ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ ಪಾಲಿಕೆ ಸಾಮಾನ್ಯ ಸಭೆ


Team Udayavani, Apr 11, 2017, 3:17 PM IST

hub1.jpg

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆ ತನ್ನ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆಯೇ? ಸಭೆಯ ಸಮರ್ಪಕ ನಿರ್ವಹಣೆ ಕೊರತೆ, ಸದನ ನಾಯಕರು ತಮ್ಮದೇ ಸದಸ್ಯರ ಮೇಲೆ ಹಿಡಿತ ಇಲ್ಲದಿರುವುದು, ಸದಸ್ಯರು-ಅಧಿಕಾರಿಗಳ ನಡುವೆ ಹೆಚ್ಚುತ್ತಿರುವ ಬಿರುಕು ಸಾಮಾನ್ಯ ಸಭೆಯ ದುಸ್ಥಿತಿಯನ್ನು ಬಿಂಬಿಸತೊಡಗಿದೆ. 

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿಸ್ತು-ಬದ್ಧತೆ, ವಿಷಯದ ಮೇಲೆ ಆಳವಾದ ಚರ್ಚೆ, ಸಮಸ್ಯೆಗಳ ಚಿಂತನ-ಮಂಥನವೇ ಮಾಯವಾಗುತ್ತಿದೆ. ಅವರವರ ಹಿತಾಸಕ್ತಿ ವಿಷಯಗಳೇ ವಿಜೃಂಭಿಸತೊಡಗಿದ್ದು, ಅನೇಕ ವಿಚಾರಗಳು  ಪ್ರಸ್ತಾಪವಾದರೂ ಗಂಭೀರತೆ ಮರೆತು ಸದನ ಅಡ್ಡದಾರಿಯತ್ತ ಸಾಗುವುದೇ ಅಧಿಕವಾಗುತ್ತಿದೆ. ಸಭೆ ಮುಂದೂಡಿಕೆ, ಮುಂದೂಡಿದ ಸಭೆಯೂಮಂದೂಡಿಕೆ ಸ್ಥಿತಿ ನಿರ್ಮಾಣವಾಗುತ್ತಿದೆ. 

ಹದ ತಪ್ಪುತ್ತಿದೆ ಸಭೆ: ಪಾಲಿಕೆ ಸಾಮಾನ್ಯ ಸಭೆ ಸಮರ್ಪಕವಾಗಿ ಸಾಗಬೇಕಾದರೆ ಮಹಾಪೌರ, ಆಯುಕ್ತ, ವಿಪಕ್ಷ ನಾಯಕ ಹಾಗೂ ಸಭಾನಾಯಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೆ, ಕಳೆದ ಕೆಲ ಸಭೆಗಳ ನಡವಳಿಕೆ ಗಮನಿಸಿದರೆ ಈ ನಾಲ್ವರು ವಿಫ‌ಲರಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದವರೆ ವಿವಾದದ ಕಿಡಿಯೊತ್ತಿಸುತ್ತಿದ್ದಾರೆ. 

ಸಭೆ ಸಮರ್ಪಕ ನಿರ್ವಹಣೆ ಕೊರತೆ ಇತ್ತೀಚೆಗಿನ  ದಿನಗಳಲ್ಲಿ ಹೆಚ್ಚತೊಡಗಿದೆ. ಸದನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ಸದಸ್ಯರ ವಾರ್ಡ್‌ ಸಮಸ್ಯೆ ಹೀಗೆ ಯಾವುದೇ ವಿಷಯಕ್ಕೂ ಅದರದ್ದೇಯಾದ ನಿಯಮವಿದೆ. ಪ್ರಶ್ನೋತ್ತರ ವೇಳೆಯಲ್ಲಿ ಹತ್ತಾರು ಜನ ಮಾತನಾಡುವ ಮೂಲಕ ಪ್ರಶ್ನೆ ಕೇಳಿದವರೇ ನಾನೇನು ಕೇಳಿದ್ದೇನೆ, ಕೇಳುದ್ದು  ನಾನೇನಾ ಎಂದು ಮರೆತು ಹೋಗುವಂತಹ ಸ್ಥಿತಿ ನಿರ್ಮಾಣವಾದರೂ ಅದನ್ನು ಸರಿಪಡಿಸುವ ಕೆಲಸ ಮಹಾಪೌರರಿಂದ ಆಗುತ್ತಿಲ್ಲ.  

