ಆ್ಯಪಲ್‌ ಬಾರಿ ರೈತ ಬೆಳೆದ “ಭಾರಿ’


Team Udayavani, Jan 2, 2020, 1:04 PM IST

gadaga-tdy-1

ನರಗುಂದ: ಸಕಾಲಕ್ಕೆ ಮಳೆಯಿಲ್ಲದೇ ರೈತರು ಕೃಷಿಯಿಂದ ವಿಮುಖವಾಗುತ್ತಿರುವ ಬೆನ್ನಲ್ಲೇ ಇಲ್ಲೊಬ್ಬ ಯುವ ರೈತ ಬಯಲು ಸೀಮೆಗೆ ಅಪರೂಪವೆನಿಸಿದ “ಆ್ಯಪಲ್‌ ಬಾರಿ’ ಬೆಳೆದು ಕೃಷಿಕರಿಗೆ ಮಾದರಿಯಾಗಿದ್ದಾನೆ.

ತಾಲೂಕಿನ ಸಂಕದಾಳ ಗ್ರಾಮದ ಬಿಎ ಪದವೀಧರ, ಯುವ ರೈತ ರುದ್ರಗೌಡ ಹನಮಂತಗೌಡ ಲಿಂಗನಗೌಡ್ರ ಅವರು, ಗ್ರಾಮದ ಮುಳ್ಳೂರ ಒಳರಸ್ತೆಗೆ ಹೊಂದಿಕೊಂಡ ಜಮೀನಿನ 1 ಎಕರೆ ಪ್ರದೇಶದಲ್ಲಿ ಆ್ಯಪಲ್‌ ಬಾರಿ ಬೆಳೆದು ಗಮನ ಸೆಳೆದಿದ್ದಾನೆ. ಕೃಷಿಹೊಂಡದಿಂದ ಹನಿ ನೀರಾವರಿ ಮಾಡುವ ಮೂಲಕ ಬೆಳೆಗೆ ನೀರುಣಿಸಿದ್ದಾನೆ. ಶೆಗಣಿ ಗೊಬ್ಬರ(ಸಾವಯವ) ಬಳಸಿದ್ದಾನೆ. ನವಲಗುಂದ ತಾಲೂಕು ಮಣಕವಾಡದ ಚಿಕ್ಕಪ್ಪ ಬಿ.ಸಿ. ಭರಮಗೌಡ್ರ ಅವರ ಪ್ರೇರಣೆ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದಿರುವ ರುದ್ರಗೌಡ ಅವರು 2018ರಲ್ಲಿ ಬೆಳಗಾವಿ ಜಿಲ್ಲೆ ಕಾಗವಾಡದ ಮಿರಾಕಲ್‌ ಅಗ್ರಿ ಟೆಕ್‌ ನರ್ಸರಿಯಿಂದ 40 ರೂ.ಗೆ ಒಂದರಂತೆ 300 ಸಸಿ ತಂದು ನಾಟಿ ಮಾಡಿದ್ದಾರೆ. 40ರಿಂದ 45 ಸಾವಿರ ರೂ. ಖರ್ಚು ಮಾಡಿ ಬೆಳೆಸಿದ ಆ್ಯಪಲ್‌ ಬಾರಿ(ದೊಡ್ಡ ಗಾತ್ರದ ಹಣ್ಣು) ಒಂದೂವರೆ ವರ್ಷದಲ್ಲಿ ಉತ್ತಮ ಫಲ ತಂದು ಕೊಡುತ್ತಿದೆ.

