ಕ್ಯಾಶ್‌ಲೆಸ್‌ ವ್ಯವಹಾರ ತಂದಿಟ್ಟ ಫಜೀತಿ


Team Udayavani, Feb 7, 2018, 12:01 PM IST

gul-5.jpg

ಕಲಬುರಗಿ: ಕೇಂದ್ರ ಸರಕಾರ ಪೆಟ್ರೋಲ್‌ ಸೇರಿದಂತೆ ಇತರೆ ಬೆಲೆ ಏರಿಕೆ ಮಾಡಿ ಜನರ ನಿದ್ದೆಗೆಡಿಸಿಲ್ಲ.. ಬದಲಿಗೆ ಕ್ಯಾಸ್‌ಲೆಸ್‌ ವ್ಯವಹಾರಕ್ಕೆ ಮುಂದಾಗುವಂತೆ ಬ್ಯಾಂಕ್‌ ಗಳ ಮೇಲೆ ಒತ್ತಡ ಹೇರುವ ಮೂಲಕ ಜನರಿಗೆ ಎಟಿಎಂಗಳಲ್ಲಿ ಹಣ ಸಿಗದಂತೆ ಮಾಡಿದೆ. ಇದರ ಪರಿಣಾಮ ಜನರು ಕಳೆದ 15 ದಿನಗಳಿಂದ ಎಟಿಎಂಗಳಿಂದ ಎಟಿಎಂಗಳಿಗೆ ಪರದಾಡುತ್ತಿದ್ದಾರೆ.

ದೇಶದಲ್ಲಿ ನೋಟು ಅಮಾನ್ಯಿಕರಣಗೊಂಡು ವರ್ಷ ಕಳೆದ ಮೇಲೂ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ ಎನ್ನುವುದಕ್ಕೆ ನಗರದಲ್ಲಿರುವ ಎಟಿಎಂಗಳು ಖಾಲಿ-ಖಾಲಿಯಾಗಿರುವುದು ತಾಜಾ ಉದಾಹರಣೆ. ಬ್ಯಾಂಕ್‌ಗಳ ಬಳಕೆ ಶುಲ್ಕದ ಕಿರಿಕಿರಿ, ವ್ಯವಹಾರದಲ್ಲಿ ಕಾರ್ಡ್‌ ಬಳಕೆಯ ತಂತ್ರಜ್ಞಾನದ ಕಿರಿಕಿರಿಯಿಂದಾಗಿ ಶೇ.60 ಜನರು ಬ್ಯಾಂಕ್‌ಗಳಲ್ಲಿ ಹಣವನ್ನು ಇಡುತ್ತಿಲ್ಲ. ಇದರಿಂದಾಗಿ ನೋಟುಗಳ ಕೊರತೆ ಕಂಡು ಬಂದಿದೆ ಎನ್ನಲಾಗುತ್ತಿದೆ. 

ಇನ್ನೊಂದೆಡೆ ಕ್ಯಾಸ್‌ಲೆಸ್‌ ವ್ಯವಾಹಾರಕ್ಕೆ ಹೆಚ್ಚು ಮುಂದಾಗುವಂತೆ ಎಲ್ಲ ಬ್ಯಾಂಕುಗಳ ಮೇಲೆ ಕೇಂದ್ರ ಸರಕಾರದ ಒತ್ತಡವಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ನೋಟುಗಳನ್ನು ಸಮಪರ್ಕ ಸರಬುರಾಜು ಮಾಡಲಾಗುತ್ತಿಲ್ಲ. ಇದರಿಂದಾಗಿ ಕಳೆದ 15 ದಿನಗಳಿಂದ ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲ. ಅದೂ ಅಲ್ಲದೆ, ಆರ್‌ಬಿಐ ಬೆಂಗಳೂರು ಮತ್ತು ಮೈಸೂರಿನಿಂದ ನೋಟುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 

ಇದರಿಂದಾಗಿ ಕಳೆದ 15 ದಿನಗಳಿಂದ ಒಂದೆರಡು ಬ್ಯಾಂಕ್‌ಗಳನ್ನು ಹೊರತು ಪಡಿಸಿ ಉಳಿದೆಲ್ಲ ಬ್ಯಾಂಕ್‌ಗಳ ಎಟಿಎಂಗಳು ಖಾಲಿಯಾಗಿದ್ದವು. ಇನ್ನೊಂದೆಡೆ ಕೆಲವು ಬ್ಯಾಂಕುಗಳು ಜನರಿಗೆ ಆಗುತ್ತಿರುವ ತೊಂದರೆಯಿಂದ ಮುಕ್ತ ಮಾಡಲು ಬ್ಯಾಂಕ್‌ ವ್ಯವಹಾರದಲ್ಲಿ ನೋಟುಗಳ ಬಳಕೆಯ ಬದಲು ಎಟಿಎಂಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿವೆ. ಇದೇ ವೇಳೆ ಹಳ್ಳಿಗಳಿಂದ ಜನರು ಪಟ್ಟಣ ಪ್ರದೇಶಗಳಗಿಗೆ ನೋಟಿಗಾಗಿ ಬರುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಗ್ರಾಮೀಣ ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸಾಕಾಗುತ್ತಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

