![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ನೇಕಾರರೇ ಸಂಘಟಿತರಾಗಿ
Team Udayavani, Apr 15, 2017, 3:43 PM IST
![gul1.jpg](https://www.udayavani.com/wp-content/uploads/2017/04/15/gul1.jpg)
ಕಾಳಗಿ: ನೇಕಾರ ಸಮುದಾಯದ ಜನರು ಸಂಘಟಿತರಾಗಿ ಕುಲಕಸುಬಿನಲ್ಲಿ ತೊಡಗಿದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತಿ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಹೇಳಿದರು.
ನಗರದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜವಳಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ನೇಕಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಯ ದಿನಗಳಲ್ಲಿ ಕೇಂದ್ರ ಸರ್ಕಾರ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ನೇಕಾರರ ಗಣತಿ ಮಾಡಲು ಆದೇಶಿಸಿದ್ದಾರೆ ಎಂದರು.
ಗಣತಿ ನಂತರ ಕೇಂದ್ರ ಸರ್ಕಾರ ನೂತನ ಯೋಜನೆಗಳನ್ನು ಜಾರಿಗೆ ತಂದು ನೇಕಾರರ ಅಭಿವೃದ್ಧಿಗೆ ಶ್ರಮಿಸಲಿದೆ. ಸರ್ಕಾರದಿಂದ ದೊರೆಯುವ ಯೋಜನೆಗಳ ಲಾಭ ಪಡೆಯಬೇಕಾದರೆ ನೇಕಾರರು ಸಹಕಾರಿ ಸಂಘಗಳನ್ನು ರಚನೆ ಮಾಡಿಕೊಂಡರೆ ಉತ್ತಮ ಎಂದರು.
ಜವಳಿ ಇಲಾಖೆ ಜಿಲ್ಲಾ ನಿರ್ದೇಶಕ ಶಿವರಾಜ ಕುಲಕರ್ಣಿ ಮಾತನಾಡಿ, ನೇಕಾರರು ಈಗ ಮೊದಲಿನಂತೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಬಟ್ಟೆಗಳನ್ನು ನೇಯುವುದಕ್ಕಾಗಿ ವಿದ್ಯುತ್ ಚಾಲಿತ ಮಗ್ಗಗಳು ಬಂದಿವೆ. ಮಹಿಳೆ ಅಥವಾ ಪುರುಷರು ಯಾರಾದರೂ ಆರಾಮವಾಗಿ ಕಡಿಮೆ ಅವಧಿಧಿಯಲ್ಲಿ ಹೆಚ್ಚಿನ ಬಟ್ಟೆ ನೇಯಬಹುದು ಎಂದು ಹೇಳಿದರು.
ಜಯಚಂದ್ರ ಸಜ್ಜನ ಮಾತನಾಡಿ, ಜವಳಿ ಇಲಾಖೆಯಿಂದ ನೇಕಾರರಿಗೆ ಸಿಗುವ ವಿವಿಧ ಸಬ್ಸಿಡಿಗಳ ಕುರಿತು ಮಾಹಿತಿ ನೀಡಿದರು. ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಹಣಮಂತ ಕಣ್ಣಿ, ಹನುಮಂತಪ್ಪ ಕಾಂತಿ ಮಾತನಾಡಿದರು.
ಶಂಕ್ರಯ್ಯಸ್ವಾಮಿ ದೇವಾಂಗ ಮಠ, ಬಾಲಚಂದ್ರ ಕಾಂತಿ, ಶಿವಾನಂದ ಸ್ವಾಮಿ, ವೀರೇಶ ಸಿಂಗಶೆಟ್ಟಿ, ಪಾಂಡುರಂಗ ಕಣ್ಣಿ, ಸುರೇಶ ಸಿಂಗಶೆಟ್ಟಿ, ಗಣಪತರಾವ ಸಿಂಗಶೆಟ್ಟಿ, ವಿಜಯಕುಮಾರ ಅಲ್ಲಾಪೂರ, ಗಣೇಶ ಸಿಂಗಶೆಟ್ಟಿ, ಚೌಡಪ್ಪ ಗುರಮಿಠಕಲ್, ವಿಠಲ ಗುರಮಿಠಕಲ್, ಶಶಿಕುಮಾರ ಟೆಂಗಳಿ, ಕಾಳು ಜಿಲ್ಲಿ ಇದ್ದರು.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![13-sedam](https://www.udayavani.com/wp-content/uploads/2024/07/13-sedam-150x90.jpg)
Sedam: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ಆರೋಪಿಗಳ ಬಂಧನಕ್ಕೆ ಆಗ್ರಹ
![1-sci](https://www.udayavani.com/wp-content/uploads/2024/07/1-sci-150x91.jpg)
Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ
![ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು](https://www.udayavani.com/wp-content/uploads/2024/07/chikk1-150x83.jpg)
Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು
![Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://www.udayavani.com/wp-content/uploads/2024/07/chittapura-1-150x84.jpg)
Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
![Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ](https://www.udayavani.com/wp-content/uploads/2024/07/chittapura-150x94.jpg)
Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.