ಕೋವಿಡ್ ಭೀತಿಯಲ್ಲೇ ಪಂಚಮಿ
Team Udayavani, Jul 25, 2020, 11:32 AM IST
ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್ನ ವ್ಯಾಪಕ ಹರಡುವಿಕೆ, ಭಯದ ವಾತಾವರಣದ ನಡುವೆಯೂ ದಾವಣಗೆರೆ ಜನರು ಶುಕ್ರವಾರ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.
ಶ್ರಾವಣ ಮಾಸದ ಪಂಚಮಿ ದಿನ ಕಲ್ಲು ನಾಗರಕ್ಕೆ ಹಾಲು ಎರೆಯುವುದು, ಪೂಜೆ ಸಲ್ಲಿಸುವ ಸಂಪ್ರದಾಯವನ್ನು ದಾವಣಗೆರೆಯಲ್ಲಿ ಬಹುತೇಕ ಕಡೆ ಬಹಳ ಅದ್ಧೂರಿಯಾಗಿ ಆಚರಿಸುವುದು ಸಾಮಾನ್ಯ. ಆದರೆ ಈ ವರ್ಷ ಎಂದೆಂದೂ ಕಂಡು ಕೇಳರಿಯದ ಕೋವಿಡ್ ವೈರಸ್ ಹಾವಳಿ ಆ ಎಲ್ಲಾ ಸಂಭ್ರಮವನ್ನು ಆಪೋಶನ ಮಾಡಿದೆ. ಬೆಳಗ್ಗೆಯಿಂದಲೇ ನಾಗರಕಟ್ಟೆ, ದೇವಸ್ಥಾನ, ಹಿಂದಿನ ಕಾಲದಿಂದಲೂ ಹಾಲು ಎರೆಯುವ ಸ್ಥಳಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಹಾಲು ಎರೆಯುವುದು ಕಂಡು ಬಂದಿತು. ಕೋವಿಡ್ ವೈರಸ್ ಭಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು. ಸ್ಯಾನಿಟೈಸರ್ ಸಹ ಬಳಸಿದರು.
ಪ್ರತಿ ವರ್ಷ ಒಬ್ಬರು ಪೂಜೆ ಮಾಡಿದ್ದ ಕಲ್ಲುನಾಗರ, ದೇವರ ಮೂರ್ತಿಗಳನ್ನು ಶುಚಿಗೊಳಿಸಿ, ಹೂವು, ಹತ್ತಿ ಹಾರ ಹಾಕಿ ಪೂಜೆ ಮಾಡುತ್ತಿದ್ದರು. ಆದರೆ ಈ ವರ್ಷ ಯಾವುದೇ ಗೋಜಿಗೇ ಹೋಗಲಿಲ್ಲ. ಬೇರೆಯವರು ಪೂಜೆ ಮಾಡಿದ್ದನ್ನು ತೆಗೆಯುವುದು, ಮತ್ತೆ ಶೃಂಗರಿಸುವುದನ್ನು ಮಾಡಲಿಲ್ಲ. ಹಾಗೆಯೇ ಪೂಜೆ ಮಾಡಿ ಹಾಲು ಎರೆದರು. ಕಾರಣ ಕೋವಿಡ್ ಭಯ. ಅಷ್ಟೊಂದು ಮುಂಜಾಗ್ರತೆಯೊಂದಿಗೆ ಹಬ್ಬದಾಚರಣೆ ಮಾಡಿದರು. ಕೋವಿಡ್ ಧಾರ್ಮಿಕ ವಿಧಿ, ವಿಧಾನ, ಪೂಜಾ ಕಾರ್ಯಗಳಿಗೂ ತಡೆ ಉಂಟು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್ ಮಾಡಿಸಲು ಕ್ರಮ: ಪರಂ
Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