ಸಾಲು ರಜೆ; ಪ್ರವಾಸಿ ತಾಣಗಳಲ್ಲಿ ಫುಲ್ ರಶ್
ಎರಡು ಬೀಚ್ಗಳಿಗೆ ವಾರದಲ್ಲಿ ಲಕ್ಷ ಮಂದಿ ಭೇಟಿ
Team Udayavani, Apr 22, 2019, 6:02 AM IST
ಸಾಂದರ್ಭಿಕ ಚಿತ್ರ.
ವಿಶೇಷ ವರದಿ- ಮಹಾನಗರ: ಮತದಾನ ಸಹಿತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಅದರಲ್ಲಿಯೂ ನಗರದಲ್ಲಿರುವ ಪ್ರಮುಖ ಎರಡು ಬೀಚ್ಗಳಿಗೆ ಒಂದು ವಾರದಲ್ಲಿ ಭೇಟಿ ನೀಡಿದ ಮಂದಿ ಲಕ್ಷಕ್ಕೂ ಹೆಚ್ಚು.
ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಬರುವ ಪ್ರವಾಸಿಗರು ಬೀಚ್ಗೆ ತೆರಳದೆ ಹೋಗಲಾರರು. ಹಾಗಾಗಿ ಪಣಂಬೂರು, ತಣ್ಣೀರುಬಾವಿ ಬೀಚ್ಗಳಲ್ಲಿ ಪ್ರತೀ ದಿನ ಜನಜಂಗುಳಿ ಇರುತ್ತದೆ. ಪಣಂಬೂರು, ತಣ್ಣೀರುಬಾವಿ ಬೀಚ್ಗಳಿಗೆ ಸಾಮಾನ್ಯ ದಿನಗಳಲ್ಲಿ ತಲಾ ಸುಮಾರು 3,000ದಷ್ಟು ಪ್ರವಾಸಿಗರು, ವೀಕೆಂಡ್ ಸಮಯ 10 ಸಾವಿರದಷ್ಟು ಪ್ರವಾಸಿಗರು ಬರುತ್ತಾರೆ.
ಲಕ್ಷ ಮಂದಿ ಭೇಟಿ
ಆದರೆ ಈ ಒಂದು ವಾರದಲ್ಲಿ ತಲಾ ಸುಮಾರು 50 ಸಾವಿರಕ್ಕೂ ಮಂದಿ ಬಂದಿದ್ದಾರೆ. ಒಟ್ಟಾರೆ ಎರಡೂ ಬೀಚ್ಗಳಲ್ಲಿ ಒಂದು ವಾರದಲ್ಲಿ ಸುಮಾರು 1 ಲಕ್ಷಕ್ಕೂ ಮಿಕ್ಕಿ ಮಂದಿ ಪ್ರವಾಸಿಗರು ಆಗಮಿಸಿದ್ದಾರೆ.
ಪಿಲಿಕುಳದಲ್ಲೂ
ಪ್ರವಾಸಿಗರ ಸಂಖ್ಯೆ ಏರಿಕೆ
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಯಾಗಿದೆ. ಸಾಮಾನ್ಯವಾಗಿ ಪ್ರತೀ ದಿನ ಸುಮಾರು 3,000 ಮಂದಿ ಪ್ರವಾಸಿಗರು ಪಿಲಿಕುಳ ವೀಕ್ಷಣೆಗೆ ಬರುತ್ತಾರೆ. ಆದರೆ, ರಜಾ ಹಿನ್ನೆಲೆಯಲ್ಲಿ ಪ್ರತೀ ದಿನ ಸುಮಾರು 10,000ದಷ್ಟು ಮಂದಿ ಆಗಮಿಸುತ್ತಿದ್ದಾರೆ.
ಪ್ರತೀ ದಿನ ವೀಕ್ಷಣೆಗೆ ವ್ಯವಸ್ಥೆ
ಈ ಹಿಂದೆ ಪಿಲಿಕುಳದ ಸುತ್ತ ಮುತ್ತಲ ಪ್ರದೇಶದ ನಿರ್ವ ಹಣೆಯ ಸಲುವಾಗಿ ಪ್ರತೀ ಸೋಮ ವಾರದಂದು ನಿಸರ್ಗ ಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ವಿರಲಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಹಿನ್ನೆಲೆಯಲ್ಲಿ ಪ್ರತೀ ದಿನ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು, ನಿಸರ್ಗಧಾಮ ವೀಕ್ಷಣೆಗೆ ಕೋಂಬೋ ಆಫರ್ ಇದ್ದು, ಕೇವಲ 120 ರೂ.ನೀಡಿದರೆ,ನಿಸರ್ಗಧಾಮ, ತಾರಾಲಯ,ಗುತ್ತಿನ ಮನೆ, ಮೃಗಾಲಯ, ಕೆರೆ ಇತ್ಯಾದಿಗಳನ್ನು ವೀಕ್ಷಿಸಬಹುದು.
