ಚಿನ್ನಕ್ಕಿಂತ ಅನ್ನ-ನೀರು ಮುಖ್ಯ


Team Udayavani, May 4, 2019, 3:53 PM IST

kopp-4

ಸಿರುಗುಪ್ಪ: ಜೀವನದಲ್ಲಿ ಮಾನ ಉಳಿಸಲು ಒಳ್ಳೆಯ ಮಾತುಗಳು, ಪ್ರಾಣ ಉಳಿಸಲು ನೀರು ಬೇಕು. ಹಸಿವಾದಾಗ, ಬಾಯಾರಿದಾಗ ನಮಗೆ ಬಂಗಾರ, ವಜ್ರ, ವೈಡೂರ್ಯಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಚೀಕಲಕಪರ್ವಿ ಮಠದ ರುದ್ರಮುನಿ ಸ್ವಾಮಿಗಳು ಹೇಳಿದರು.

ತಾಲೂಕಿನ ಹೆರಕಲ್ಲು ಬಳಗನೂರು ಮರಿ ಶಿವಯೋಗಿಗಳ ಮಠದಲ್ಲಿ ನಡೆದ‌ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಆಹಾರ ಮತ್ತು ನೀರಿನ ಸೇವನೆಯಿಂದ ಮಾತ್ರ ಹಸಿವು ನೀಗುತ್ತದೆ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನ್ನ, ನೀರು, ಸುಭಾಷಿತ ಈ ಮೂರು ಅಂಶ ಅಳವಡಿಸಿಕೊಳ್ಳಬೇಕು. ಬಂಗಾರದಂತಹ ಲೋಹದ ಮೇಲೆ ವ್ಯಾಮೋಹಗೊಳ್ಳದೇ ನಮ್ಮ ಬದುಕನ್ನೇ ಬಂಗಾರ ಮಾಡಿಕೊಳ್ಳುವತ್ತ ಗಮನ ನೀಡಬೇಕು ಎಂದರು.

ಸಮಾಜದಲ್ಲಿ ಯಾವ ರೀತಿ ಬಾಳಬೇಕು. ಗುರು ಹಿರಿಯರೊಂದಿಗೆ, ಮಾತ-ಪಿತೃಗಳಿಗೆ ಹೇಗೆ ಗೌರವ ನೀಡಬೇಕೆಂದು ತಿಳಿಸಿಕೊಡುವುದೇ ಪುರಾಣ ಪ್ರವಚನಗಳು. ಹಾಲ್ವಿಯ ಮಹಾಂತ ಸ್ವಾಮಿಗಳು ಮೂರು ವರ್ಷದ 6 ತಿಂಗಳ ಕಾಲ ಬಸವ ಪುರಾಣ ಹೇಳಿಸುವ ಮೂಲಕ 150 ವರ್ಷಗಳ ಹಿಂದೆಯೇ ಬಸವ ತತ್ವವನ್ನು ನಾಡಿನಾದ್ಯಂತ ಸಾರಿದರು. ಮನುಷ್ಯ ಮನುಷ್ಯರಾಗಿ ಬಾಳುವುದನ್ನು ಅನ್ನದಾಸೋಹ, ಅಕ್ಷರದಾಸೋಹ, ಮಾನಸಿಕ ನೆಮ್ಮದಿಯನ್ನು ಮಠಗಳು, ಸ್ವಾಮಿಗಳು ನೀಡುತ್ತಾ ಬಂದಿದ್ದಾರೆ. ಭಕ್ತರ ಕಷ್ಟ, ಸುಖಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಡುವ ಮಠದಲ್ಲಿನ ಜೀವಂತ ದೇವರುಗಳೆಂದರೆ ಸ್ವಾಮಿಗಳಾಗಿದ್ದಾರೆ ಎಂದು ತಿಳಿಸಿದರು. ಹಗರಿಬೊಮ್ಮನಹಳ್ಳಿಯ ಹಾಲ ಶಂಕರ ಮಠದ ಹಾಲ ಶಂಕರಸ್ವಾಮೀಜಿ, ಕುಷ್ಟಗಿಯ ಮದ್ದಾನ ಮಠದ ಕರಿಬಸವ ಸ್ವಾಮೀಜಿ, ಹೆರಕಲ್ಲಿನ ಮರಿಶಿವಯೋಗಿಗಳ ಮಠದ ಚಿದಾನಂದ ತಾತನವರು ಆಶೀರ್ವಚನ ನೀಡಿದರು.

ವಟುಗಳಿಗೆ ಅಯ್ನಾಚಾರ ದೀಕ್ಷೆ
ಸಿರುಗುಪ್ಪ: ನಾವು ಮಾಡಿರುವ ಜನ್ಮ ಜನ್ಮಗಳ ಪಾಪ ಪರಿಹಾರವಾಗಿ ಜನ್ಮದಿಂದಲೇ ಮಾನವರಿಗೆ ಅಂಟಿದ ಮಲತ್ರಯಾದಿ ದೋಷಗಳನ್ನು ತೊಡೆದು ಮಾಂಸ ಪಿಂಡವನ್ನು ಮಂತ್ರ ಪಿಂಡವನ್ನಾಗಿಸಿ ಜಂಗಮ ಮೂರ್ತಿಯನ್ನಾಗಿ ಮಾಡುವುದೇ ಅಯ್ನಾಚಾರ ದೀಕ್ಷೆಯ ಉದ್ದೇಶ ಎಂದು ಶಾನವಾಸಪುರ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಹಳೇಕೋಟೆ ಗ್ರಾಮದ ಬಳಗನೂರು ಮರಿಶಿವಯೋಗಿಗಳ ಮಠದಲ್ಲಿ 110ನೇ ಪುಣ್ಯಾರಾಧನೆ ಅಂಗವಾಗಿ ಜಂಗಮ ವಟುಗಳಿಗೆ ಅಯ್ನಾಚಾರ ದೀಕ್ಷೆ ನೀಡಿ ಪಂಚಾಕ್ಷರಿ ಶಿವಮಂತ್ರೋಪದೇಶ ನೀಡಿ, ಧರ್ಮೋಪದೇಶ ಮಾಡಿದ ಅವರು, ಯೋಗ್ಯ ಗುರುಗಳಿಂದ ಮಂತ್ರ ದೀಕ್ಷೆ ಪಡೆದ ವಟುಗಳು ಶಿವನ ಸ್ವರೂಪಿಗಳಾಗಿ ಲಿಂಗ, ಪಾದೋದಕ, ರುದ್ರಾಕ್ಷಿ, ಮಂತ್ರ, ಭಸ್ಮ ಸೇರಿದಂತೆ ಅಷ್ಟಾವರಣ, ಪಂಚಾವರ್ಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜಂಗಮ ಸಮಾಜದವರು ಪ್ರಾಚೀನ ಕಾಲದಿಂದಲೂ ಪರಂಪರೆಯಾಗಿ ಬಂದಿರುವ ದೀಕ್ಷೆಯನ್ನು ತಮ್ಮ ಮಕ್ಕಳಿಗೆ ನೀಡುವ ಮೂಲಕ ಧರ್ಮದ ಹಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು. ಸಿದ್ಧಬಸವ ಸ್ವಾಮೀಜಿ, ಚನ್ನಬಸಯ್ಯ ಶಾಸ್ತ್ರಿ ಇನ್ನಿತರರಿದ್ದರು.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.