ಶೂನ್ಯ ವೇಳೆ ಇನ್ನಿತರ ಸಮಯದಲ್ಲಿ ಏಕಕಾಲಕ್ಕೆ ನಾಲ್ಕೈದು ಜನ ಮಾತನಾಡಲು ನಿಲ್ಲುತ್ತಿದ್ದು, ಇದಕ್ಕೆ ಆಯಾ ಪಕ್ಷಗಳ ಸದನ ನಾಯಕರಿಂದಾಗಲಿ, ಮಹಾಪೌರರಿಂದಾಗಲಿ ನಿಯಂತ್ರಣ ಹಾಗೂ ಕೆಎಂಸಿ ಕಾಯ್ದೆ ಏನು ಹೇಳುತ್ತಿದೆ ಎಂಬುದರ ಸಣ್ಣ ಚಿಂತನೆಯೂ ಇಲ್ಲದಾಗಿದೆ. ವಿಪಕ್ಷ ನಾಯಕ ಎದ್ದು  ತರೆ ಯಾವ ವಿಷಯ ಪ್ರಸ್ತಾಪಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೋ, ಯಾವ ತಪ್ಪು ಹುಡುಕುತ್ತಾರೋ ಎಂಬ ಭಾವನೆ ಆಡಳಿತ ಪಕ್ಷದವರಿಗೆ ಮೂಡಬೇಕು ಆದರೆ, ಅಂತಹ ಯಾವುದೇ ಸನ್ನಿವೇಶ ಇಲ್ಲವಾಗುತ್ತಿದೆ. 

ವಿಪಕ್ಷ ನಾಯಕರೇ ಅಪರೂಪಕ್ಕೊಮ್ಮೆ ಎನ್ನುವಂತೆ ಚುಟುಕಾಗಿ ಮಾತನಾಡುವ ಸ್ಥಿತಿ ಇದೆ. ವಿಪಕ್ಷ ನಾಯಕರಾದವರು ತಮ್ಮ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಷಯ ಪ್ರಸ್ತಾಪ ಕುರಿತಾಗಿ ಸಂಪರ್ಕ ಹೊಂದಬೇಕು, ತಮ್ಮ ಸದಸ್ಯರು ನಿಯಮ ಮೀರುತ್ತಿದ್ದರೆ, ಅನಗತ್ಯವಾಗಿ ಚರ್ಚೆಗೆ ಮುಂದಾದರೆ ಅವರನ್ನು ನಿಯಂತ್ರಿಸಬೇಕು ಅದು ಇಲ್ಲವಾಗುತ್ತಿದೆ. 

ಇನ್ನು ಸಭಾನಾಯಕರೆಂದರೆ ಆಡಳಿತ ಪಕ್ಷದ ಸೇನಾಧಿಪತಿ ಇದ್ದಂತೆ ಇಡೀ ತಂಡವನ್ನು ಮುನ್ನಡೆಸಬೇಕು, ವಿಪಕ್ಷಗಳು ಇಕ್ಕಟ್ಟು ಸ್ಥಿತಿ ಸೃಷ್ಟಿಸುವ ಸಂದರ್ಭದಲ್ಲಿ ಮಹಾಪೌರರ ನೆರವಿಗೆ ಧಾವಿಸಬೇಕು. ತಮ್ಮ ಪಕ್ಷದ ಸದಸ್ಯರು ನಿಯಮ ಮೀರಿ ಇಲ್ಲವೆ ಅನಗತ್ಯವಾಗಿ ಮಧ್ಯಪ್ರವೇಶ, ಮಾತನಾಡಲು ಮುಂದಾದಾಗ ಅವರನ್ನು  ನಿಯಂತ್ರಿಸಬೇಕು. ಆದರೆ, ಸಭಾನಾಯಕ ಸ್ಥಾನವೂ ಈ ವಿಚಾರದಲ್ಲಿ ವಿಫ‌ಲವಾಗತೊಡಗಿದೆ. 

ಸಭೆ ನಿಯಮಗಳಿಗನುಸಾರವಾಗಿ ಸಾಗಬೇಕಾದರೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಗೊಂದಲ, ಸಂಶಯಗಳೇನಾದರೂ ಬಂದರೆ ಅವುಗಳನ್ನು ನಿವಾರಿಸುವ, ಸದಸ್ಯರಿಗೆ ಮನವರಿಕೆ ಮಾಡುವ ಮೂಲಕ ಸಭೆ ಸುಗಮವಾಗಿ ಸಾಗಲು ತಮ್ಮದೇ ಕೊಡುಗೆ ನೀಡಬೇಕಾದ ಜವಾಬ್ದಾರಿ ಆಯುಕ್ತರದ್ದಾಗಿದೆ. ಆದರೆ ಆಯುಕ್ತರು ವಿಪಕ್ಷ ನಾಯಕರೇ ನಾಚುವ ರೀತಿಯಲ್ಲಿ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. 

ಸದಸ್ಯರೇನಾದರೂ ನಿಯಮಕ್ಕೆ ವಿರುದ್ಧ ನಿರ್ಣಯಕ್ಕೆ ಮುಂದಾದರೆ ಅದನ್ನು ಸರಕಾರದ ಗಮನಕ್ಕೆ ತರುವ ಇಲ್ಲವೆ ಸದಸ್ಯರಿಗೆ ಕಾಯ್ದೆಯ ಮಾಹಿತಿ ನೀಡುವ ಬದಲು ಸದಸ್ಯರ ಹಕ್ಕುಗಳನ್ನೇ ಪ್ರಶ್ನಿಸುವ ರೀತಿಯಲ್ಲಿ ಆಯುಕ್ತರು ನಡೆದುಕೊಳ್ಳುತ್ತಿರುವುದು ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಕಂದಕ ಹೆಚ್ಚತೊಡಗಿದೆ. ಇಬ್ಬರ ನಡುವೆ ಸಂಶಯ, ಅವಿಶ್ವಾಸ, ಅಸಮಾಧಾನದ ವಾತಾವರಣ ಹೆಚ್ಚತೊಡಗಿದೆ. 