ವಿಶಿಷ್ಟ ಗಾತ್ರದ ಹಣ್ಣು : ಪ್ರತಿ ಹಣ್ಣು 120 ಗ್ರಾಂ ತೂಕ ಹೊಂದುತ್ತದೆ. ಈ ಬಾರಿ ಹ್ಣು ಸಣ್ಣ ಸೇಬು ಮಾದರಿಯಲ್ಲಿ ಇದ್ದುದರಿಂದ “ಆ್ಯಪಲ್‌ ಬಾರಿ’ ಎಂದೇ ಕರೆಯಲಾಗುತ್ತಿದೆ. ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ 100 ಸಸಿ ಕಳೆದುಕೊಂಡೆ. ಬಳಿಕ ಉಳಿದ 200 ಸಸಿ ಸೆಗಣಿ ಗೊಬ್ಬರದಿಂದಲೇ ಬೆಳೆಸಲಾಗಿದ್ದು ಎನ್ನುತ್ತಾರೆ ರುದ್ರಗೌಡರು.

ಕೃಷಿಹೊಂಡದಲ್ಲೇ ಮೀನು ಸಾಕಾಣಿಕೆ: ಕೃಷಿಯಲ್ಲಿ ಹಲವಾರು ವಿಧಗಳನ್ನು ಅಳವಡಿಸಿಕೊಂಡ ರುದ್ರಗೌಡ ಅವರು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ.ಸವದತ್ತಿ ಮೀನುಗಾರಿಕೆ ಇಲಾಖೆ ಉಚಿತ ನೀಡಿದ ಸಾಮಾನ್ಯ ಗೆಂಡೆ ತಳಿಯ 2 ಸಾವಿರ ಮೀನು ಮರಿಗಳನ್ನು ಸಾಕಿದ್ದಾರೆ.

ಕೃಷಿ, ತೋಟಗಾರಿಕೆ ಇಲಾಖೆ ನೆರವು: ಕೃಷಿ ಇಲಾಖೆ 10 ಫ್ರುಟ್ಸ್ ಟ್ಸ್ಟ್ರ್ಯಾಪ್ , 1 ಸೋಲಾರ ಟ್ಸ್ಟ್ರ್ಯಾಪ್ , ತೋಟಗಾರಿಕೆ ಇಲಾಖೆ 2 ಲಕ್ಷ ರೂ.ಸಹಾಯ ಧನದಲ್ಲಿ ನಿರ್ಮಿಸಿದ ಪ್ಯಾಕ್‌ ಹೌಸ್‌, 86 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಈರುಳ್ಳಿ ಸಂಸ್ಕರಣಾ ಘಟಕ ರೈತನಿಗೆ ನೆರವಾಗಿದೆ. ಕೈಸೇರಿದ ಆರು ಕ್ವಿಂಟಲ್‌ ಫಸಲು :  ಈಗಾಗಲೇ ಆರೂವರೆ ಕ್ವಿಂಟಲ್‌ ಆ್ಯಪಲ್‌ ಬಾರಿ ಉತ್ಪಾದಿಸಿದ ರುದ್ರಗೌಡರು ಕ್ವಿಂಟಲ್‌ಗೆ 3 ಸಾವಿರ ರೂ. ಮೊತ್ತದಲ್ಲಿ ಲಾಭ ಗಿಟ್ಟಿಸಿದ್ದಾರೆ. ಇನ್ನೂ 5, 6 ಕ್ವಿಂಟಲ್‌ ಬಾರಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.ಜತೆಗೆ 1.16 ಎಕರೆ ಹೊಲದಲ್ಲಿ ಬೆಳೆಸಿದ 330 ಪೇರಲ ಗಿಡಗಳು ಫಲ ನೀಡುವ ಹಂತಕ್ಕೆ ಬಂದಿವೆ. ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಕೃಷಿ ಮಾಡಲು ತೋಟಗಾರಿಕೆ ಸಹಾಯಕ ನಿರ್ದೇಶಕ ಆನಂದ ನರಸನ್ನವರ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮುಂತಾದವರುಸಹಕಾರ ನೀಡಿದ್ದಾರೆಂದು ರೈತ ರುದ್ರಗೌಡ ಲಿಂಗನಗೌಡ್ರ ಸ್ಮರಿಸುತ್ತಾರೆ.

