ಭಾಷೆ ಬೆಳವಣಿಗೆಗೆ ಪ್ರಚಾರ ಅಗತ್ಯ: ಬಿಷಪ್
Team Udayavani, Jan 15, 2017, 3:45 AM IST
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಫೆ. 10ರಿಂದ 12ರ ವರೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿರುವ ಕೊಂಕಣಿ ಲೋಕೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ 12 ದಿನಗಳ ಪ್ರಚಾರ ಅಭಿಯಾನ ಶುಕ್ರವಾರ ಕೊಡಿಯಾಲ್ಬೈಲ್ನ ಬಿಷಪ್ಸ್ ಹೌಸ್ ಆವರಣದಲ್ಲಿ ಸಮಾರೋಪಗೊಂಡಿತು.
ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅವರು ಬಿಷಪ್ ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಅವರಿಗೆ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿದರು.
ಆಹ್ವಾನ ಪತ್ರಿಕೆ ಸ್ವೀಕರಿಸಿದ ಬಿಷಪ್ ಅಲೋಶಿಯಸ್ ಅವರು ಕೊಂಕಣಿ ಲೋಕೋತ್ಸವದ ಮಾಹಿತಿ ನೀಡಲು ರಾಜ್ಯ ವ್ಯಾಪಿ ಪ್ರಚಾರ ಅಭಿಯಾನ ಕೈಗೊಂಡ 8 ಮಂದಿ ಸದಸ್ಯರನ್ನು ಶಾಲು ಹೊದಿಸಿ ಸಮ್ಮಾನಿಸಿದರು. ಲೋಕೋತ್ಸವ ಸಮಿತಿ ಸದಸ್ಯ ಬಸ್ತಿ ವಾಮನ ಶೆಣೈ, ಅಕಾಡೆಮಿ ಸದಸ್ಯಲಾರೆನ್ಸ್ ಡಿ’ಸೋಜಾ, ವಿದ್ಯಾ ಕಾಮತ್, ದಿನೇಶ್ ಶೇಟ್, ನಿರಂಜನ ರಾವ್, ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಿತೋರಿ ಕಾರ್ಕಳ್ ನಿರ್ವಹಿಸಿದರು.
ಸಂತೋಷ್ ಶೆಣೈ ಮಂಗಳೂರು ಮತ್ತು ಸಂದೀಪ್ ಮೊಂತೇರೊ ಕಯ್ನಾರ್ ನೇತೃತ್ವ ವಹಿಸಿದ್ದ ಪ್ರಚಾರ ಅಭಿಯಾನ ತಂಡದಲ್ಲಿ ಪ್ರಕಾಶ್ ನಾಯಕ್ ಮಂಗಳೂರು, ಜೇಮ್ಸ್ ಡಿ’ಸೋಜಾ ಬೋಂದೆಲ್, ಸುನಿಲ್ ಡಿ’ಸೋಜಾ ಮಣಿಯಂಪಾರೆ, ಜೆರೋಂ ಡಿ’ಸೋಜಾ ಮುಡಿಪು, ಜಾರ್ಜ್ ಡಿ’ಸೋಜಾ ನಾರಾಂಪಾಡಿ, ರೋಶನ್ ಫೆರ್ನಾಡಿಸ್ ಮೂಲ್ಕಿ ಮೊದಲಾದವರಿದ್ದರು.
ತಂಡ ಜನವರಿ 2ರಂದು ಉಡುಪಿಯಿಂದ ಪ್ರಚಾರ ಅಭಿಯಾನ ಆರಂಭಿಸಿದ್ದು, 12 ದಿನಗಳ ಅವಧಿಯಲ್ಲಿ ಉತ್ತರ ಕನ್ನಡ, ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಮೈಸೂರು, ಕೊಡಗು, ಕಾಸರಗೋಡು ಜಿಲ್ಲೆ ಸೇರಿದಂತೆ 15 ಜಿಲ್ಲೆಗಳಲ್ಲಿ ಪ್ರಯಾಣಿಸಿ ಜ. 13ರಂದು ಮಂಗಳೂರು ತಲುಪಿದೆ. ಚರ್ಚ್, ದೇವಸ್ಥಾನ, ಮಸೀದಿ ಸೇರಿದಂತೆ 56 ಪ್ರಮುಖ ಸ್ಥಳಗಳಲ್ಲಿ ಮೊಕ್ಕಾಂ ಮಾಡಿ ಲೋಕೋತ್ಸವದ ಆಮಂತ್ರಣ ಪತ್ರಿಕೆ ವಿತರಿಸಿದೆ. ಸುಮಾರು 2400 ಕಿ.ಮೀ. ದೂರ ಕ್ರಮಿಸಿದೆ.
∙ಅಭಿಯಾನದ ಸಂದರ್ಭ ಕೊಂಕಣಿ ಮಾತನಾಡುವ ಎಲ್ಲ ವರ್ಗದ ಜನರಿಂದ ಉತ್ತಮ ಪ್ರತಿಸ್ಪಂದನ ವ್ಯಕ್ತವಾಗಿದೆ.
– ಸಂತೋಷ್ ಶೆಣೈ
∙ಚರ್ಚ್, ದೇವಸ್ಥಾನ, ಮಸೀದಿಗಳಿಗೆ ಭೇಟಿ ನೀಡಿದ್ದು, ಎಲ್ಲರಿಂದಲೂ ಕೊಂಕಣಿ ಲೋಕೋತ್ಸವಕ್ಕೆ ಅದ್ಭುತ ಪ್ರತಿಕ್ರಿಯೆ ಲಭಿಸಿದೆ.
– ಜೇಮ್ಸ್ ಡಿ’ಸೋಜಾ
∙ ಕೊಂಕಣಿ ಮಾತನಾಡುವ 41 ಸಮುದಾಯಗಳಿದ್ದು, ಅಭಿಯಾನ ದ ಸಂದರ್ಭ ಬಹುತೇಕ ಎಲ್ಲ ಸಮುದಾಯಗಳ ಜನರನ್ನು ಬೇಡಿಯಾಗುವ ಅವಕಾಶ ಲಭಿಸಿತು.
– ಪ್ರಕಾಶ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
MUST WATCH
ಹೊಸ ಸೇರ್ಪಡೆ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು