![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಮಿತ ನೀರಿನ ಬಳಕೆೆ ಸಾಧನ ಅಳವಡಿಸಿಕೊಳ್ಳಿ
ಕೊಮ್ಮನಹಳ್ಳಿಯ ಬಾಳೆ ತೋಟದಲ್ಲಿ ವಾಟರ್ ಮ್ಯಾನೇಜ್ಮೆಂಟ್ ಸಿಸ್ಟ್ಂನಿಂದ ನೀರು, ವಿದ್ಯುತ್ ಉಳಿತಾಯದ ಪ್ರಾತ್ಯಕ್ಷಿಕೆ ಪ್ರದರ್ಶನ
Team Udayavani, May 15, 2019, 4:09 PM IST
![mandya-tdy-2..](https://www.udayavani.com/wp-content/uploads/2019/05/mandya-tdy-2..-4-620x272.jpg)
.ಆರ್.ಪೇಟೆ ರೋಬೋ ಮಂಜೇಗೌಡ ನೀರಿನ ಮಿತ ಬಳಕೆಗೆ ವಾಟರ್ ಮ್ಯಾನೇಜ್ಮೆಂಟ್ ಸಿಸ್ಟ್ಂ ಕಾರ್ಯನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೆ.ಆರ್.ಪೇಟೆ: ಮಳೆ ಪ್ರಮಾಣ ಇಳಿಮುಖ, ಅಂತರ್ಜಲ ಮಟ್ಟ ಕುಸಿತದಿಂದ ನೀರಿಗೆ ಹಾಹಾ ಕಾರವೆದ್ದಿರುವ ಈ ಸಂದರ್ಭದಲ್ಲಿ ರೋಬೋ ಮಂಜೇಗೌಡ ತೋಟಗಳಿಗೆ ನೀರನ್ನು ಮಿತವಾಗಿ ಬಳಸುವ ಹೊಸ ಆವಿಷ್ಕಾರ ಕಂಡು ಹಿಡಿದು ರೈತರಿಗೆ ಕೋಮನಹಳ್ಳಿಯ ತಮ್ಮ ತೋಟದಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಇಂದಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತ್ತಿದೆ. ಹಾಗಾಗಿ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದನ್ನು ರೂಢಿಸಿ ಕೊಳ್ಳಬೇಕು. ಹಾಗೆ ಪೋಲಾಗುವ ನೀರು ತಡೆಯುವ ಯಂತ್ರವನ್ನು ರೋಬೋ ಮಂಜೇಗೌಡ ಆವಿಷ್ಕರಿ ಸಿದ್ದು, ಇದು ರೈತರಿಗೆ ವರದಾನವಾಗಿದೆ. ಕೇವಲ ನಾಲ್ಕೈದು ಸಾವಿರ ರೂ.ಗಳಲ್ಲಿ ಈ ಯಂತ್ರ ತಯಾರಿಸಿ ಮಾರಾಟ ಮಾಡಬಹುದು. ಹನಿ ನೀರಾವರಿ ಪದ್ಧತಿ ಯನ್ನು ಅಳವಡಿಸಿಕೊಂಡಿರುವ ರೈತರು ತೋಟಗಳಿಗೆ ವಾಟರ್ ಮ್ಯಾನೇಜ್ಮೆಂಟ್ ಸಿಸ್ಟ್ಂ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರು ಪೋಲಾಗು ವುದನ್ನು ತಡೆಯಬಹುದು. ಜೊತೆಗೆ ವಿದ್ಯುತ್ ಬಿಲ್ ಹೊರೆಯೂ ಕಡಿಮೆ ಮಾಡಿಕೊಳ್ಳಬ ಹುದು ಎಂಬ ಬಗ್ಗೆ ಮಂಜೇಗೌಡ ಮಾಹಿತಿ ನೀಡಿದರು.
ಅಗತ್ಯವಿದ್ದಷ್ಟೇ ಬಳಕೆ: ಇಂದಿನ ದಿನಗಳಲ್ಲಿ ಬೇಸಾಯಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಬಳಸಿ ನೀರು ಪೋಲಾಗುತ್ತಿದೆ. ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಒಂದು ದಿನಕ್ಕೆ ಎಷ್ಟು ಲೀಟರ್ ನೀರಿನ ಅವಶ್ಯಕತೆ ಇದೆಯೋ ಅಷ್ಟು ನೀರಿನ ಪ್ರಮಾಣ ಯಂತ್ರದಲ್ಲಿ ಸೆಟ್ ಮಾಡಿದರೆ ಸಾಕು ನೀರಿನ ಗರಿಷ್ಠ ಪ್ರಮಾಣದ ನೀರಿನ ಸರಬರಾಜಾಗುತ್ತಿದ್ದಂತೆ ಮೋಟಾರ್ ಆಫ್ ಆಗುತ್ತದೆ. ಎಂದಿನಂತೆ ಹನಿ ನೀರಾವರಿ ಪದ್ಧತಿ ಸರಬರಾಜಾಗುವ ನೀರಿಗೆ ಮೋಟಾರ್ ಮೂರು ಗಂಟೆ ಕೆಲಸ ಮಾಡಿದರೆ ಈ ಯಂತ್ರದ ಮೂಲಕ ಎರಡು ಗಂಟೆ ಅವಧಿಯಲ್ಲಿ ನೀರು ಪೂರೈಕೆಯಾಗುತ್ತದೆ. ವ್ಯರ್ಥವಾಗಿ ಹರಿಯುವ ನೀರು ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಹೊಸಕೋಟೆಯ ಲಕ್ಷ್ಮೀದೇವಮ್ಮ, ಮುದುಗೆರೆ ರಾಜೇಗೌಡ, ಮೊಸಳೆಕೊಪ್ಪಲು ಬೋರೇಗೌಡ, ಸಿಂಧಘಟ್ಟ ಮುದ್ದುಕುಮಾರ್, ಕೆ.ಎಸ್.ಸೋಮಶೇಖರ್ ಸೇರಿದಂತೆ ವಿವಿಧ ತಾಲೂಕು ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ](https://www.udayavani.com/wp-content/uploads/2024/07/KRS-150x84.jpg)
KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ
KRS Dam: ಶೀಘ್ರ ಕೆಆರ್ಎಸ್ ಡ್ಯಾಂ ಭರ್ತಿ 92 ಗ್ರಾಮಗಳಲ್ಲಿ ಪ್ರವಾಹ ಭೀತಿ
![Cheluvaraya-swamy](https://www.udayavani.com/wp-content/uploads/2024/07/Cheluvaraya-swamy-150x90.jpg)
Cauvery Water: ಎಚ್ಡಿಕೆ ಕಾವೇರಿ ಸಮಸ್ಯೆ ಬಗೆಹರಿಸಿದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ
![HDK](https://www.udayavani.com/wp-content/uploads/2024/07/HDK-3-150x90.jpg)
Cauvery Water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್ಡಿಕೆ
![1-eee](https://www.udayavani.com/wp-content/uploads/2024/07/1-eee-150x82.jpg)
Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.