ಮಿಶ್ರ ತಳಿ ಬೆಳೆ:  ಬಾರಿ ಹಣ್ಣು ತೋಟದಲ್ಲೇ ಮಿಶ್ರತಳಿ ಬೆಳೆಸಿದ ರುದ್ರಗೌಡರು ಒಂದು ಎಕರೆ ಪ್ರದೇಶದಲ್ಲೇ 200 ನುಗ್ಗೆ, 200 ಕರಿಬೇವು, 25 ಹುಣಸಿ, 20 ಸೀತಾ ಪೇರಲ, 200 ರಕ್ತ ಚಂದನ, ಔಷಧಿಯುಕ್ತ ರಾಮಫಲ, ಲಕ್ಷ್ಮಣಫಲ, ಹನುಮಫಲ ತಲಾ 5 ಸಸಿಗಳನ್ನೂ ಬೆಳೆಸಿದ್ದಾರೆ.

ಚಿಕ್ಕಪ್ಪನ ಪ್ರೇರಣೆಯಿಂದ ಬೆಳೆದಿರುವ ಆ್ಯಪಲ್‌ ಬಾರಿಗೆ ಬೇಡಿಕೆಯಿದೆ. ಈಗಾಗಲೇ ಫಸಲು ದೊರೆಯುತ್ತಿದೆ. ಅತಿ ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಬೆಳೆ ತೆಗೆಯುವ ಉದ್ದೇಶ ಹೊಂದಿದ್ದೇನೆ. ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಹಕಾರ ದೊಡ್ಡದು.-ರುದ್ರಗೌಡ ಲಿಂಗನಗೌಡ್ರ, ಯುವ ರೈತ

 

-ಸಿದ್ಧಲಿಂಗಯ್ಯ ಮಣ್ಣೂರಮಠ

 

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಕಾರ್ಗಿಲ್ ವಿಜಯೋತ್ಸವವನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು: ಬಸಲಿಂಗಪ್ಪ ಮುಂಡರಗಿ

Gadag; ಕಾರ್ಗಿಲ್ ವಿಜಯೋತ್ಸವವನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು: ಬಸಲಿಂಗಪ್ಪ ಮುಂಡರಗಿ

ಡಂಬಳ:ಕಳೆ ತೆರವಿಗೆ ಸೈಕಲ್‌ ವೀಡರ್‌ ನೆರವು-ಹೆಚ್ಚಳವಾದ ಬೇಡಿಕೆ

ಡಂಬಳ:ಕಳೆ ತೆರವಿಗೆ ಸೈಕಲ್‌ ವೀಡರ್‌ ನೆರವು-ಹೆಚ್ಚಳವಾದ ಬೇಡಿಕೆ

ಗದಗ: ಏಕೀಕರಣ ಚಳವಳಿಗೆ ಹೊಸ ರೂಪ ನೀಡಿದ ವೆಂಕಟರಾಯರು-ಬಿ.ಎಲ್‌. ಪತ್ತಾರ

ಗದಗ: ಏಕೀಕರಣ ಚಳವಳಿಗೆ ಹೊಸ ರೂಪ ನೀಡಿದ ವೆಂಕಟರಾಯರು-ಬಿ.ಎಲ್‌. ಪತ್ತಾರ

ಗದಗ: ಬಿಪಿಸಿಎಲ್‌ ಕಾಮಗಾರಿ ಬಗ್ಗೆ ಹಲವು ದೂರು

ಗದಗ: ಬಿಪಿಸಿಎಲ್‌ ಕಾಮಗಾರಿ ಬಗ್ಗೆ ಹಲವು ದೂರು

ಲಕ್ಷ್ಮೇಶ್ವರ: ಹೆಸರಿಗೆ ಕೊಂಬಿನ ಹುಳು ಕೀಟಬಾಧೆ

ಲಕ್ಷ್ಮೇಶ್ವರ: ಹೆಸರಿಗೆ ಕೊಂಬಿನ ಹುಳು ಕೀಟಬಾಧೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.