ಧಾರ್ಮಿಕ ಕ್ಷೇತ್ರಗಳಲ್ಲೂ ಜನಜಂಗುಳಿ
ನಗರದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳು ಇರುವದರಿಂದ ಪ್ರವಾಸಿಗರು ಹೆಚ್ಚಿನ ಪ್ರಾಶಸ್ತÂ ನೀಡುತ್ತಾರೆ. ಅದರಲ್ಲಿಯೂ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಕದ್ರಿ ಮಂಜುನಾಥ ದೇವಾಲಯ, ಮಂಗಳಾದೇವಿ ದೇವಸ್ಥಾನ ಸಹಿತ ಇನ್ನಿತರ ಧಾರ್ಮಿಕ ಕ್ಷೇತ್ರದಲ್ಲಿ ದಿನಂಪ್ರತಿ ಸಾವಿರಾರು ಮಂದಿ ಪ್ರವಾಸಿಗರು ದೇವರ ದರ್ಶನ ಪಡೆಯುತ್ತಿದ್ದಾರೆ.
ಪಿಲಿಕುಳಕ್ಕೆ ಬರಲಿದೆ ಹೊಸ ಅತಿಥಿ
ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಪಿಲಿಕುಳಕ್ಕೆ ಹೊಸ ಅತಿಥಿ ಆಗಮನವಾಗಲಿದೆ. ಮುಂಬಯಿಯ ಮೃಗಾಲಯದಿಂದ ಕೆಲವೊಂದು ಪಕ್ಷಿಗಳು ಪಿಲಿಕುಳಕ್ಕೆ ಬರಲಿವೆ. ಅಲ್ಲದೆ, ಹೈದರಾಬಾದ್ ಮೃಗಾಲಯದಿಂದ ಓತಿಕೇತ ಬರಲಿದೆ. ಅದೇ ರೀತಿ ಪಿಲಿಕುಳದಲ್ಲಿರುವ ಹೆಚ್ಚುವರಿ ಪ್ರಾಣಿಗಳು ಬೇರೆ ಮೃಗಾಲಯ ಸೇರಲಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚು
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೊರ ಜಿಲ್ಲೆಯ ಮಂದಿ ಮಧ್ಯಾಹ್ನದ ವೇಳೆ, ಸ್ಥಳೀಯರು ಸಂಜೆ ವೇಳೆ ಬೀಚ್ಗೆ ಆಗಮಿಸುತ್ತಿದ್ದಾರೆ. ಬೀಚ್ಗಳಲ್ಲಿ ಸಾಹಸ ಜಲ ಕ್ರೀಡೆಗಳಿಗೆ ಆಗಮಿಸುವ ಮಂದಿ ಹೆಚ್ಚಾಗಿದ್ದಾರೆ.
- ಯತೀಶ್ ಬೈಕಂಪಾಡಿ, ಪಣಂಬೂರು ಬೀಚ್ ಯೋಜನೆ ಅಭಿವೃದ್ಧಿಯ ಸಿಇಒ
ಪ್ರತೀ ದಿನ ವೀಕ್ಷಣೆಗೆ ಲಭ್ಯ
ಪಿಲಿಕುಳ ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ತಿಂಗಳ ಕೊನೆಯವರೆಗೆ ವಾರದ ಏಳೂ ದಿನವೂ ನಿಸರ್ಗಧಾಮ ಪ್ರವಾಸಿಗರಿಗೆ ತೆರೆದಿರಲಿದೆ.
ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗಲೆಂದು ಕೋಂಬೋ ಆಫರ್ ಕೂಡ ಇದೆ.
– ಎಚ್. ಜಯಪ್ರಕಾಶ್ ಭಂಡಾರಿ, ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
MUST WATCH
ಹೊಸ ಸೇರ್ಪಡೆ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ
Thirthahalli: ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧೆ ಮಾಡಬೇಕು: ಅರುಣ್ ಹೊಸಕೊಪ್ಪ
Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣಸ್ವಾಮಿ
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