ಕಾಂಗ್ರೆಸ್ ದಲಿತರನ್ನು ತುಳಿಯುವ ಪಕ್ಷ
ಇಎಸ್ಐ ಕೇವಲ ತೋರಿಕೆಗಾಗಿ ಕಟ್ಟಿದ್ದು ಅಭಿವೃದ್ಧಿ ಮಾಡದವರನ್ನು ಬೆಂಬಲಿಸಬೇಡಿ
Team Udayavani, Apr 11, 2019, 12:36 PM IST
ಸೇಡಂ: ಮುಧೋಳ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ದಲಿತರ ಸಮಾವೇಶವನ್ನು ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ ಉದ್ಘಾಟಿಸಿದರು.
ಸೇಡಂ: ಕಾಂಗ್ರೆಸ್ ಪಕ್ಷದಲ್ಲಿ ಏನೂ ಸರಿಯಿಲ್ಲ. ಅಲ್ಲಿ ದಲಿತರ ಏಳ್ಗೆ ಅಸಾಧ್ಯ.
ಅದೊಂದು ದಲಿತರನ್ನು ತುಳಿಯುವ ಪಕ್ಷವಾಗಿದೆ ಎಂದು ರಾಜ್ಯ ಸರ್ಕಾರದ
ನಿವೃತ್ತ ಮುಖ್ಯ ಕಾರ್ಯದರ್ಶಿ, ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ
ಹೇಳಿದರು.
ತಾಲೂಕಿನ ಮುಧೋಳ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ
ದಲಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಾರು ವರ್ಷಗಳು ಕಳೆದರೂ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ. ಚರಂಡಿ, ರಸ್ತೆಗಳು ನಿರ್ಮಾಣವಾಗಿಲ್ಲ.
ಸಮಸ್ಯೆಗಳ ಸುಳಿಯಲ್ಲೇ ಜನ ಜೀವನ ದೂಡುತ್ತಿದ್ದಾರೆ. ಈಗಲಾದರೂ
ಜನ ಎಚ್ಚೆತ್ತುಕೊಳ್ಳಬೇಕು. ಅನೇಕ ವರ್ಷಗಳ ಕಾಲ ಅ ಧಿಕಾರ ಕೊಟ್ಟಾಗ
ಅಭಿವೃದ್ಧಿ ಮಾಡದವರನ್ನು ಬೆಂಬಲಿಸುವುದು ಬಿಟ್ಟು, ಹೊಸಬರಿಗೆ
ಅವಕಾಶ ಕಲ್ಪಿಸಬೇಕು ಎನ್ನುವ ಮೂಲಕ ಡಾ| ಮಲ್ಲಿಕಾರ್ಜುನ
ಖರ್ಗೆ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಮತದಾರರಿಗೆ ಮತವೇ ಬಹುದೊಡ್ಡ ಆಯುಧ, ಅದರ ಸದ್ಬಳಕೆಯಾಗಬೇಕು. ಮತದಾರರು ಜಾಗೃತರಾಗಿ ಮತ ಚಲಾಯಿಸಬೇಕು. ನಾನು ಬಿಜೆಪಿಗೆ ಬರಲು ಪ್ರಮುಖ ಕಾರಣ ಡಾ| ಉಮೇಶ ಜಾಧವ ಎಂದು ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಮಾತನಾಡಿ, ದೇಶದ ಹೊರಗಿನಿಂದ ಪಾಕಿಸ್ತಾನ್ ಮತ್ತು ಒಳಗಿನಿಂದ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಹೊರತುಪಡಿಸಿದರೆ ಪ್ರಧಾನಿ ಮೋದಿ ಅವರನ್ನು ವಿರೋಧಿಸುವವರೇ ಇಲ್ಲ. ಖರ್ಗೆ ತಮ್ಮ ಮಗನಿಗಾಗಿ ಅನೇಕ
ಮುಖಂಡರನ್ನು ಹೊರಹಾಕಿದ್ದಾರೆ ಎಂದು ಹೇಳಿದರು.
ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ
ಮಾತನಾಡಿ, ಕಲಬುರಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ 10 ಸಾವಿರ ಕೋಟಿ
ರೂ. ವೆಚ್ಚದ ಇಎಸ್ಐಸಿ ಆಸ್ಪತ್ರೆ ಕೇವಲ ತೋರಿಕೆಗಾಗಿ ಖರ್ಗೆ ಕಟ್ಟಿಸಿದ್ದಾರೆ. ಅಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ. ನಮಗೆ ಅವಕಾಶ ಕೊಡಿ ದೇಶದಲ್ಲೇ ನಂ.1 ಆಸ್ಪತ್ರೆಯಾಗಿ ಮಾರ್ಪಾಡು ಮಾಡುತ್ತೇವೆ ಎಂದರು.
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಶಶಿಲ ನಮೋಶಿ,
ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಜಿಪಂ ಸದಸ್ಯ ಶರಣು ಮೆಡಿಕಲ್, ಡಾ| ಮಿಸ್ಕಿನ್, ವಿಕ್ರಂ ಪಾಟೀಲ, ಪರ್ವತರೆಡ್ಡಿ ಪಾಟೀಲ
ನಾಮವಾರ, ಡಾ| ಮಧುಸೂಧನರೆಡ್ಡಿ, ಭೀಮರಾಯ ಕೋಡ್ಲಾ,
ಕಲ್ಯಾಣಪ್ಪಗೌಡ ಪಾಟೀಲ, ಧರ್ಮಣ್ಣ ಇಟಗಾ, ನಾಗಪ್ಪ ಕೊಳ್ಳಿ, ವಿಶ್ವನಾಥರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್