ನಗರದ ಶಾಲೆಗಳಲ್ಲಿ ಹಾರಾಡಲಿವೆ ಬೀಜ ಧ್ವಜ !

ಕರ್ನಾಟಕ ರಾಜ್ಯೋತ್ಸವಕ್ಕೆ ಪರಿಸರಸ್ನೇಹಿ ಬಾವುಟ

Team Udayavani, Oct 31, 2019, 5:08 AM IST

e-11

ಮಹಾನಗರ: ಪ್ಲಾಸ್ಟಿಕ್‌ ಬಾವುಟಗಳನ್ನು ತ್ಯಜಿಸಿ ಬಟ್ಟೆಯ ಬಾವುಟಗಳನ್ನು ಹಿಡಿದಿದ್ದಾಯಿತು. ಇದೀಗ ಈ ರಾಜ್ಯೋತ್ಸವ ಸಂದರ್ಭ ಮಂಗಳೂರಿನ ಶಾಲೆಗಳಲ್ಲಿ ಬೀಜ ಬಾವುಟ ಗಳು ಹಾರಾ ಡಲಿವೆ. ವಿಶೇಷವೆಂದರೆ, ಬಾವುಟಗಳೇ ಸುಂದರ ಸಸ್ಯಗಳಾಗಿ ರೂಪು ತಳೆದು ಕಡಲನಾಡಿನ ಜನತೆಗೆ ಉಸಿರಾಟಕ್ಕೆ ಶುದ್ಧ ವಾಯು, ಸೇವನೆಗೆ ಆಹಾರ ಒದಗಿಸಲಿವೆ!

ಪರಿಸರಸ್ನೇಹಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ನಗರದ ಇಕೋ ಫ್ರೆಂಡ್ಸ್‌ ತಂಡವು ಈ ಕರ್ನಾಟಕ ರಾಜ್ಯೋತ್ಸವಕ್ಕೆ ಬೀಜ ಬಾವುಟಗಳನ್ನು ತಯಾರಿಸಿದ್ದು, ಇದೇ ಮೊದಲ ಬಾರಿಗೆ ನಗರದ ಶಾಲೆಗಳಲ್ಲಿ ಬೀಜ ಬಾವುಟವನ್ನು ಅರಳಿಸಲು ಪ್ರೇರಣೆ ನೀಡಿದೆ.

ಬಾವುಟ ತಯಾರಿ
ಕನ್ನಡ ಬಾವುಟದ ಬಣ್ಣವಾದ ಕೆಂಪು, ಹಳದಿ ಬಣ್ಣದ ಪೇಪರ್‌ಗಳಲ್ಲಿ ಈ ಬಾವುಟಗಳನ್ನು ತಯಾರಿಸಲಾಗಿದೆ. ಬಾವುಟವು 3 ಇಂಚು ಉದ್ದ ಮತ್ತು 2 ಇಂಚು ಅಗಲ ಇರುತ್ತದೆ. ಮುಂದಿನ ಭಾಗದಲ್ಲಿ ಎರಡು ಬಣ್ಣದ ಪೇಪರ್‌ಗಳು, ನಡುವೆ ತರಕಾರಿ ಬೀಜಗಳು, ಹಿಂದಿನ ಭಾಗದಲ್ಲಿ ಬಿಳಿ ಬಣ್ಣದ ಬಣ್ಣದ ಪೇಪರ್‌ಗಳನ್ನು ಅಂಟಿಸಿ ಅದಕ್ಕೆ ಪಿನ್‌ ಮಾಡಲಾಗಿದೆ. ಪೇಪರ್‌ಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವ ಗುಣ ಹೊಂದಿರುವುದರಿಂದ ಮಕ್ಕಳು ಬಾವುಟ ಬಳಕೆ ಮಾಡಿದ ನಂತರ ಈ ಪೇಪರ್‌ಗಳನ್ನು ಪಾಟ್‌ ಅಥವಾ ಮಣ್ಣಿನಲ್ಲಿ ನೇರವಾಗಿ ಹಾಕಬಹುದು. ಕೆಲವು ದಿನಗಳ ಅನಂತರ ಈ ಪೇಪರ್‌ ಮಣ್ಣಿನಲ್ಲಿ ಕರಗಿ ಬೀಜ ಮೊಳಕೆ ಯೊಡೆಯಲು ಆರಂಭಿಸುತ್ತದೆ. ಪ್ರತಿ ದಿನ ನೀರು ಹಾಕುತ್ತಿರಬೇಕು. ಕ್ರಮೇಣ ಮೊಳಕೆಯೊಡೆದ ಬೀಜ ಗಿಡವಾಗಿ ರೂಪು ತಳೆದು ಫಲಭರಿತವಾಗುತ್ತದೆ ಎಂಬುದು ತಂಡದ ಯೋಜನೆ.

