು ಪೊಲೀಸರ ವಶ
Team Udayavani, Feb 18, 2017, 3:45 AM IST
ಉಳ್ಳಾಲ: ಖಾಲಿಯಾ ರಫೀಕ್ ಕೊಲೆಯ ಪ್ರಮುಖ ಆರೋಪಿ “ಕಸಾಯಿ’ ಆಲಿ ಯಾನೆ ನೂರ್ ಆಲಿ ಸಹಿತ ನಾಲ್ವರು ಆರೋಪಿ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಾಲಿಯಾ ಗ್ಯಾಂಗ್ ಮುಖಂಡನಾಗಿದ್ದ ರಫೀಕ್ನನ್ನು ಕಸಾಯಿ ಗ್ಯಾಂಗ್ನ ಪ್ರಮುಖ ನಾದ ಕಸಾಯಿ ಆಲಿ ಯಾನೆ ನೂರ್ ಆಲಿ ತಂಡ ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ಮಂಗಳವಾರ ತಡರಾತ್ರಿ ಗುಂಡು ಹಾರಿಸಿ ತಲವಾರಿನಿಂದ ಕಡಿದು ಕೊಲೆ ನಡೆಸಿತ್ತು. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಪ್ರಮುಖ ಆರೋಪಿಗಳಾದ ಉಪ್ಪಳ ಮೂಲದ ನಿವಾಸಿ ಗಳಾದ ಕಸಾಯಿ ಆಲಿ ಯಾನೆ ನೂರ್ ಆಲಿ, ರವೂಫ್ ಮತ್ತು ಮಂಗಳೂರು ಮೂಲದ ಆರೋಪಿಗಳಾದ ಪದ್ದು ಯಾನೆ, ಪದ್ಮನಾಭ, ರಶೀದ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖಾಲಿಯಾ ವರ್ಸಸ್ ಕಸಾಯಿ : ಉಪ್ಪಳದಲ್ಲಿ ಖಾಲಿಯಾ ರಫೀಕ್ ಗ್ಯಾಂಗ್ ಬಲಶಾಲಿಯಾಗಿದ್ದು, ಕಸಾಯಿ ಯಾನೆ ನೂರಾಲಿ ತಂಡದೊಂದಿಗೆ ಹಲವು ಬಾರಿ ಹೊಡೆದಾಟ ನಡೆದಿತ್ತು. ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನೂರ್ ಆಲಿಯ ಸಹೋದರ ಮುತ್ತಲಿಬ್ನನ್ನು ಆತನ ಪತ್ನಿಯ ಎದುರೇ ಹತ್ಯಗೈದಿದ್ದ ಖಾಲಿಯಾ ರಫೀಕ್ನನ್ನು ಮುಗಿಸಲು ಮುತ್ತಲಿಬ್ನ ಸಹೋದರ ನೂರಾಲಿ ಕಾಯುತ್ತಿದ್ದ ಎನ್ನಲಾಗಿದೆ.
ರವೂಫ್ಗೆ ಚಿತ್ರಹಿಂಸೆ ನೀಡಿದ್ದ
ನೂರಾಲಿ ತಂಡದಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಮೂರು ತಿಂಗಳ ಹಿಂದೆ ಇನ್ನೋರ್ವ ಆರೋಪಿ ರವೂಫ್ ನನ್ನು ಖಾಲಿಯಾ ರಫೀಕ್ ಮತ್ತು ಆತನ ಗ್ಯಾಂಗ್ ಉಪ್ಪಳದ ಸಮುದ್ರ ತೀರದಲ್ಲಿ ಕುತ್ತಿಗೆಯವರೆಗೆ ಹೊಗೆಯಲ್ಲಿ ಹೂತು ಹಾಕಿ ರಾತ್ರಿಯಿಂದ ಬೆಳಗ್ಗಿನವರೆಗೆ ರವೂಫ್ನ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದರು. ಬೆಳಗ್ಗಿನ ಜಾವ ಆತನನ್ನು ಬಿಟ್ಟು ಹೋಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರವೂಫ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಯ ಬಳಿಕ ರಫೀಕ್ನನ್ನು ಕೊಲೆ ನಡೆಸಲು ರವೂಫ್ ಯೋಜನೆ ಹಾಕಿದ್ದ ಎನ್ನಲಾಗಿದೆ.
ಕಲಿ – ಖಾಲಿಯಾ ನಂಟು : ಖಾಲಿಯಾ ರಫೀಕ್ ಮತ್ತು ಭೂಗತ ಜಗ್ಗತ್ತಿನಲ್ಲಿ ಗುರುತಿಸಿ ಕೊಂಡಿರುವ ಕಲಿ ಯೋಗೀಶನಿಗೂ ನಂಟು ಇತ್ತು. ಹಪ್ತಾ ವಸೂಲಿಗೆ ಸಂಬಂಧಿಸಿ ಕಲಿ ಯೋಗೀಶ್ನ ಅಣತಿಯಂತೆ ತಲಪಾಡಿಯಲ್ಲಿ ಮನೆಯೊಂದಕ್ಕೆ ತೆರಳಿ ಶೂಟೌಟ್ ಮಾಡಿ ದಾಳಿ ನಡೆಸಿದ್ದ. ಅದರಿಂದ ಕಲಿ ಯೋಗೀಶನಿಗೆ ಕೇರಳ ಗಡಿ ಭಾಗದಲ್ಲಿ ಹಿನ್ನಡೆಯಾಗಿದ್ದು, ಕಲಿ ಯೋಗೀಶ್ ಪ್ರತಿಕಾರ ನಡೆಸುವ ಸಾಧ್ಯತೆ ಇದ್ದು, ಗ್ಯಾಂಗ್ವಾರ್ ಮುಂದುÊರಿಯುವ ಸಾಧ್ಯತೆ ಇದೆ.
ರೈಲು ನಿಲ್ದಾಣಕ್ಕೆ ಹೊರಟಿದ್ದ ಖಾಲಿಯಾ ಕಸಾಯಿ ಆಲಿ ಗ್ಯಾಂಗ್ ° ಕೊಲೆಗೆ ಸಂಚು ರೂಪಿಸುತ್ತಿರುವುದನ್ನು ಅರಿತಿದ್ದ ರಫೀಕ್ ಕೆಲ ಕಾಲ ಮಹರಾಷ್ಟÅದ ಪೂನಾದಲ್ಲಿರುವ ಅಜ್ಞಾತ ಸ್ಥಳಕ್ಕೆ ತೆರಳುವನಿದ್ದ. ಈ ನಿಟ್ಟಿನಲ್ಲಿ ಉಪ್ಪಳದಿಂದ ಮಂಗಳೂರು ತಲುಪಲು ಎರಡೆರಡು ಕಾರನ್ನು ಬದಲಾಯಿಸಿದ್ದ ಎನ್ನಲಾಗಿದೆ.
ಖಲಿಯಾಗೆ ಕಾಯುತ್ತಿದ್ದ ಕಸಾಯಿ : ಖಾಲಿಯಾ ರಫೀಕ್ನನ್ನು ಕೊಲೆಗೈಯಲು ತಿಂಗಳ ಹಿಂದೆಯೇ ಯೋಜನೆ ರೂಪಿಸಿದ್ದ ಕಸಾಯಿ ಆಲಿ ಯಾನೆ ನೂರಾಲಿ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್.ಪೈ
Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ
MUST WATCH
ಹೊಸ ಸೇರ್ಪಡೆ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.