![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಸವಾಲು ಮೆಟ್ಟಿ ನಿಂತಾಗ ಸಾಧನೆ ಸಾಧ್ಯ: ಸ್ವಾಮೀಜಿ
Team Udayavani, Apr 21, 2018, 5:40 PM IST
![21-April-22.jpg](https://www.udayavani.com/wp-content/uploads/2018/04/21/21-April-22.jpg)
ಹಾರೂಗೇರಿ: ಜೀವನದಲ್ಲಿ ಎದುರಾಗುವ ಪ್ರತಿ ಸವಾಲುಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದರೆ ಮಾತ್ರ ಬದುಕು ರಸವತ್ತಾಗಿರುತ್ತದೆ ಎಂದು ಪರಮಾನಂದವಾಡಿ ಶ್ರೀಗುರುದೇವಾಶ್ರಮದ ಡಾ| ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಎಸ್ಪಿಎಂ ಶಿಕ್ಷಣ (ಬಿಇಡಿ) ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಬಿಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಬೇಕಾದರೆ ಮಾಡುವ ಕೆಲಸ ಇಷ್ಟದಿಂದ ಕೂಡಿರಬೇಕು. ಮಾನಸಿಕ ಸಾಮರ್ಥ್ಯ ಹಾಗೂ ಸದೃಢ ಮನಸ್ಥಿತಿಯುಳ್ಳ ಮಾನವರು ನಾವಾಗಬೇಕು. ಶಿಕ್ಷಣ ತರಬೇತಿ ಜತೆಗೆ ಮನಕ್ಕೆ ತರಬೇತಿ ಪಡೆದುಕೊಂಡು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಪರಿಪೂರ್ಣತೆಯನ್ನು ಸಾಧಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎಲ್.ಎಸ್. ಧರ್ಮಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ತರಬೇತಿ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ರಾಯಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ|ಎಲ್.ಬಿ. ಬನಶಂಕರಿ ಮಾತನಾಡಿ, ಗುರು, ತಾಯಿಯ ಋಣ ಶ್ರೇಷ್ಠವಾದುದು. ನಾಲ್ಕುಗೋಡೆಗಳ ವರ್ಗಕೊಣೆಯಲ್ಲಿ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ ಎಂದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ|ಆರ್.ಜಿ. ವಂಟಗೂಡಿ, ಡಾ| ಬಿ.ಬಿ.ರಾಮತೀರ್ಥ, ಪ್ರೊ| ಎಂ.ಬಿ. ಪಡೇದಾರ, ಪ್ರೊ| ಎಸ್.ಬಿ. ಕಿಲ್ಲೇದಾರ, ಪ್ರೊ| ಎಸ್.ಎಸ್. ಹಾರೂಗೇರಿ, ಪ್ರೊ|ಎಸ್.ಎಂ. ಹೆಳವರ, ಪ್ರೊ| ಎಚ್.ಎಸ್. ಜೋಗನ್ನವರ, ಪ್ರೊ| ಎಸ್.ವಿ. ಸಂಗನಗೌಡರ, ಪ್ರೊ| ಪಿ.ಪಿ. ಸುತಾರ, ಪ್ರೊ| ಜೆ.ಎಸ್. ಭಂಗಿ ವೇದಿಕೆಯಲ್ಲಿದ್ದರು. ಪ್ರೊ| ಜಿ.ಎಸ್. ಕಂಬಾರ ಸ್ವಾಗತಿಸಿದರು. ವಿದ್ಯಾ ಮಗದುಮ್ ನಿರೂಪಿಸಿದರು. ಮುರುಗೆಪ್ಪ ಕಾಪಸಿ ವಂದಿಸಿದರು.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.