ಚಿನ್ನಕ್ಕಿಂತ ಅನ್ನ-ನೀರು ಮುಖ್ಯ
Team Udayavani, May 4, 2019, 3:53 PM IST
ಸಿರುಗುಪ್ಪ: ಜೀವನದಲ್ಲಿ ಮಾನ ಉಳಿಸಲು ಒಳ್ಳೆಯ ಮಾತುಗಳು, ಪ್ರಾಣ ಉಳಿಸಲು ನೀರು ಬೇಕು. ಹಸಿವಾದಾಗ, ಬಾಯಾರಿದಾಗ ನಮಗೆ ಬಂಗಾರ, ವಜ್ರ, ವೈಡೂರ್ಯಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಚೀಕಲಕಪರ್ವಿ ಮಠದ ರುದ್ರಮುನಿ ಸ್ವಾಮಿಗಳು ಹೇಳಿದರು.
ತಾಲೂಕಿನ ಹೆರಕಲ್ಲು ಬಳಗನೂರು ಮರಿ ಶಿವಯೋಗಿಗಳ ಮಠದಲ್ಲಿ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಆಹಾರ ಮತ್ತು ನೀರಿನ ಸೇವನೆಯಿಂದ ಮಾತ್ರ ಹಸಿವು ನೀಗುತ್ತದೆ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನ್ನ, ನೀರು, ಸುಭಾಷಿತ ಈ ಮೂರು ಅಂಶ ಅಳವಡಿಸಿಕೊಳ್ಳಬೇಕು. ಬಂಗಾರದಂತಹ ಲೋಹದ ಮೇಲೆ ವ್ಯಾಮೋಹಗೊಳ್ಳದೇ ನಮ್ಮ ಬದುಕನ್ನೇ ಬಂಗಾರ ಮಾಡಿಕೊಳ್ಳುವತ್ತ ಗಮನ ನೀಡಬೇಕು ಎಂದರು.
ಸಮಾಜದಲ್ಲಿ ಯಾವ ರೀತಿ ಬಾಳಬೇಕು. ಗುರು ಹಿರಿಯರೊಂದಿಗೆ, ಮಾತ-ಪಿತೃಗಳಿಗೆ ಹೇಗೆ ಗೌರವ ನೀಡಬೇಕೆಂದು ತಿಳಿಸಿಕೊಡುವುದೇ ಪುರಾಣ ಪ್ರವಚನಗಳು. ಹಾಲ್ವಿಯ ಮಹಾಂತ ಸ್ವಾಮಿಗಳು ಮೂರು ವರ್ಷದ 6 ತಿಂಗಳ ಕಾಲ ಬಸವ ಪುರಾಣ ಹೇಳಿಸುವ ಮೂಲಕ 150 ವರ್ಷಗಳ ಹಿಂದೆಯೇ ಬಸವ ತತ್ವವನ್ನು ನಾಡಿನಾದ್ಯಂತ ಸಾರಿದರು. ಮನುಷ್ಯ ಮನುಷ್ಯರಾಗಿ ಬಾಳುವುದನ್ನು ಅನ್ನದಾಸೋಹ, ಅಕ್ಷರದಾಸೋಹ, ಮಾನಸಿಕ ನೆಮ್ಮದಿಯನ್ನು ಮಠಗಳು, ಸ್ವಾಮಿಗಳು ನೀಡುತ್ತಾ ಬಂದಿದ್ದಾರೆ. ಭಕ್ತರ ಕಷ್ಟ, ಸುಖಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಡುವ ಮಠದಲ್ಲಿನ ಜೀವಂತ ದೇವರುಗಳೆಂದರೆ ಸ್ವಾಮಿಗಳಾಗಿದ್ದಾರೆ ಎಂದು ತಿಳಿಸಿದರು. ಹಗರಿಬೊಮ್ಮನಹಳ್ಳಿಯ ಹಾಲ ಶಂಕರ ಮಠದ ಹಾಲ ಶಂಕರಸ್ವಾಮೀಜಿ, ಕುಷ್ಟಗಿಯ ಮದ್ದಾನ ಮಠದ ಕರಿಬಸವ ಸ್ವಾಮೀಜಿ, ಹೆರಕಲ್ಲಿನ ಮರಿಶಿವಯೋಗಿಗಳ ಮಠದ ಚಿದಾನಂದ ತಾತನವರು ಆಶೀರ್ವಚನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