ಬ್ಯಾಂಕ್‌ಗಳಲ್ಲಿರುವ ಉಳಿತಾಯ ಖಾತೆ, ಸಂಬಳದ ಖಾತೆಯ ಗ್ರಾಹಕರು, ತಿಂಗಳಿಗೊಮ್ಮೆ ಒಂದೇ ಕಾಲಕ್ಕೆ ಹೆಚ್ಚು ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿದ್ದಾರೆ. ಪುನಃ ಆ ಹಣ ಬಳಕೆ ಬರುವುದು ತಡವಾಗುತ್ತಿದೆ. ಇದರಿಂದಾಗಿ ದೈನಂದಿನ ವ್ಯವಹಾರಕ್ಕೆ ನೋಟುಗಳ ಕೊರತೆ ಉಂಟಾಗಿದೆ. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರ್‌ಬಿಐಗೆ ಪತ್ರ ಬರೆಯಲಾಗಿದೆ ಎಂದು ಬ್ಯಾಂಕಿನ ಅಧಿಕಾರಿ ವಿವರಿಸಿದರು.

ಅಗತ್ಯ ವಸ್ತುಗಳಿಗಿಲ್ಲ ಶುಲ್ಕ ಜನರು ಅನಗತ್ಯ ಭಯ ಪಡುತ್ತಿದ್ದಾರೆ. ಸರಕಾರ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಒತ್ತಾಯಿಸುವುದು ಸರಿಯಷ್ಟೇ. ಆದರೆ, ಅಗತ್ಯ ಪೂರಕ ಕ್ರಮ ಕೈಗೊಳ್ಳಬೇಕು. ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡುವ ಐಶಾರಾಮಿ ವಸ್ತುಗಳಿಗೆ ಶೇ. 1ರಿಂದ ಹಿಡಿದು 2ರಷ್ಟು ಸೇವಾ ಶುಲ್ಕ ಹೇರಲಾಗುತ್ತಿದೆ. ಆದರೆ, ಜೀವನಾವಶ್ಯಕ ವಸ್ತುಗಳ ಮೇಲೆ ಇಲ್ಲ. ಜನರಿಗೆ ತಪ್ಪು ಕಲ್ಪನೆ ಇದೆ. ನಮ್ಮ ಬಿಗ್‌ ಬಜಾರ್‌ನಲ್ಲಿ ನಾವು ಯಾವುದೇ ಸೇವಾ ಶುಲ್ಕ ಹಾಕುತ್ತಿಲ್ಲ. ದಿನಸಿ, ಔಷಧ, ಗೃಹ ಬಳಕೆ ಮತ್ತು ದೈನಂದಿನ ಬಳಕೆ ವಸ್ತುಗಳಿಗೆ ಶುಲ್ಕವಿಲ್ಲ. ಜನರು ಹೆಚ್ಚು ಹೆಚ್ಚು ಕಾರ್ಡುಗಳನ್ನು ಬಳಕೆ ಮಾಡುವುದು ಒಳಿತು.
 ಚೆನ್ನಪ್ಪ, ವ್ಯವಸ್ಥಾಪಕರು ಬಿಗ್‌ಬಜಾರ್‌

ಶೇ.60 ಜನರಿಗೆ ಗೊತ್ತೇ ಇಲ್ಲ ಕ್ಯಾಸ್‌ಲೆಸ್‌ ವ್ಯವಹಾರಕ್ಕೆ ಒತ್ತು ನೀಡುತ್ತಿರುವುದು ಗೊಂದಲಕಾರಿಯಾಗಿದೆ. ಈ ಕುರಿತು ಜನರಿಗೆ ತಿಳಿವಳಿಕೆ ಇಲ್ಲ. ಕಾರು, ಬೈಕು, ಟಿವಿ, ಸೋಫಾ ಖರೀದಿಗೆ ಶೇ. 1ರಷ್ಟು ಸೇವಾ ಶುಲ್ಕವನ್ನು ಹೇರಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿರುವ ನೋಟುಗಳನ್ನು ಏಕ ಕಾಲಕ್ಕೆ ಡ್ರಾ ಮಾಡಿಕೊಂಡು ಮನೆಯಲ್ಲಿಟ್ಟುಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಇನ್ನೂ ಕಳೆದ 15 ದಿಗನಳಿಂದ ಎಟಿಎಂಗಳಲ್ಲಿ ಹಣವಿಲ್ಲ. ಜನರಿಗೆ ತೊಂದರೆಯಾಗುತ್ತಿದೆ. ಮೋದಿ ಅವರ ಅಚ್ಛೆ ದಿನ್‌ ಒಂದು ವರ್ಷದ ಬಳಿಕವೂ ಕಾಡುತ್ತಿರುವುದು ವಿಪರ್ಯಾಸದ ಸಂಗತಿ.
 ಅಲಿಸಾಬ್‌, ಸಿಪಿಐ ಪಕ್ಷದ ಸದಸ್ಯರು.

„ಸೂರ್ಯಕಾಂತ ಜಮಾದಾರ

ಟಾಪ್ ನ್ಯೂಸ್

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.