ದ.ಕ.-ಉಡುಪಿ: ಪ್ರತೀ ರವಿವಾರ ಪೆಟ್ರೋಲ್ ಬಂಕ್ ಬಂದ್ ಇಲ್ಲ
Team Udayavani, Apr 14, 2017, 12:23 PM IST
ಮಂಗಳೂರು: ವಿವಿಧಕಾರಣ ಮುಂದಿಟ್ಟು ಮೇ 10ರ ಅನಂತರ ಪ್ರತೀ ರವಿವಾರ ಪೆಟ್ರೋಲ್ ಬಂಕ್ ಬಂದ್ ಮಾಡುವ ಕುರಿತು ಪೆಟ್ರೋಲ್ ಬಂಕ್ ಮಾಲಕರ ಸಂಘದ ನಿರ್ಧಾರಕ್ಕೆ ಕರ್ನಾಟಕ ಪೆಟ್ರೋ ಲಿಯಂ ವಿತರಕರ ಮಹಾಮಂಡಳ ಬೆಂಬಲ ವ್ಯಕ್ತಪಡಿಸಿಲ್ಲ.
ಹೀಗಾಗಿ ಮೇ 10ರ ಬಳಿಕ ರವಿವಾರವೂ ರಾಜ್ಯದಬಹುತೇಕ ಪೆಟ್ರೋಲ್ ಪಂಪ್ಗ್ಳು ವಹಿವಾಟು ನಡೆಸಲಿವೆ. ಕಮಿಶನ್ ಹೆಚ್ಚಳಕ್ಕೆ ಆಗ್ರಹ, ಅಧಿಕಾರಿಗಳ ಕಿರುಕುಳಕ್ಕೆ ತಡೆ ಹಾಗೂ ಹೊಸ ಬಂಕ್ಗಳಿಗೆ ಲೈಸೆನ್ಸ್ ನೀಡದಂತೆ ಆಗ್ರಹಿಸಿ ಪ್ರತೀ ರವಿವಾರ ವಹಿವಾಟು ನಡೆಸದಿರಲು ಹರಿಯಾಣದಲ್ಲಿ ನಡೆದ ಪೆಟ್ರೋಲ್ ಬಂಕ್ ಮಾಲಕರ ಸಂಘ ನಿರ್ಧರಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ, ಕರ್ನಾಟಕ ಪೆಟ್ರೋಲಿಯಂ ವಿತರಕರ ಮಹಾ ಮಂಡಳ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಶೆಣೈ, ರವಿವಾರ ಬಂದ್ ನಡೆಸುವುದು ನ್ಯಾಯ ಸಮ್ಮತವಲ್ಲ, ಖಾಸಗಿ ಪೆಟ್ರೋಲ್ ಕಂಪೆನಿಗಳು ವ್ಯವಹಾರ ನಡೆಸಿ, ನಾವು ಬಂದ್ ಮಾಡಿದರೆ ಯಾವುದೇ ಪ್ರಯೋ ಜನವಿಲ್ಲ. ಕಮಿಶನ್ ಹೆಚ್ಚಳ ಆಗಬೇಕು ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳಿಗೆ ಸರಕಾರ ಗಮನಹರಿಸಬೇಕಿದೆ. ಅದಕ್ಕಾಗಿ ರವಿವಾರ ಬಂಕ್ ಬಂದ್ ಮಾಡುವುದು ಪರಿಹಾರವಲ್ಲ ಎಂದರು.
ಕರ್ನಾಟಕದ 24 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ವಿತರಕರ ಮಹಾಮಂಡಳದ ಅಡಿ ಜಿಲ್ಲಾ ಸಂಘಟನೆಗಳು ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು