ಜಮೀನು-ಮನೆ ನೀಡಿ ತಾಂಡಾ ಸ §ಳಾಂತರಿಸಲು ಮನವಿ
Team Udayavani, Jul 8, 2018, 10:58 AM IST
ಚಿಂಚೋಳಿ: ಅನೇಕ ತಲೆಮಾರಿನಿಂದ ನಾವು ಇಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ, ಜಮೀನು ಬಿಟ್ಟು ಅರಣ್ಯಪ್ರದೇಶದಿಂದ ಹೊರಗೆ ಹೋಗಲು ಆಗುವುದಿಲ್ಲ. ನಮ್ಮ ಆಸ್ತಿಗೆ ಸೂಕ್ತ ಪರಿಹಾರ ನೀಡಿ, ಸರಕಾರದಿಂದ ಜಮೀನು, ವಾಸಿಸಲು ಮನೆ ಕಟ್ಟಿಸಿಕೊಟ್ಟರೆ ಸ್ಥಳಾಂತರಗೊಳ್ಳುತ್ತೇವೆ ಎಂದು ಸೇರಿಭಿಕನಳ್ಳಿ ತಾಂಡಾದ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಸೇರಿಭಿಕನಳ್ಳಿ ತಾಂಡಾದಲ್ಲಿ ಶನಿವಾರ ವನ್ಯಜೀವಿ ಧಾಮ ಅರಣ್ಯ ಇಲಾಖೆಯಿಂದ ಏರ್ಪಡಿಸಿದ ಸೇರಿಭಿಕನಳ್ಳಿ ತಾಂಡಾ ಸ್ಥಳಾಂತರ ಕುರಿತು ಶಾಸಕ ಡಾ| ಉಮೇಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ತಾಂಡಾದ ಮುಖ್ಯಸ್ಥ ಧನಸಿಂಗ ರಾಠೊಡ ಮಾತನಾಡಿ, ತಾಂಡಾದಲ್ಲಿ ಒಟ್ಟು 68.16 ಎಕರೆ ಗುಂಟೆ ಪಟ್ಟಾ ಜಮೀನಿದೆ. 55 ಮನೆಗಳು, 260 ಜನಸಂಖ್ಯೆಯಿದೆ. 55 ಕುಟುಂಬಗಳು ಆಹಾರ ಪಡಿತರ ಚೀಟಿಯನ್ನು ಪಡೆದುಕೊಂಡಿವೆ. ಪ್ರತಿಯೊಂದು ಕುಟುಂಬಕ್ಕೆ ವಿಶೇಷ ಪ್ಯಾಕೇಜ್ನಡಿ 15ಲಕ್ಷ ರೂ. ನೀಡಬೇಕು. ಜಮೀನು ಇಲ್ಲದವರಿಗೆ ಜಮೀನು ಸರಕಾರದಿಂದ ಕೊಡಿಸಬೇಕು. ಪ್ರತಿ ಎಕರೆಗೆ 7ಲಕ್ಷ ರೂ.ನೀಡಬೇಕು. ವಾಸಿಸುವುದಕ್ಕಾಗಿ ಮನೆ ನಿರ್ಮಿಸಿಕೊಡಬೇಕು. ಜಮೀನುಗಳಲ್ಲಿ ಬೋರವೆಲ್ ಕೊರೆಯಿಸಿ ವಿದ್ಯುತ್ ಸಂಪರ್ಕ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಶಾಸಕ ಡಾ| ಉಮೇಶ ಜಾಧವ ತಾಂಡಾ ಜನರ ಅಭಿಪ್ರಾಯ ಆಲಿಸಿ, ಬೇಕಾಗುವ ಸೌಲಭ್ಯ, ಬೇಡಿಕೆ, ಆಸ್ತಿಪಾಸ್ತಿ ಬಗ್ಗೆ ಪರಿಹಾರ ನಿಗದಿಪಡಿಸಿ ಒಮ್ಮತದಿಂದ ಎಲ್ಲರೂ ತಿಳಿಸಿದರೆ ನಾನು ಸರಕಾರದ ಗಮನ ಸೆಳೆದು ಹೆಚ್ಚಿನ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಜಮೀನು ಕಳೆದುಕೊಂಡವರಿಗೆ ಚಿಮ್ಮಾಇದಲಾಯಿ, ಐನೋಳಿ, ಭೋಗಾಲಿಂಗದಳ್ಳಿ ಗ್ರಾಮಗಳ ಸುತ್ತಮುತ್ತ ಜಮೀನು ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅರಣ್ಯ ಇಲಾಖೆ ತೆಗೆದುಕೊಳ್ಳುವ ನಿಯಮಗಳಿಗೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.
ತಾಂಡಾದ ಮುಖ್ಯಸ್ಥರಾದ ಗೋಪಾಲ ಜಾಧವ, ಮನ್ನುಸಿಂಗ್ ರಾಠೊಡ, ರಾಮಶೆಟ್ಟಿ ರಾಠೊಡ, ಶಂಕರ,ಲಿಂಬಾಜಿ, ಅಶೋಕ ಚವ್ಹಾಣ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಡಿಎಫ್ಒ ಶಿವಶಂಕರ, ಎಸಿಎಫ್ ರಾಮಕೃಷ್ಣ ಯಾದವ್, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ,ಆರ್ಎಫ್ಒ ಸುನೀಲ ಚವ್ಹಾಣ, ತಹಶೀಲ್ದಾರ್ ಪಂಡಿತರಾವ್ ಬಿರಾದಾರ, ತಾಪಂ ಅಧಿಕಾರಿ ಮಹಮ್ಮದ ಮೈನೋದ್ದೀನ್ ಪಟಲಿಕರ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಸಂಜೀವ ಚವ್ಹಾಣ ಇನ್ನಿತರರು ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಸಿದ್ದಾರೂಢ ವಂದಿಸಿದರು. ತಾಂಡಾದ ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