![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Sardar Vallabhbhai ಪಟೇಲರೇ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು: ಸಂತೋಷ ಲಾಡ್
Team Udayavani, Feb 25, 2024, 12:47 AM IST
![Sardar Vallabhbhai ಪಟೇಲರೇ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು: ಸಂತೋಷ ಲಾಡ್](https://www.udayavani.com/wp-content/uploads/2024/02/lad-3-601x465.jpg)
ಹುಬ್ಬಳ್ಳಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕೇಂದ್ರ ಸಚಿವರಾಗಿದ್ದಾಗ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪಟೇಲರ ಪ್ರತಿಮೆಯನ್ನು ನಿಲ್ಲಿಸಿದ್ದಾರೆ. ಆದರೆ ಅವರೇ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು. ಚುನಾವಣೆ ಬಂದಾಗೊಮ್ಮೆ ಬಿಜೆಪಿಯವರು ಜಾತಿ-ಧರ್ಮ ಮುಂದೆ ತಂದು ಅಧಿಕಾರಕ್ಕೆ ಬರುತ್ತಾರೆ. ಅಭಿವೃದ್ಧಿ ಬಗ್ಗೆ ಚಕಾರ ಎತ್ತುವುದಿಲ್ಲ, ಇಂದು ಪಾಸ್ಪೋರ್ಟ್ನಲ್ಲಿ ದೇಶ 85ನೇ ಸ್ಥಾನದಲ್ಲಿದೆ. ನಮ್ಮ ಪ್ರಧಾನಿ ದೇಶವನ್ನು ಯಾಕೆ ಒಂದನೇ ಸ್ಥಾನಕ್ಕೆ ತರಲಿಲ್ಲ. ಇಂದು ದೇಶವನ್ನು ಅಭಿವೃದ್ಧಿ ವಿಷಯದಲ್ಲಿ ಯಾವ ದೇಶಕ್ಕೆ ಹೋಲಿಸಬೇಕು ಎಂದು ಪ್ರಶ್ನಿಸಿದರು.
“ಮೇಕ್ ಇನ್ ಇಂಡಿಯಾ’ದಿಂದ ಎಷ್ಟು ಪ್ರಗತಿಯಾಗಿದೆ? ಇದರ ಪ್ರಚಾರಕ್ಕಾಗಿ ಕೇಂದ್ರ ಸರಕಾರ 450 ಕೋ. ರೂ. ಖರ್ಚು ಮಾಡಿದೆ. ಈ ಬಗ್ಗೆ ಯಾಕೆ ಬಿಜೆಪಿಯವರು ಮಾತನಾಡುವುದಿಲ್ಲ ಎಂದರು.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.