ಕೋವಿಡ್-19 ಲಾಕ್ ಡೌನ್: ದಾವಣಗೆರೆಯಲ್ಲಿ ಬಹುತೇಕ ದಿಗ್ಭಂದನ
Team Udayavani, Mar 27, 2020, 5:26 PM IST
ದಾವಣಗೆರೆ: ಕೋವಿಡ್-19 ವೈರಸ್ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಲಾಕ್ ಡೌನ್ ಬೆಂಬಲವಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಹಳೆಯ ಭಾಗದ ಬಹುತೇಕ ಮುಖ್ಯ ರಸ್ತೆ, ಓಣಿಗಳ ಜನರು ಸ್ವಯಂ ದಿಗ್ಭಂದನಕ್ಕೆ ಒಳಗಾಗಿದ್ದಾರೆ. ಬಂಬೂ ಬಜಾರ್, ಬೇತೂರು ರಸ್ತೆ, ಆಜಾದ್ ನಗರ ಒಳಗೊಂಡಂತೆ ಬಹುತೇಕ ಕಡೆ ರಸ್ತೆ ಬಂದ್ ಮಾಡಲಾಗಿದೆ.
ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿದೆ. ಜನರು ಯಾವುದೇ ಕಾರಣಕ್ಕೂ ಹೊರಗೆ ಓಡಾಡುವಂತಿಲ್ಲ ಎಂದು ಹೇಳುತ್ತಿದೆ. ಆದರೂ, ಜನರು ಸುಖಾಸುಮ್ಮನೆ ಓಡಾಡುತ್ತಲೇ ಇದ್ದಾರೆ. ಯಾರಿಗೆ ಗೊತ್ತು ಯಾರಿಗೆ ಏನಿದಿಯೋ. ಹಾಗಾಗಿ ನಾವೇ ಓಣಿ ಜನರು ಸೇರಿಕೊಂಡು ರಸ್ತೆ ಬಂದ್ ಮಾಡಿದ್ದೇವೆ. ತೀರಾ ಅರ್ಜೆಂಟ್ ಇದ್ದರೆ ಮಾತ್ರ ಓಡಾಡುವುದಕ್ಕೆ ಜಾಗ ಬಿಟ್ಟುಕೊಂಡಿದ್ದೇವೆ. ಯಾರಿಗೆ ಏನೇ ಬೇಕಾದರೂ ಒಬ್ಬರು ಹೊರಗೆ ಹೋಗಿ ತಂದು ಕೊಡುತ್ತೇವೆ. ನಮ್ ಮೊಬೈಲ್ ನಂಬರ್ ಕೊಟ್ಟಿದ್ದೇವೆ. ಬೇಕಾದವರು ಕಾಲ್ ಮಾಡ್ತಾರೆ. ಅವರಿಗೆ ಬೇಕಾದನ್ನು ತಂದು ಕೊಡಲಾಗುವುದು ಎನ್ನುತ್ತಾರೆ ಮಟ್ಟಿಕಲ್ ಸಮೀಪದ ಓಣಿಯ ಯುವಕರು.
ಕೋವಿಡ್-19 ವೈರಸ್ ಯಾರಿಗೂ ಹರಡಬಾರದು. ನಮಗೆ ತೊಂದರೆ ಆಗಬಾರದು. ನಮ್ಮಿಂದ ಬೇರೆಯವರಿಗೆ ಸಹ ತೊಂದರೆ ಆಗಬಾರದು. ಆ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಓಣಿ ಜನ ಬೇರೆ ಕಡೆ ಹೋಗೊಲ್ಲ. ನಮ್ ಓಣಿಗೆ ಬೇರೆ ಕಡೆಯವರು ಬರುವಂತಿಲ್ಲ. ಯಾರೂ ಬಂದರೂ ಈ ಗೇಟ್ ಆ ಕಡೆ ನಿಂತು ಮಾತಾಡಿಕೊಂಡು, ನೋಡಿಕೊಂಡು ಹೋಗಬೇಕು ಅಷ್ಟೇ ಎಂದು ಹೇಳುತ್ತಾರೆ.
ಇಲ್ಲಿ ಸಣ್ಣ ಮಕ್ಕಳು ಇವೆ. ವಯಸ್ಸಾದವರು ಇದಾರೆ. ಏನಾದರೂ ಆದರೆ ಏನು ಗತಿ ಎಂದು ನಾವೇ ರೋಡ್ ಬಂದ್ ಮಾಡುವುದಕ್ಕೆ ಹೇಳಿದ್ದೀವಿ. ನಾವು ಬೇರೆ ಕಡೆ ಹೋಗುವುದಿಲ್ಲ. ನಮ್ಮ ಕಡೆ ಬೇರೆಯವರಿಗೆ ಅವಕಾಶ ಇಲ್ಲ ಎಂದು ಇಲ್ಲಿನ ಜಯಲಕ್ಷ್ಮಿ ಹೇಳಿದರು.
ಬೇತೂರು ರಸ್ತೆಯ ಮುದ್ದಾಭೋವಿ ಕಾಲೋನಿಯ ಪ್ರಮುಖ ರಸ್ತೆಯನ್ನು ಬಂದ್ ಮಾಡಲಾಗಿದೆ. ಹಳೆಯ ದಾವಣಗೆರೆಯ ಬಹುತೇಕ ಕಡೆ ಈ ರೀತಿಯ ವಾತಾವರಣ ಸಾಮಾನ್ಯ ಎನ್ನುವಂತಾಗಿದೆ.
ರಸ್ತೆ ಬಂದ್ ಎನ್ನುವುದು ಸಾಮೂಹಿಕ ಸನ್ನಿಯಂತೆ ಕಂಡರೂ ಜನ ಸಾಮಾನ್ಯರು ಕೋವಿಡ್-19 ವೈರಸ್ ಎಂಬ ಮಹಾಮಾರಿಯ ಅಬ್ಬರಕ್ಕೆ ಅಕ್ಷರಶಃ ಬೆದರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಲಾಕ್ ಡೌನ್ ಬಗ್ಗೆ ಕೆಲವರು ಆಕ್ಷೇಪ ಮಾಡಿದರೂ ಒಟ್ಟಾರೆಯಾಗಿ ಜಾಗೃತಿ ಮೂಡುತ್ತಿದೆ. ಸರ್ಕಾರದ ಪ್ರಯತ್ನಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುವ ಕೆಲಸ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