ಪಾಲಿಕೆ ಆದಾಯ ವೃದ್ಧಿ, ಸ್ವತ್ಛತೆ, ಸೌಂದರ್ಯಕ್ಕೆ ಒತ್ತು ನೀಡಿ ನಿರೀಕ್ಷಿತ ಕೆಲಸ ಆಗಿಲ್ಲ ಎಂದು ಪಕ್ಷಭೇದ ಮರೆತು ಅಧಿಕಾರಿಗಳ ಮೇಲೆ ಮುಗಿಬೀಳಬೇಕಾದ ಸದಸ್ಯರಲ್ಲಿ ಕೆಲವರು ಈ ಕಾಮಗಾರಿ ಯಾಕೆ ಮಾಡಿಲ್ಲ ಎಂದು ವಿಷಯ ಮಂಡಿಸುತ್ತಾರೆ. ಅವರದ್ದೇ ಪಕ್ಷದ ಒಂದಿಬ್ಬರು ಸದಸ್ಯರು ಇದಕ್ಕೆ ವ್ಯತಿರಿಕ್ತವಾಗಿ ವರ್ತನೆ ತೋರುತ್ತಾರೆ. ಪಾಲಿಕೆ  ಜಾಗದ ಅತಿಕ್ರಮಣ ಮಾಡಿದವರಿಗೆ ಪಾಲಿಕೆಯಿಂದ ದಂಡ ಹಾಕಬೇಕಿದ್ದರೆ, ಅಂತಹವರಿಗೆ ಪರಿಹಾರ ನೀಡಿ ಎಂದು ಸ್ವತಃ ಸದಸ್ಯರೇ ಒತ್ತಾಯಿಸುತ್ತಾರೆ. 

ತಮ್ಮದೇ ಪಕ್ಷದ ಸದಸ್ಯರು ಸೇರಿದಂತೆ ಸದನ ನಿರ್ಣಯ ಕೈಗೊಂಡ ಮೇಲೂ ಅದನ್ನು ವಿರೋಧಿಸಿ ಒಂದಿಬ್ಬರು ಸದಸ್ಯರು ತಮ್ಮ ಸದನ ನಾಯಕರಿಗೂ ತಿಳಿಸದೆ ಸಭೆಯಿಂದ ಹೊರ ಹೋಗುತ್ತಾರೆ. ಒಂದು ರೀತಿಯಲ್ಲಿ ನೀತಿ-ನಿಯಮ, ಯಾರ ಜವಾಬ್ದಾರಿ ಏನು, ಯಾರು ಯಾವ ರೀತಿ ವರ್ತಿಸಬೇಕು ಎಂಬ ಸಣ್ಣ ಚಿಂತನೆಯೂ ಇಲ್ಲದೆ ಪಾಲಿಕೆ ಸಾಮಾನ್ಯ ಸಭೆ ಮೇಷ್ಟ್ರು ಇಲ್ಲದ ಶಾಲೆಯಂತಾಗುತ್ತಿದೆ. ತಾನು ನಡೆದಿದ್ದೇ ದಾರಿ ಎನ್ನುವಂತೆ ಸಾಗತೊಡಗಿದೆ. ಆಯಾ ಪಕ್ಷಗಳ ಹಿರಿಯ ನಾಯಕರು ಸಹ ಇದಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೌನಕ್ಕೆ ಜಾರಿದಂತೆ ಭಾಸವಾಗುತ್ತಿದೆ.  

* ಅಮರೇಗೌಡ ಗೋನವಾರ 

ಟಾಪ್ ನ್ಯೂಸ್

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

rain 21

Heavy Rain; ಬೆಳಗಾವಿ, ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

Hubli: ಬಂಧಿತ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ… ಆರೋಪಿ ಕಾಲಿಗೆ ಗುಂಡೇಟು

Hubballi: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Uttara Karnataka; ನದಿಗಳ ಅಬ್ಬರಕ್ಕೆ ಉತ್ತರದಲ್ಲಿ “ನೆರೆ’ ಹೊರೆ

Uttara Karnataka; ನದಿಗಳ ಅಬ್ಬರಕ್ಕೆ ಉತ್ತರದಲ್ಲಿ “ನೆರೆ’ ಹೊರೆ

Hubli; ಕರ್ತವ್ಯ ಬಹಿಷ್ಕರಿಸಿ ಪಾಲಿಕೆ ಕಚೇರಿ ಸಿಬ್ಬಂದಿ ಪ್ರತಿಭಟನೆ

Hubli; ಕರ್ತವ್ಯ ಬಹಿಷ್ಕರಿಸಿ ಪಾಲಿಕೆ ಕಚೇರಿ ಸಿಬ್ಬಂದಿ ಪ್ರತಿಭಟನೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Screenshot (2)

Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್‌. ರೈ

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.