ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚಿರತೆ ಮರಿ ಪ್ರತ್ಯಕ್ಷ : ಜನರಲ್ಲಿ ಆತಂಕ
Team Udayavani, May 14, 2022, 4:09 PM IST
ಕಲಬುರಗಿ : ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಚಿರತೆ ಮರಿಯೊಂದು ಓಡಿ ಹೋಗಿರುವುದು ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಎಸಿಎಫ್. ಸುನೀಲ್ ಚವ್ಹಾಣ,ಕುಂಚಾವರಂ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಾರೂಢ, ನಟರಾಜ, ಇತರ ಅರಣ್ಯ ಸಿಬ್ಬಂದಿಗಳು ಚಿರತೆ ಮರಿಯನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಚಿರತೆ ಮರಿ ಓಡಾಟದಿಂದ ಹೆದರಿದ ಪಟೇಲ್ ಕಾಲೋನಿಯ ನಿವಾಸಿಗಳು ಮನೆಯಿಂದ ಹೊರ ಬರದೇ ಮನೆಯೊಳಗೇ ಇರಬೇಕಾಗಿದೆ.
ಇದನ್ನೂ ಓದಿ :ವಿಜಯನಗರ ಜಿಲ್ಲಾಸ್ಪತ್ರೆ ಎಡವಟ್ಟು; ಬಾಣಂತಿಯರ ಶಸ್ತ್ರಚಿಕಿತ್ಸೆ ಹೊಲಿಗೆ ಬಿಚ್ಚಿ ಕೀವು!