ಕೋವಿಡ್ ಸೋಂಕಿತರಿಂದ ಹೆಚ್ಚು ಹಣ ವಸೂಲಿ
Team Udayavani, Oct 2, 2020, 1:56 PM IST
ಹಾಸನ: ಕೋವಿಡ್ ಪರಿಸ್ಥಿತಿಯನ್ನು ಖಾಸಗಿ ಆಸ್ಪತ್ರೆಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು. ನಗರದ ಕೆ.ಆರ್.ಪುರಂನಲ್ಲಿರುವ ಜನಪ್ರಿಯ ಆಸ್ಪತ್ರೆಯ 7ನೇ ವರ್ಷಾಚರಣೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಉಚಿತ ವಿಮಾ ಯೋಜನೆ ಹಸ್ತಾಂತರ ಮತ್ತು ಕೋವಿಡ್ ಸಹಾಯವಾಣಿ ಬಿಡುಗಡೆ ಮಾಡಿ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಂದ ಹೆಚ್ಚಿ® ಹಣ ಪಡೆಯುತ್ತಿರುವ ಬಗ್ಗೆ ದೂರು ಬರುತ್ತಿವೆ. ಈ ಸಂಕಷ್ಟದ ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತವು ಕೆಲವು ಸೂಚನೆ ನೀಡಿದೆ. ಜಿಲ್ಲೆಯ 8 ಖಾಸಗಿ ಆಸ್ಪತ್ರೆಯಲ್ಲಿ 350 ಬೆಡ್ ಸೋಂಕಿತರಿಗೆ ಕಾಯ್ದಿರಿಸಲು ಹಾಗೂ ತೀವ್ರ ನಿಗಾ ಘಟಕದ 25 ಬೆಡ್ ಗಳು ಲಭ್ಯವಿರುವಂತೆ ಸೂಚನೆ ನೀಡ ಲಾಗಿದೆ. ಈ ನಿಟ್ಟಿ ನಲ್ಲಿ ಸರ್ಕಾರದ ಜೊತೆ ಖಾಯಂ ಆಗಿ ಆಸ್ಪತ್ರೆಗಳು ಕೂಡ ಕೈಜೋಡಿಸಿವೆ ಎಂದರು.
ಜನಪ್ರಿಯ ಆಸ್ಪತ್ರೆಯ ಸಿಇಒ ಡಾ. ಅಬ್ದುಲ್ ಬಷೀರ್ ಮಾತನಾಡಿ, 25 ಆಶಾ ಕಾರ್ಯಕರ್ತರಿಗಾಗಿ 25 ಲಕ್ಷ.ರೂ ನ ವಿಮಾ ಯೋಜನೆ ಮಾಡಿಸಲಾಗಿದೆ ಎಂದರು.
ಎಸಿ ಡಾ. ನವೀನ್ ಭಟ್, ಡಿಎಚ್ಒ ಡಾ. ಸತೀಶ್ ಕುಆಮರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಎಚ್.ಪಿ. ಮೋಹನ್, ವೈದ್ಯರಾದ ಡಾ. ಹಾರೂನ್, ಡಾ. ಅನೂಪ್, ಡಾ. ಕಿರಣ್ಕುಮಾರ್, ಡಾ. ಚಂದನ್, ಡಾ. ಲಿಂಗರಾಜು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