ಸುಬ್ರಹ್ಮಣ್ಯ ದೇಗುಲ 2 ಕೋ.ರೂ. ನೆರವು
Team Udayavani, Aug 20, 2018, 10:25 AM IST
ಸುಬ್ರಹ್ಮಣ್ಯ : ನೆರೆ ಪರಿಹಾರ ನಿಧಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 2 ಕೋಟಿ ರೂ. ನೀಡುವುದಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಳೆ ಶಾಂತವಾಗಿ, ಜನರು, ಪಶು ಪಕ್ಷಿ ಸಂಕುಲಗಳು ಸುಖ, ನೆಮ್ಮದಿಯ ಜೀವನ ನಡೆಸಲು ಕೃಪೆ ತೋರುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯದಲ್ಲಿ ರವಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಆ. 21ರಂದು ಪ್ರಾತಃಕಾಲ 5 ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ 108 ಸೀಯಾಳಾಭಿಷೇಕ ಸೇವೆಯನ್ನು ನಡೆಸಲಾಗುವುದು ಎಂದರು.