ತರಕಾರಿ ಬೀಜಗಳು
ಈ ಬಾರಿ ತರಕಾರಿ ಬೀಜಗಳನ್ನೇ ಬಾವುಟದಲ್ಲಿ ಇಡಲಾಗಿದೆ. ಟೊಮೇ ಟೊ, ಬೆಂಡೆ, ಸೌತೆ ಮತ್ತು ಹರಿವೆ ಬೀಜ ಗಳನ್ನು ಬಾವುಟದೊಳಗಿಟ್ಟು ಬಾವುಟ ತಯಾರಿಸಲಾಗಿದೆ. ಈ ಬೀಜಗಳು ಬಹುಬೇಗನೆ ಮೊಳಕೆ ಯೊಡೆಯು ವುದರಿಂದ ಮಕ್ಕಳಿಗೂ ಇಷ್ಟವಾಗಬಹುದು ಎನ್ನುವ ಉದ್ದೇಶ ತಂಡದ್ದು.

ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ
ರಸ್ತೆ ಬದಿಗಳಲ್ಲಿ, ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಾವುಟಗಳನ್ನು ಮಾರಾಟ ಮಾಡುವುದರಿಂದ ಅದು ರಸ್ತೆಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿ ಒಡಲನ್ನು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. ಇದರಿಂದ ಜೀವಸಂಕುಲದ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಜೈವಿಕ ಕಾಗದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮ ಎಂಬ ಉದ್ದೇಶದಿಂದ ಈ ಬೀಜ ಬಾವುಟ ತಯಾರಿಸಲಾಗಿದೆ.

5 ಶಾಲೆ; 500 ಬೀಜ ಬಾವುಟ ಹಾರಾಟ
ಪ್ರಾಯೋಗಿಕವಾಗಿ ಈ ವರ್ಷ ಬೀಜದ ಬಾವುಟಗಳನ್ನು ತಯಾರಿಸಲಾಗಿದ್ದು, ನಗರದ 5 ಶಾಲೆಗಳ ಮಕ್ಕಳಿಗೆ ಗುರುವಾರ ಬಾವುಟಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉರ್ವ ಕೆನರಾ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಉರ್ವ ಸರಕಾರಿ ಶಾಲೆ, ಡೊಂಗರಕೇರಿ ಕೆನರಾ ಶಾಲೆ, ಕದ್ರಿ ಸರಕಾರಿ ಶಾಲೆಗಳಲ್ಲಿ ನ. 1ರ ಕರ್ನಾಟಕ ರಾಜ್ಯೋತ್ಸವದಂದು ಈ ಬಾವುಟಗಳು ಹಾರಾಡಲಿವೆ. ಈಗಾಗಲೇ 600 ಬಾವುಟಗಳನ್ನು ತಯಾರಿಸಲಾಗಿದ್ದು, ಈ ಪೈಕಿ 500 ಬಾವುಟಗಳನ್ನು ತಲಾ 100ರಂತೆ 5 ಶಾಲೆಗಳಿಗೆ ನೀಡಲಾಗುತ್ತದೆ. ಉಳಿದ 100 ಬಾವುಟಗಳನ್ನು ಮಣ್ಣಗುಡ್ಡೆ ಸಾವಯವ ಸಂತೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎನ್ನುತ್ತಾರೆ ತಂಡದ ಸದಸ್ಯರು.

ಪರಿಸರ ಸ್ನೇಹಿ ಆಚರಣೆ
ಪರಿಸರಸ್ನೇಹಿ ರಾಜ್ಯೋತ್ಸವ ಆಚರಿಸುವ ಉದ್ದೇಶದಿಂದ ಬೀಜ ಬಾವುಟಗಳನ್ನು ತಯಾರಿ ಸಲಾಗಿದೆ. 500 ಬಾವುಟಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಮುಂದೆ ಆ. 15ರಂದು ಶಾಲೆ ಗಳಲ್ಲೇ ಬೀಜ ಬಾವುಟ ತಯಾರಿ ಸುವಂತೆ ಪ್ರೇರೇಪಿಸುವ ಉದ್ದೇಶವಿದೆ.
– ರಾಜೇಶ್‌, ಇಕೋ ಫ್ರೆಂಡ್ಸ್‌ ಗ್ರೂಪ್‌

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

ಹುನಗುಂದ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.